ಮದುವೆ ಅರತಕ್ಷತೆಯ ವೇಳೆ ವಿಜಯನಗರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಸದಾಶಿವಪ್ರಭು ಬಿ. ಅವರ ನೇತೃತ್ವದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಹೊಸಪೇಟೆ: ಲೋಕಸಭೆ ಚುನಾವಣೆ ಕಾವೇರುತ್ತಿದ್ದರೆ, ಇತ್ತ ವಿಜಯನಗರ ಜಿಲ್ಲಾ ಸ್ವೀಪ್ ಸಮಿತಿಯಿಂದ ಮದುವೆ ಮನೆಗಳಿಗೂ ತೆರಳಿ ಮತದಾನ ಜಾಗೃತಿ ಅಭಿಯಾನ ನಡೆಸುತ್ತಿದೆ. ಇಂತಹದ್ದೇ ಜಾಗೃತಿ ಅಭಿಯಾನಕ್ಕೆ ಗುರುವಾರ ಸಾಕ್ಷೀಯಾಗಿದ್ದು, ಪಾಪಿನಾಯಕನಹಳ್ಳಿ ಪಿಡಿಒ ವಾಸುಕಿ ಅವರ ಮದುವೆ ಮನೆ.
ಪಾಪಿನಾಯಕನಹಳ್ಳಿ ಪಿಡಿಒ ವಾಸುಕಿ ಅವರ ಸ್ವಂತ ಊರು ತಾಲೂಕಿನ ವೆಂಕಟಾಪುರ. ವಾಸುಕಿ ಸಂಪತಕುಮಾರ ಅವರ ಜೊತೆಗೆ ಹಸೆಮಣೆ ಏರಿದ್ದು, ಮದುವೆ ಅರತಕ್ಷತೆಯ ವೇಳೆ ವಿಜಯನಗರ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಸದಾಶಿವಪ್ರಭು ಬಿ. ಅವರ ನೇತೃತ್ವದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.
ಹೊಸಪೇಟೆ ತಾಪಂ ಇಒ ಹರೀಶ್ ಆರ್., ಕಂಪ್ಲಿ ತಾಪಂ ಇಒ ಶ್ರೀಕುಮಾರ, ಹೊಸಪೇಟೆ ತಾಪಂ ಸಹಾಯಕ ನಿರ್ದೇಶಕ ಉಮೇಶ್, ಬುಕ್ಕಸಾಗರ ಗ್ರಾಪಂ ಪಿಡಿಒ ರಾಜೇಶ್ವರಿ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.