ಮಂಡ್ಯ:
ಶಿಕ್ಷಕಿ ಶೋಭ ಅವರು 1998 ಡಿಸೆಂಬರ್ 28 ಗ್ರಾಮಕ್ಕೆ ಪ್ರಾಥಮಿಕ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡು ಒಂದೂವರೆ ವರ್ಷಗಳ ಕಾಲ ಕೆಲಸ ನಿರ್ವಹಿಸಿ ಬಳಿಕ ಕಾರಸವಾಡಿ ಶಾಲೆಗೆ ವರ್ಗಾವಣೆಗೊಂಡು ಅಲ್ಲಿ 10 ವರ್ಷಗಳ ಸೇವೆಸಲ್ಲಿಸಿದ್ದರು.
ನಂತರ 2010 ಜುಲೈ 28 ರಂದು ಸಂತೆಕಸಲಗೆರೆ ಶಾಲೆಗೆ ಮತ್ತೆ ಆಗಮಿಸಿ ಸುಮಾರು 17 ವರ್ಷಗಳವರೆಗೆ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗದ್ದರು. ಗ್ರಾಮಸ್ಥರ ವಿಶ್ವಾಸಗಳಿಸಿ ಉತ್ತಮ ಸೇವೆ ಸಲ್ಲಿಸುತ್ತಿದ್ದರು.ಶೋಭಾ ಅವರು 2 ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದರು. ಶಿಕ್ಷಕರ ಪತ್ತಿನ ಸಹಾಕರ ಸಂಘದ ವತಿಯಿಂದಲು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಸಂಘ ಸಂಸ್ಥೆಗಳು ಆದರ್ಶ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದ್ದರು. ಶಿಕ್ಷಕ ವೃತ್ತಿ ಜೊತೆಗೆ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತದಲ್ಲಿ ಸೇವೆಸಲ್ಲಿಸುತ್ತಿದ್ದರು.
ಈ ವೇಳೆ ಮುಖ್ಯ ಶಿಕ್ಷಕಿ ಆಶಾಮಣಿ, ಶಿಕ್ಷಕರಾದ ಸಿಆರ್ ಪಿ ಕೊತ್ತತ್ತಿ ಪಾಪಣ್ಣ, ಎಸ್ಟಿಎಂಸಿ ಅಧ್ಯಕ್ಷ ಸಿದ್ದರಾಜು ಹಾಗೂ ಸದಸ್ಯರು ಪ್ರೌಢಶಾಲಾ ಶಿಕ್ಷಕ ಪರಮೇಶ್, ನಿವೃತ್ತ ಶಿಕ್ಷಕ ಅರ್ಕೇಶ್ವರ್, ನಟೇಶ್, ಸುನಿಲ್, ರಾಜಣ್ಣ, ಶಿವಕುಮಾರ್ ಮತ್ತಿತ್ತರರು ಇದ್ದರು.
ಸಭೆಯಲ್ಲಿ ಪದಾಧಿಕಾರಿಗಳಾದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಕೆ.ಪಿ.ಆರುಣಕುಮಾರಿ, ಟಿ.ಎಂ.ನಾಗರಾಜು, ಸಂತೆಕಸಲಗೆರೆ ಬಸವರಾಜು, ಖಜಾಂಚಿ ಸೌಂದರ್ಯ, ಅಂತರಾಷ್ಟ್ರೀಯ ಜನಪದ ಕಲಾವಿದರಾದ ಸಬ್ಬನಹಳ್ಳಿ ರಾಜು, ಮೇಳಾಪುರ ಜಯರಾಂ, ಮಾರ್ಕಾಲು ದೇವರಾಜು, ನಿರುಪಮಾ, ಜಯಮ್ಮ , ರಾಮಕೃಷ್ಣ, ಮತ್ತಿತರರು ಇದ್ದರು.