ಬೆಳ್ತಂಗಡಿ: ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೂತನವಾಗಿ ನಿರ್ಮಾಣಗೊಂಡ ವಿಜಯಗೋಪುರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಲೋಕಾರ್ಪಣೆಗೊಳಿಸಿದರು.
ಧಾರ್ಮಿಕ ಉಪನ್ಯಾಸ ನೀಡಿದ ಸಾಂಸ್ಕೃತಿಕ ಚಿಂತಕ ದಾಮೋದರ ಶರ್ಮಾ ಅವರು ರಾಜಗೋಪುರ ಅಂದರೆ ಅದು ದೇವ ದೇವತೆಗಳಿಗೆ ಸ್ವಾಗತಕೋರುವ ಲಾಂಛನ. ಶ್ರೀ ವಿಷ್ಣುದೇವರ ಶಯನಾಸನದಂತೆ ಕಾಣುವಗೋಪುರಕ್ಕೆ ನಮಿಸಿದರೆ ಜನಾರ್ದನ ಸ್ವಾಮಿಗೆ ನಮಿಸಿದಂತೆಯೇ ಎಂದರು.
ವಿಜಯಗೋಪುರ ಲೋಕಾರ್ಪಣೆಗೆ ಆಗಮಿಸುವ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರು ಶ್ರೀ ಸಚ್ಚಿದಾನಂದ ಸ್ವಾಮೀಜಿಗಳು ರಥವನ್ನುಏರಿದ ನಂತರ ತಾವು ರಥವನ್ನುಏರಿದರು. ಇದರಲ್ಲೇ ಅವರು ಗುರುಪರಂಪರೆಗೆ ನೀಡುವ ಗೌರವ ಎಲ್ಲರಿಗೂ ತಿಳಿಯುತ್ತದೆ ಎಂದು ಹೇಳಿದರು.ದೈವದ ಮೇಲೆ ನಂಬಿಕೆ ಇಟ್ಟು ಶ್ರಮದೊಂದಿಗೆ ಮುಂದುವರಿದರೆ ದೇವರು ಆಶೀರ್ವಾದ ನೀಡುತ್ತಾರೆ ಎನ್ನುವುದು ಇಲ್ಲಿ ಸಾಬೀತಾಗಿದೆ. ಕಳೆದ ಒಂದು ವರ್ಷದಲ್ಲಿ ಪ್ರಾರಂಭವಾಗಿ ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡ ವಿಜಯಗೋಪುರ ಮತ್ತು ಪುನರ್ ಪ್ರತಿಷ್ಠೆಗೊಂಡ ದೇವಸ್ಥಾನ ಭಕ್ತರ ಶ್ರಮದಾನಕ್ಕೆ ಉತ್ತಮ ಉದಾಹರಣೆ ಎಂದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮದಲ್ಲಿ ಭಾಗವಹಿಸಿ
ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ಎಲ್ಲಾ ಧರ್ಮದವರು ಒಟ್ಟಾಗಿ ದೇವಸ್ಥಾನದ ಶ್ರಮದಾನದಲ್ಲಿ ಭಾಗವಹಿಸಿರುವುದು ಅಪೂರ್ವ ಸಂಗತಿ. ಭಕ್ತರ ಆಸಕ್ತಿಗೆ ನೀಡಲು ಬೇಕಾದಷ್ಟು ಕೆಲಸ ಇಲ್ಲಿರಲಿಲ್ಲ ಎಂಬುದು ವಿಶೇಷ” ಎಂದರು.
ವಾಸ್ತುತಜ್ಞ ರಮೇಶ್ ಕಾರಂತ್ ಬೆದ್ರಡ್ಕ, ಶಿಲ್ಪಿ ಕೃಷ್ಣಪ್ಪ ಚಾರ್ಮಾಡಿ, ರಮೇಶ್ ಲಾಯಿಲ, ಕಾಷ್ಠ ಶಿಲ್ಪಿ ಶಶಿಧರ ಆಚಾರ್ಯ, ಶೇಖರ. ಸೋಮೇಶ್ವರ, ಬಿ. ರಾಜ ಹೆಗ್ಡೆ, ವಿದ್ಯುತ್ ಗುತ್ತಿಗೆದಾರ ಲೋಕೇಶ್ ರೈ ಹಾಗೂ ಮಾತೃಶಕ್ತಿ ಶಿಲಾ ಸಂಚಯನ ಸಮಿತಿ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಅನುವಂಶಿಕ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೆಟ್ನಾಯರ್ ಸ್ವಾಗತಿಸಿದರು. ರಾಜಗೋಪುರ ನಿರ್ಮಾಣ ಸಮಿತಿ ಪ್ರಧಾನ ಕೋಶಾಧಿಕಾರಿ ರಾಜೇಶ್ ಪೈ ವಂದಿಸಿದರು. ಉಜಿರೆ ಎಸ್.ಡಿ.ಎಂ ಕಾಲೇಜು ಕುಲಸಚಿವ ಹಾಗೂ ಸಂಸ್ಕೃತ ಉಪನ್ಯಾಸಕ ಪ್ರೊ. ಶ್ರೀಧರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.