ರೈತರ ಮಿತ್ರರಾಗಿ ಆಕರ್ಷಿಸುತ್ತಿವೆ ವಿಎಸ್‌ಟಿ ಮಶಿನ್‌ಗಳು

KannadaprabhaNewsNetwork |  
Published : Sep 23, 2024, 01:25 AM IST
22 ಧಾರವಾಡ31ಕೃಷಿ ಮೇಳದಲ್ಲಿ ಜನರನ್ನು ಕೈ ಬಿಸಿ ಕರೆಯುತ್ತಿರುವ ವ್ಹಿ.ಎಸ್.ಟಿ ಕಂಪನಿಯ ಯಂತ್ರೋಪಕರಣಗಳು. | Kannada Prabha

ಸಾರಾಂಶ

ಸಣ್ಣ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ವಿಎಸ್‌ಟಿ ಕಂಪನಿಯ ಯಂತ್ರೋಪಕರಣಗಳು. ಇವು ರೈತನಿಗೆ ಮಿತ್ರನಾಗಿ ಕೃಷಿ ಚಟುವಟಿಕೆಯಲ್ಲಿ ಕೈ ಜೋಡಿಸುತ್ತಿವೆ

ಧಾರವಾಡ: ಸಣ್ಣ ರೈತರಿಗೆ ಸಹಕಾರಿಯಾಗಿ ನಿಲ್ಲುತ್ತಿದೆ ವಿಎಸ್‌ಟಿ ಕಂಪನಿಯ ಯಂತ್ರೋಪಕರಣಗಳು. ಇವು ರೈತನಿಗೆ ಮಿತ್ರನಾಗಿ ಕೃಷಿ ಚಟುವಟಿಕೆಯಲ್ಲಿ ಕೈ ಜೋಡಿಸುತ್ತಿವೆ. ಕೃಷಿ ಕೂಲಿ ಕಾರ್ಮಿಕರ ಕೊರತೆಯ ಸಮಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತನಾಗದೇ ಈ ಯಂತ್ರಗಳಿಂದ ಏಕಾಂಗಿಯಾಗಿ ಕೃಷಿ ಕಾರ್ಯ ನಿರ್ವಹಿಸಿ ದ್ವಿಗುಣ ಆದಾಯ ಗಳಿಸಬಹುದಾಗಿದೆ.

ವಿಎಸ್‌ಟಿ ಕಂಪನಿ ತಯಾರಿಸುವ ಯಂತ್ರೋಪಕರಣಗಳಲ್ಲಿ ಪಾವರ್ ಟಿಲ್ಲರ್‌ ಯಂತ್ರ ಪ್ರಮುಖವಾದದ್ದು. ಇದರಿಂದ ಎಲ್ಲ ಕೃಷಿ ಚಟುವಟಿಕೆ ನಿರ್ವಹಿಸಬಹುದಾಗಿದೆ. ಈ ಯಂತ್ರದಲ್ಲಿ 9 ಎಚ್.ಪಿ.ಯಿಂದ ಆರಂಭವಾಗಿ 16.5 ಎಚ್.ಪಿ. ವರೆಗೂ ದೊರೆಯುತ್ತವೆ. ₹1.60 ಲಕ್ಷದಿಂದ ₹2.40 ಲಕ್ಷ ದರದಲ್ಲಿದ್ದು, ದೇಶದಲ್ಲಿಯೇ ನಂ. 1 ಸ್ಥಾನದಲ್ಲಿದೆ. ಇನ್ನು ವಿ.ಎಸ್.ಟಿ. ಪಾವರ್ ವಿಂಡರ್ ಯಂತ್ರ 2 ಎಚ್.ಪಿ. ಯಿಂದ ಎಂಟು ಎಚ್.ಪಿ ವರೆಗಿನ ಸಾಮರ್ಥ ಹೊಂದಿದ್ದು, ಪೈರುಗಳಲ್ಲಿನ ಮಧ್ಯದ ಕಸ ತೆಗೆಯಲು ಸಹಕಾರಿಯಾಗುವ ಯಂತ್ರ. ಹಗುರವಾಗಿದ್ದು, ಸರಳ ವಿಧಾನದಲ್ಲಿ ಮಹಿಳೆಯರು ಸಹ ಉಪಯೋಗಿಸಬಹುದಾಗಿದೆ.

ವಿ.ಎಸ್.ಟಿ ವೀಡ್ ಕಟರ್ ರೈತನಿಗೆ ಹೊಲದಲ್ಲಿರುವ ಕಸವನ್ನು ಯಾವುದೇ ಆಳುಗಳ ಸಹಾಯವಿಲ್ಲದೆ ಕೇವಲ 1 ಲೀ. ಪೇಟ್ರೋಲ್‌ನಲ್ಲಿ 2.5 ಗಂಟೆಗಳ ಕಾಲ ಕಳೆ ಕತ್ತರಿಸಲು ಈ ಯಂತ್ರ ಬಳಕೆಯಾಗಲಿದೆ. ಇದರಲ್ಲಿ ಮೂರು ಮಾದರಿಗಳಿದ್ದು, 26 ಸಿಸಿ, 34 ಸಿಸಿ, 42 ಸಿಸಿ ಯಂತ್ರಗಳಿವೆ. ಇದು ಇಂಧನ ದಕ್ಷತೆ ಹಾಗೂ ಹೆಚ್ಚು ಸಾಮರ್ಥ್ಯ ಉಳದ್ದಾಗಿದೆ. ವಿ.ಎಸ್.ಟಿ. ಪವರ್ ರೀಪರ್ ಯಂತ್ರ ರೈತ ಮಿತ್ರನಂತಿದ್ದು, ಬೆಳೆಗಳ ಕೊಯ್ಲಿಗಾಗಿ ಬಳಸಲಾಗುತ್ತದೆ. ದಿನಕ್ಕೆ 5 ಎಕರೆಯಷ್ಟು ಬೆಳೆಯನ್ನು ಕಟಾವು ಮಾಡಬಹುದು. ಭತ್ತ, ರಾಗಿ, ಗೋಧಿ, ನವಣೆ, ಕಡಲೆ ಇತ್ಯಾದಿ ಬೆಳೆಗಳನ್ನು ಕಟಾವು ಮಾಡುತ್ತದೆ. ಮತ್ತೊಬ್ಬರಿಗೆ ಬಾಡಿಗೆ ನೀಡುವ ಮೂಲಕವೂ ಈ ಯಂತ್ರದಿಂದ ಆದಾಯ ಗಳಿಸಬಹುದಾಗಿದೆ.

ವಿ.ಎಸ್.ಟಿ. ಕಂಪನಿಯವರು ರೈತರ ಸಹಾಯಕ್ಕಾಗಿ ಹೊರ ತಂದಿರುವ ಈ ಯಂತ್ರಗಳು ಸರ್ಕಾರ ನೀಡುವ ಸಹಾಯಧನದಿಂದಲೂ ಲಭ್ಯವಿದ್ದು, ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿ ಪಡೆಯಬಹುದು. ಇದೀಗ ಕೃಷಿ ಮೇಳದಲ್ಲಿಯ ಸ್ಟಾಲ್‌ನಲ್ಲಿಯೂ ಬುಕಿಂಗ್‌ಗಳು ಆರಂಭವಾಗಿವೆ. ಹೆಚ್ಚಿನ ಮಾಹಿತಿಗಾಗಿ 9535141265 ಅಜಯ ಅಥವಾ 9945779930 ಮಂಜುನಾಥ ಅವರನ್ನು ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ