ಶಿವಾನಂದ ಮಹಾಬಲಶೆಟ್ಟಿ
ಕಿತ್ತು ತಿನ್ನುವ ಬಡತನದ ಮಧ್ಯೆಯೂ ದಿನಂಪ್ರತಿ ಮನೆಯೊಬ್ಬರಲ್ಲಿ ದಿನನಿತ್ಯ ಬರೋಬ್ಬರಿ 100 ಕೊಡಗಳಷ್ಟು ನೀರು ಎತ್ತಿ ಹಾಕಿ ತುಂಬುವುದರೊಂದಿಗೆ ಪಿಯು ದ್ವಿತೀಯ ಪರೀಕ್ಷೆ ಬರೆದು 578 ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡುವ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದಾನೆ ಈ ವಿದ್ಯಾರ್ಥಿ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಸರ್ಕಾರಿ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿರುವ ಇಲ್ಲಿನ ಅಶೋಕ ಕಾಲೋನಿಯ ವಿನಯ ಆಲಕನೂರ ಈ ಸಾಧನೆ ಮಾಡಿದ ವಿದ್ಯಾರ್ಥಿ. ತಂದೆಗೆ ಕೆಲಸವಿಲ್ಲ, ತಾಯಿ ಹಪ್ಪಳ ತಯಾರಿಕೆಯಲ್ಲಿ ಕೆಲಸ ಮಾಡುತ್ತಾಳೆ. ಇಷ್ಟಕ್ಕೇ ತುತ್ತಿನ ಚೀಲ ತುಂಬದ ಕಾರಣ ವಿದ್ಯಾರ್ಥಿ ವಿನಯ ಕೂಡ ದಿನಂಪ್ರತಿ ಖಾಸಗಿ ಮನೆಯೊಂದಕ್ಕೆ ನೂರು ಕೊಡಗಳಷ್ಟು ನೀರು ಎತ್ತಿ ಹಾಕುವದರೊಂದಿಗೆ ಪ್ರತಿದಿನ ₹100 ಗಳಷ್ಟು ಆದಾಯದೊಂದಿಗೆ ಬದುಕಿನ ಬಂಡಿ ಜೊತೆಗೆ ಶೇ.97ರಷ್ಟು ಪ್ರತಿಶತ ಅಂಕ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ವಿನಯ ಕನ್ನಡದಲ್ಲಿ ೧೦೦, ಇಂಗ್ಲಿಷ್-೮೩, ಇತಿಹಾಸ-೯೯, ಅರ್ಥಶಾಸ್ತ್ರ-೯೮, ವ್ಯವಹಾರ ಅಧ್ಯಯನ-೯೯, ಲೆಕ್ಕಶಾಸ್ತ್ರ-೯೯ ಅಂಕ ಪಡೆದಿದ್ದಾನೆ. ಕುಟುಂಬ ನಿರ್ವಹಣೆ ಒಂದು ಸವಾಲಾಗಿರುವ ವಿನಯನ ಮುಂದಿನ ವ್ಯಾಸಂಗಕ್ಕೆ ಆರ್ಥಿಕ ಸ್ಥಿತಿ ಅಡ್ಡಿಯಾಗುತ್ತಿದೆ. ಈತನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿಚ್ಛಿಸುವವರು ಮೊ.7083991358 ನಂಬರನ್ನು ಸಂಪರ್ಕಿಸಬಹುದು.