ನಮ್ಮ ನಿಸ್ವಾರ್ಥ ಬಳಗದ ತಂಡದಿಂದ ಪ್ರತಿ ತಿಂಗಳೂ ಸಮಾಜಸೇವೆ ಮಾಡುವ ಮೂಲಕ ಅದರಲ್ಲೂ ದೇವಸ್ಥಾನಗಳ ಸ್ವಚ್ಛತಾ ಕಾರ್ಯ, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ದಾಸೋಹ ವ್ಯವಸ್ಥೆ, ನಿರ್ಗತಿಕರಿಗೆ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇವೆ.
ಬೇಲೂರು: ನಿಸ್ವಾರ್ಥ ಗೆಳೆಯರ ಬಳಗವು ಮೂರು ವರ್ಷ ತುಂಬಿದ ಹಿನ್ನೆಲೆ ಬಳಗದ ವತಿಯಿಂದ ಶ್ರೀ ಚನ್ನಕೇಶವ ದೇಗುಲದ ದಾಸೋಹಕ್ಕೆ ತರಕಾರಿ ಮೂಟೆ ಹಾಗೂ ಅಕ್ಕಿ ದಿನಸಿ ಕಿಟ್ ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ನಿಸ್ವಾರ್ಥ ಗೆಳೆಯರ ಬಳಗದ ಅಧ್ಯಕ್ಷ ಆದೇಶ್, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಚನ್ನಕೇಶವ ದೇಗುಲಕ್ಕೆ ಅಕ್ಕಿ ದಿನಸಿ ಕಿಟ್ ಹಾಗೂ ತರಕಾರಿ ನೀಡುತ್ತಿದ್ದು, ನಮ್ಮ ತಂಡದ ಸಹಕಾರದೊಂದಿಗೆ ಈ ಬಳಗ ಮೂರು ವರ್ಷ ತುಂಬಿದೆ. ಅದರಂತೆ ನಾವು ಅನ್ನದಾಸೋಹ ಸೇವೆ ಇಟ್ಟುಕೊಂಡಿದ್ದು, ಮಳೆಯ ಕಾರಣ ಇವುಗಳನ್ನು ದೇಗುಲದ ನಿರ್ವಾಹಕ ಮದನ್ ಅವರಿಗೆ ವಿತರಿಸಿದ್ದೇವೆ ಎಂದರು. ನಮ್ಮ ನಿಸ್ವಾರ್ಥ ಬಳಗದ ತಂಡದಿಂದ ಪ್ರತಿ ತಿಂಗಳೂ ಸಮಾಜಸೇವೆ ಮಾಡುವ ಮೂಲಕ ಅದರಲ್ಲೂ ದೇವಸ್ಥಾನಗಳ ಸ್ವಚ್ಛತಾ ಕಾರ್ಯ, ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ, ದಾಸೋಹ ವ್ಯವಸ್ಥೆ, ನಿರ್ಗತಿಕರಿಗೆ ಕೈಲಾದ ಸೇವೆ ಮಾಡುತ್ತಾ ಬಂದಿದ್ದೇವೆ. ಇತ್ತೀಚೆಗೆ ನಮ್ಮ ಹೆಸರನ್ನು ಕೆಲವು ಕಡೆ ದುರ್ಬಳಕೆ ಮಾಡಿಕೊಂಡು ಬರುತ್ತಿದ್ದರು. ಅದಕ್ಕೆ ನಾವು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿರಲಿಲ್ಲ. ಈಗ ಅದರ ಸಮಸ್ಯೆ ಬಗೆಹರಿದಿದ್ದು ಇದಕ್ಕೆ ಸಹಕರಿಸಿ ನಮಗೆ ನ್ಯಾಯ ದೊರಕಿಸಿಕೊಟ್ಟ ನಮ್ಮ ತಂಡ ಹಾಗೂ ಪ್ರೋತ್ಸಾಹ ನೀಡಿದವರೆಲ್ಲರಿಗೂ ಧನ್ಯವಾದ ತಿಳಿಸಿದರು. ನಿಸ್ವಾರ್ಥ ಗೆಳೆಯರ ಬಳಗದ ರಾಜೇಶ್, ಕಾರ್ತಿಕ್, ಸುದರ್ಶನ್, ದೀಪಕ್ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.