ಧಾರವಾಡ: ಸಣ್ಣ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ವಿಎಸ್ಟಿ ಕಂಪನಿಯ ಯಂತ್ರೋಪಕರಣಗಳು. ಇವು ರೈತನಿಗೆ ಮಿತ್ರನಾಗಿ ಕೃಷಿ ಚಟುವಟಿಕೆಯಲ್ಲಿ ಕೈ ಜೋಡಿಸುತ್ತಿವೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯ ಸಮಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತನಾಗದೇ ಈ ಯಂತ್ರಗಳಿಂದ ಏಕಾಂಗಿಯಾಗಿ ಕೃಷಿ ಕಾರ್ಯ ನಿರ್ವಹಿಸಿ ದ್ವಿಗುಣ ಆದಾಯ ಗಳಿಸಬಹುದಾಗಿದೆ.
ವಿ.ಎಸ್.ಟಿ ವೀಡ್ ಕಟರ್ ರೈತನಿಗೆ ಹೊಲದಲ್ಲಿರುವ ಕಸವನ್ನು ಯಾವುದೇ ಆಳುಗಳ ಸಹಾಯವಿಲ್ಲದೆ ಕೇವಲ 1 ಲೀ. ಪೇಟ್ರೋಲ್ನಲ್ಲಿ 2.5 ಗಂಟೆಗಳ ಕಾಲ ಕಳೆ ಕತ್ತರಿಸಲು ಈ ಯಂತ್ರ ಬಳಕೆಯಾಗಲಿದೆ. ಇದರಲ್ಲಿ ಮೂರು ಮಾದರಿಗಳಿದ್ದು, 26 ಸಿಸಿ, 34 ಸಿಸಿ, 42 ಸಿಸಿ ಯಂತ್ರಗಳಿವೆ. ಇದು ಇಂಧನ ದಕ್ಷತೆ ಹಾಗೂ ಹೆಚ್ಚು ಸಾಮರ್ಥ್ಯ ಉಳದ್ದಾಗಿದೆ. ವಿ.ಎಸ್.ಟಿ. ಪವರ್ ರೀಪರ್ ಯಂತ್ರ ರೈತ ಮಿತ್ರನಂತಿದ್ದು, ಬೆಳೆಗಳ ಕೊಯ್ಲಿಗಾಗಿ ಬಳಸಲಾಗುತ್ತದೆ. ದಿನಕ್ಕೆ 5 ಎಕರೆಯಷ್ಟು ಬೆಳೆಯನ್ನು ಕಟಾವು ಮಾಡಬಹುದು. ಭತ್ತ, ರಾಗಿ, ಗೋಧಿ, ನವಣೆ, ಕಡಲೆ ಇತ್ಯಾದಿ ಬೆಳೆಗಳನ್ನು ಕಟಾವು ಮಾಡುತ್ತದೆ. ಮತ್ತೊಬ್ಬರಿಗೆ ಬಾಡಿಗೆ ನೀಡುವ ಮೂಲಕವೂ ಈ ಯಂತ್ರದಿಂದ ಆದಾಯ ಗಳಿಸಬಹುದಾಗಿದೆ.
ವಿ.ಎಸ್.ಟಿ. ಕಂಪನಿಯವರು ರೈತರ ಸಹಾಯಕ್ಕಾಗಿ ಹೊರ ತಂದಿರುವ ಈ ಯಂತ್ರಗಳು ಸರ್ಕಾರ ನೀಡುವ ಸಹಾಯಧನದಿಂದಲೂ ಲಭ್ಯವಿದ್ದು, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಇದೀಗ ಕೃಷಿ ಮೇಳದಲ್ಲಿಯ ಸ್ಟಾಲ್ನಲ್ಲಿಯೂ ಬುಕಿಂಗ್ಗಳು ಆರಂಭವಾಗಿವೆ. ಹೆಚ್ಚಿನ ಮಾಹಿತಿಗಾಗಿ 9535141265 ಅಜಯ ಅಥವಾ 9945779930 ಮಂಜುನಾಥ ಅವರನ್ನು ಸಂಪರ್ಕಿಸಬಹುದು.