ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿನ ಶತಮಾನ ಭವನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಸಂಘದ ಕಾರ್ಯದರ್ಶಿ ಡೇನಿಯಲ್ ಸಾಲ್ಡಾನ, ಪಂದ್ಯಾವಳಿ ಒಟ್ಟು 26 ತಂಡಗಳಿಗೆ ಸೀಮಿತವಾಗಿರುತ್ತದೆ. 5 ಓವರ್ಗಳ ಪಂದ್ಯಾಟವಾಗಿದ್ದು ಜಿಲ್ಲಾ ಗ್ರಾಮಾಂತರ ಮಟ್ಟದ ಪಂದ್ಯವಾಗಿರುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು, ವೈಯಕ್ತಿಕ ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಸಂಘದ ಸದಸ್ಯ ಜ್ಯೂಡಿ ವಾಜ್ ಮಾತನಾಡಿ, ತಂಡಗಳು ಡಿ.1ರೊಳಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿಲ್ಟನ್ ವಾಜ್ 9080605238 . ಡೇನಿಯಲ್ 9483910464 ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಜಾನ್ಸನ್ ಡಿಸೋಜ, ಉಪಾಧ್ಯಕ್ಷ ಜೋಸೆಫ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಬಿಲ್ಟನ್ ವಾಜ್, ಸದಸ್ಯರಾದ ಬ್ಲೇಜಿ ಸಿಕ್ವೇರಾ ಹಾಜರಿದ್ದರು.