ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮಸ್ಥರಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.ಗುರುವಾರ ಮಧ್ಯಾಹ್ನ ಗ್ರಾಪಂ ಕಚೇರಿ ಎದುರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಸಾಗರ್ ಬಣ) ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಸಂಚಾಲಕ ಬಸವರಾಜ ದೊಡಮನಿಯವರ ನೇತೃತ್ವದಲ್ಲಿ ಗ್ರಾಪಂ ಆಡಳಿತ ಮಂಡಳಿ ಮತ್ತು ಪಂಚಾಯತಿ ಸಿಂಬಂದಿ ವಿರುದ್ಧ ಧರಣಿ ಸತ್ಯಾಗ್ರಹ ಜರುಗಿತು.
ನೇತೃತ್ವ ವಹಿಸಿದ್ದ ರವಿ ಸುತಾರ ಮಾತನಾಡಿ, ಶೌಚಾಲಯ ಸ್ವಚ್ಛತೆ, ದುರಸ್ತಿ, ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ಬೀದಿದೀಪ ವ್ಯವಸ್ಥೆ, ಎಲ್ಲಾ ಶಾಲೆಗಳಿಗೆ ಶುದ್ಧ ಕುಡಿಯುವ ನೀರು, ಹೀಗೆ ಅನೇಕ ಮೂಲ ಸೌಲಭ್ಯದಿಂದ ಗ್ರಾಮಸ್ಥರು ವಂಚಿತ ವಂಚಿತರಾಗಿದ್ದಾರೆ. ಗ್ರಾಪಂ ಸದಸ್ಯರು ಗ್ರಾಮದ ಅಭಿವೃದ್ಧಿಗ್ರಾಗಿ ಶ್ರಮಿಸುತ್ತಿಲ್ಲ. ಬರೀ ಕಾಲಹರಣ ಮಾಡುತ್ತಿದ್ದಾರೆ. ಕೂಡಲೇ ಈ ಎಲ್ಲ ಸೌಕರ್ಯ ಒದಗಿಸಬೇಕು ಎಂದರು.ಧರಣಿ ನಿರತ ಸ್ಥಳಕ್ಕೆ ರಬಕವಿ ಬನಹಟ್ಟಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಮತ್ತು ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ಉಪಾಧ್ಯಕ್ಷೆ ಮಹಾದೇವಿ ಮಠಪತಿ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ಭೇಟಿ ಮಾಡಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಒಂದೆರಡು ದಿನಗಳಲ್ಲಿ ಸರಿ ಮಾಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಷರತ್ತುಗಳ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದೆ ಪಡೆದರು.
ಧರಣಿ ಸತ್ಯಾಗ್ರಹದಲ್ಲಿ ವಕೀಲರಾದ ಶಂಕರ ಹೊಸಮನಿ, ಸಾಕ್ಷಿ ಸಮಯ, ರಮೇಶ ಜಂಬಗಿ, ಹಿರಿಯರಾದ ಅಣ್ಣಪ್ಪ ಕಾಂಬ್ಳೆ, ಹಣಮಂತ ಕಾಂಬ್ಳೆ, ರಾಜು ಗುಡ್ಲಿ, ಸದಾಶಿವ ದಡ್ಡಿಮನಿ, ಮುದಕಪ್ಪ ಸುತಾರ್, ಸಿದ್ದು ತಂಬಾಕು, ಯಮನಪ್ಪ ಕಾಂಬ್ಳೆ, ಮನೋಜ್ ಕಾಂಬ್ಳೆ, ರಾಕೇಶ್ ಕಾಂಬ್ಳೆ, ಮಸೂಬಾ ಮೋರೆ, ವಿಠ್ಠಲ ಕಾಂಬ್ಳೆ, ಅಶೋಕ ಕಾಂಬ್ಳೆ, ಅಶೋಕ ಗೊಂಬಿಗುಡ್ಡ, ಮಹಿಳೆಯರಾದ ಬಂಗಾರೆವ್ವ ಸುತಾರ, ಬಸವ್ವ ತೆಳಗಡಿ, ಕಮಲವ್ವ ಮಾದರ, ಶಾಂತವ್ವ ಹೊಸಮನಿ, ಭಾರತಿ ಕಾಂಬ್ಳೆ, ರೇಷ್ಮಾ ದಬಾನಿ, ಪಾರವ್ವ ಆಸಂಗಿ, ಮಾದೇವಿ ಆಸಂಗಿ, ಲಕ್ಷ್ಮೀ ದೊಡಮನಿ, ರತ್ನವ್ವ ಪಡಸಾಲಿ, ಸಾಬವ್ವ ಬನ್ನೂರ, ಮಾಲವ್ವ ಭಜನಿ, ಗೋದವ್ವ ಮಾದರ, ಮಾದೇವಿ ಮಾದರ, ಶೆಟ್ಟವ್ವ ದಬಾನಿ, ಯಲ್ಲವ್ವ ಆಸಂಗಿ, ಸರೋಜಿನಿ ಕಂಬಾರ, ನಿಂಬೆವ್ವಾ ಗಸ್ತಿ, ಶಾಂತವ್ವ ತೇಲಿ, ಶೋಭಾ ತೇಲಿ ಶಭಾನಾ ಸಾರವಾನ್, ಶಮಶದ ಸಾರವಾನ, ಮಮತಾಜ್ ಸಾರವಾನ, ಮಲ್ಲವ್ವ ಛತ್ರಿ ಸೇರಿದಂತೆ, ಅನೇಕ ಗ್ರಾಮದ ನಾಗರಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.