ವಾಲಿಬಾಲ್ ಟೂರ್ನಿ: ಮೈಸೂರಿನ ಟೀಂ ಬ್ರದರ್ ತಂಡಕ್ಕೆ ಪ್ರಶಸ್ತಿ

KannadaprabhaNewsNetwork |  
Published : Jan 30, 2024, 02:00 AM IST
ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿ- ಮೈಸೂರಿನ ಟೀಮ್ ಬ್ರದರ್ ತಂಡಕ್ಕೆ: ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್‌ | Kannada Prabha

ಸಾರಾಂಶ

ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿಯನ್ನು ಮೈಸೂರಿನ ಟೀಮ್ ಬ್ರದರ್ ತಂಡ ಮುಡಿಗೇರಿಸಿಕೊಂಡಿದೆ. ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್‌ ಆಯಿತು. ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ತಾಲೂಕಿನ ಕುಸುಬೂರು-ಕೆಂಚಮ್ಮನಬಾಣೆಯ ಭಾರತ್ ಮಾತಾ ಸೇವಾ ಸಂಘದ ವತಿಯಿಂದ ಕೆಂಚಮ್ಮನಬಾಣೆಯ ಭಾರತ್ ಮೈದಾನದಲ್ಲಿ ಶನಿವಾರ ಸಂಜೆ ನಡೆದ ಮುಕ್ತ ಪುರಷರ ವಾಲಿಬಾಲ್ ಪ್ರಶಸ್ತಿಯನ್ನು ಮೈಸೂರಿನ ಟೀಮ್ ಬ್ರದರ್ ತಂಡ ಮುಡಿಗೇರಿಸಿಕೊಂಡಿದೆ. ಮಂಗಳೂರಿನ ಜಿಯಾ ಪ್ರತಾಪ್ ತಂಡ ರನ್ನರ್ ಅಪ್‌ ಆಯಿತು.ಕಬಡ್ಡಿ ಪಂದ್ಯದಲ್ಲಿ ಕೆಂಚಮ್ಮನಬಾಣೆ ಟೀಮ್ ಬ್ರದರ್ ‘ಎ’ ತಂಡ ಪ್ರಥಮ ಹಾಗೂ ‘ಬಿ’ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಥ್ರೋಬಾಲ್‌ನಲ್ಲಿ ಬಲಮುರಿ ಗಣಪತಿ ದೇವಾಲಯ ತಂಡ ಪ್ರಥಮ, ಕೆಂಚಮ್ಮನಬಾಣೆ 7 ಸ್ಟಾರ್ ತಂಡ ದ್ವೀತಿಯ ಸ್ಥಾನ ಗಳಿಸಿತು.

ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಟೀಮ್ ಬಲಮುರಿ ತಂಡ ಪ್ರಥಮ ಹಾಗೂ ಕೆಂಚಮ್ಮನಬಾಣೆಯ ಕೆಂಚಮ್ಮ ದೇವಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ವೇದಿಕೆಯಲ್ಲಿದ್ದ ಸೇವಾ ಸಂಘದ ಅಧ್ಯಕ್ಷ ಕೆ.ಜೆ.ಸುನಿಲ್, ಮಾಜಿ ಅಧ್ಯಕ್ಷರಾದ ಬಿ.ಎನ್.ಚಂದ್ರಶೇಖರ್, ಟಿ.ಪಿ.ಮೂರ್ತಿ, ಬೇಳೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುದರ್ಶನ್, ಭಾಸ್ಕರ್, ದಾನಿಗಳಾದ ಮುಂಜುನ ಆಶೋಕ್, ಆರ್.ಪುಟ್ಟಣ್ಣ ಪ್ರಮುಖರಾದ ಚಂದ್ರಿಕಾ ಕುಮಾರ್, ಜಯಲಲಿತ ಅವರುಗಳು ಬಹುಮಾನ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''