ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಪುನುರುತ್ಥಾನ ಶೃಂಗ ಸಭೆಯಲ್ಲಿ ವೀರಶೈವ ಒಂದು ಜಾಗತಿಕ ಪ್ರಜ್ಞೆ ಎಂಬ ವಿಷಯದ ಕುರಿತು ಆಶೀರ್ವಚನ ನೀಡಿದ ಅವರು, ಹಿಂದೂ ಧರ್ಮವು ಹಲವಾರು ಸಿದ್ಧಾಂತ, ಸಂಪ್ರದಾಯಗಳ ಸಮೂಹ ಸಂಸ್ಕೃತಿಯಾಗಿದ್ದು, ಇವುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ್ಮದಿಂದಲೇ ಆಯಾ ಸಂಪ್ರದಾಯಗಳನ್ನು ಪ್ರವೇಶಿಸಲು ಅವಕಾಶವಿದೆ. ಆದರೆ, ವೀರಶೈವ ಸಿದ್ಧಾಂತವು ಲಿಂಗದೀಕ್ಷೆ ಮೊದಲಾದ ಧರ್ಮ ಸಂಸ್ಕಾರಗಳನ್ನು ನೀಡುವಾಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಬಡವ, ಶ್ರೀಮಂತ, ಕರಿಯ, ಬಿಳಿಯ ಮತ್ತಿತರ ಯಾವುದೇ ಭೇದವನ್ನು ನೋಡದೇ ಸದ್ಗುಣ ಮತ್ತು ಸತ್ಕರ್ಮಗಳ ಆಧಾರದ ಮೇಲೆ ಎಲ್ಲರಿಗೂ ಅಧಿಕಾರವನ್ನು ನೀಡುವ ಮೂಲಕ ಧಾರ್ಮಿಕವಾಗಿ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದೆ ಎಂದರು.ಸಮ್ಮೇಳನದಲ್ಲಿ ಹರಿಹರಪುರ ಮಠದ ಶ್ರೀಸ್ವಯಂ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ತಿರುಚಿ ಶ್ರೀಗಳು ಸೇರಿದಂತೆ ಭಾರತದ 10 ಕ್ಕೂ ಹೆಚ್ಚಿನ ವಿವಿಧ ಸಂಪ್ರದಾಯದ ಮಠಾಧೀಶರು ಪಾಲ್ಗೊಂಡಿದ್ದರು. ಆದಿಶಕ್ತಿಯ ಕುರಿತು ಗ್ರೀಕ್ನಲ್ಲಿ ಚಿತ್ರ ನಿರ್ಮಾಣ
ತಂದೆಯ ದೇಹದಲ್ಲಿ ಒಂದಾಗಿದ್ದ ಮಗನನ್ನು ತಂದೆಯಿಂದ ಬೇರ್ಪಡಿಸಿದ ತಾಯಿ, ಮಗನಿಗೆ ತಂದೆಯನ್ನು ಪರಿಚಯಿಸಿ ಅವನೊಂದಿಗೆ ಸೇರಿಸುವಂತೆ ಶಿವನಿಂದ ಜೀವಿಗಳನ್ನು ಬೇರ್ಪಡಿಸಿದ ಶಕ್ತಿಯೇ ಕೊನೆಗೆ ಅವರನ್ನು ಶಿವನೊಂದಿಗೆ ಸೇರಿಸುವ ಕಾರ್ಯವನ್ನೂ ಮಾಡುತ್ತಾಳೆ. ಆದ್ದರಿಂದ ಅಧ್ಯಾತ್ಮದಲ್ಲಿ ಶಿವನಷ್ಟೇ ಶಕ್ತಿಗೂ ಪ್ರಾಧಾನ್ಯತೆ ಇದೆ. ಇಂತಹ ಆದಿಶಕ್ತಿಯ ಮಹಿಮೆಯನ್ನು ವಿಶ್ವದಾದ್ಯಂತ ಸಾರಲು ಗ್ರೀಸ್ ಸರ್ಕಾರ ಚಿತ್ರ ನಿರ್ಮಾಣಕ್ಕೆ ₹120 ಕೋಟಿ ಅನುದಾನ ನೀಡಲು ಮುಂದಾಗಿದೆ.ಆ ಕಾರ್ಯಕ್ಕೆ ಚಾಲನೆ ನೀಡಲು ಭಾರತದಿಂದ ಎಲ್ಲ ಸಂಪ್ರದಾಯದ ಸಂತರ ಸಮಾವೇಶ ಆಯೋಜಿಸಲಾಗಿತ್ತು. ಇದರಲ್ಲಿ ಹರಿಹರಪುರದ ಜಗದ್ಗುರು ಶಂಕರಾಚಾರ್ಯ ಸ್ವಯಂ ಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಬೆಂಗಳೂರು ಕೈಲಾಸಾಶ್ರಮದ ಮಹಾಮಂಡಲೇಶ್ವರ ಜಯೇಂದಪುರಿ ಸ್ವಾಮೀಜಿ, ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ದೆಹಲಿ ಅಕ್ಷರ ಧಾಮದ ಮಹಾಮಹೋಪಾಧ್ಯಾಯ ಭದ್ರೇಶದಾಸ ಸ್ವಾಮೀಜಿ, ದೆಹಲಿಯ ಆಚಾರ್ಯ ಡಾ.ಲೋಕೇಶ ಮುನಿಜೀ, ಪ್ರಯಾಗರಾಜ ನಿರ್ಮಲ ಅಖಾಡಾದ ಜ್ಞಾನಸಿಂಗ ಮಹಾರಾಜ, ಅಮೃತಸರದ ಸಹಜದೀಪ ಸಿಂಗ ಮಹಾರಾಜ ಮತ್ತು ಬೌದ್ಧ ಸಂಪ್ರದಾಯದ ಖೇಮಚಾರ ಭಿಕ್ಕುಜಿ ಇವರು ಇಭಿನ್ನ ವಿಷಯಗಳ ಮೇಲೆ ತಮ್ಮ ವಿಚಾರಗಳನ್ನು ಮಂಡಿಸಿದರು.ದೇವಿ ಮಹಾತ್ಮ್ಯ ಚಿತ್ರ ನಿರ್ಮಾಪಕ, ನಿರ್ದೇಶಕ ತಂಡದ ಮುಖ್ಯಸ್ಥರಾದ ಮನು ಕುಮಾರ, ಶಶಾಂಕ ಆಚಾರ್ಯ, ಅಭಿಷೇಕ ರುದ್ರಮೂರ್ತಿ, ಆಕಾಶ ವಿಶ್ವಾಮಿತ್ರ ಮುಂತಾದವರು ಉಪಸ್ಥಿತರಿದ್ದರು.-ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶ್ರೀಶೈಲ ಜಗದ್ಗುರು.