ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹೭೩ ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದೆ.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕ್ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ₹೭೩ ಲಕ್ಷ ನಿವ್ವಳ ಲಾಭ ಗಳಿಸಿ ಉತ್ತಮ ಸಾಧನೆ ಮಾಡಿದೆ. ೧೧,೦೨೭ ಸದಸ್ಯರನ್ನು ಹೊಂದಿದ ನಮ್ಮ ಬ್ಯಾಂಕು ೯೮೯.೭೬ ಲಕ್ಷ ಶೇರು ಬಂಡವಾಳವನ್ನು ಹೊಂದಿದೆ. ಅಲ್ಲದೇ ₹೧೧೪೫.೮೩ ಲಕ್ಷ ಕಾಯ್ದಿಟ್ಟ ನಿಧಿಯನ್ನು ಇಟ್ಟಿದ್ದು, ₹೨೦೪೨೮.೯೮ ಲಕ್ಷ ಠೇವಣಿ ಹೊಂದಿದ್ದೇವೆ. ಕಳೆದ ಸಾಲಿಗಿಂತಲೂ ಶೇ.೧೩.೩೭ರಷ್ಟು ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮುರಳಿಕೃಷ್ಣ ಎಂ.ಹೆಗಡೆ ಹೇಳಿದರು.
ಸೋಮವಾರ ಪಟ್ಟಣದ ವಿಕಾಸ ಅರ್ಬನ್ ಕೋ ಆಪ್ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಬ್ಯಾಂಕಿನ ಪ್ರಗತಿಯ ಮಾಹಿತಿ ನೀಡಿದರು.
₹೧೬೯೯೩.೩೨ ಲಕ್ಷ ಸಾಲ ನೀಡಲಾಗಿದೆ. ₹೪೪೫೪.೯೫ ಲಕ್ಷಗಳನ್ನು ಗುಂತಾವಣೆ ಇಡಲಾಗಿದೆ. ವಿಶೇಷವಾಗಿ ₹೨೨೯೮೮.೮೨ ಲಕ್ಷ ದುಡಿಯುವ ಬಂಡವಾಳ ಹೊಂದಿದ್ದೇವೆ. ಸಾಲ ವಸೂಲಾತಿ ಪ್ರಮಾಣ ಕೂಡ ೯೨.೬೦, ಎನ್.ಪಿ.ಎ ಕೂಡ ೭.೨೭ರಷ್ಟಿದೆ ಎಂದು ವಿವರಿಸಿದರು.
ಯಲ್ಲಾಪುರದಲ್ಲಿ ಪ್ರಧಾನ ಕಚೇರಿ ಹೊಂದಿದ ನಮ್ಮ ಬ್ಯಾಂಕು ಪಟ್ಟಣದಲ್ಲಿ ೨ ಶಾಖೆಯನ್ನು, ಶಿರಸಿಯಲ್ಲಿ ಒಂದು ಶಾಖೆ ಹೊಂದಿದ್ದು, ರಿಸರ್ವ್ ಬ್ಯಾಂಕಿನ ನಿರ್ದೇಶನದಂತೆ ಕೋರ್ ಬ್ಯಾಂಕಿಂಗ್ ಎಲ್ಲ ಶಾಖೆಗಳಲ್ಲೂ ಅಳವಡಿಸಲಾಗಿದೆ. ಅಲ್ಲದೇ ಯುಟಿಲಿಟಿ ತಂತ್ರಾಂಶಗಳನ್ನು ಅಳವಡಿಸಿ, ಎ.ಟಿ.ಎಂ, ಸಿ.ಡಿ.ಎಂ, ಇ-ಕಾಮರ್ಸ್, ಪಿಓಎಸ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಡಿಜಿಟಲ್ ಸೇವೆ ನೀಡುತ್ತಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷ ನರಸಿಂಹ ಎಸ್.ಭಟ್ಟ, ನಿರ್ದೇಶಕರಾದ ಡಿ.ಶಂಕರ ಭಟ್ಟ, ಸದಾನಂದ ಭಟ್ಟ, ರಾಜೇಂದ್ರ ಬದ್ದಿ, ಲೋಕೇಶ ಗಿಡ್ಡನ್, ರವಿ ಹುಳಸೆ, ವಿಜಯಶ್ರೀ ವೈದ್ಯ, ಪ್ರಿಯಾ ಗಾಂವ್ಕರ ಮತ್ತು ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ ಬಿಳಗಿಕರ್ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.