ಮನೆಯಿಂದ ಅರ್ಧ ಕಿಮೀ ದೂರದಿಂದ ಸುಗುರೆ ಕರೆದೊಯ್ದಿದ್ದ ಸ್ಫಿಫ್ಟ್ ಕಾರು
--------ಪಾಯಿಂಟ್ಸ್.......
ದೆಹಲಿಗೆ ಹಾರಲು ತಯಾರಾಗಿದ್ದ ಸುಗುರೆ, ವಿಮಾನ ಟಿಕೆಟ್ ಬುಕ್ ಆಗಿತ್ತುಲಾಡ್ಜ್ನಲ್ಲಿ ಕಾದು ಕುಳಿತಿದ್ದಾಗ ಪೊಲೀಸ್ ಕಂಡು ಕಕ್ಕಾಬಿಕ್ಕಿಯಾದ ಸುಗುರೆ
ಕೋಟ್ಯಂತರ ರು. ವಹಿವಾಟು, ತೆರಿಗೆ ಇಲಾಖೆಯ ಕಿವಿ ನಿಮಿರೋ ಸಾಧ್ಯತೆ
ಮನೆಯಿಂದ ನಸುಕಿನ ಜಾವ ಹೊರ ಹೋಗಿ ನಾಪತ್ತೆಯಾಗಿದ್ದ ಉದ್ಯಮಿ ಸಂಜೀವಕುಮಾರ ಸುಗುರೆ ಪ್ರಕರಣ ಪೂರ್ವಯೋಜಿತ ಎಂಬ ಅನುಮಾನಗಳ ಜೊತೆ ಜೊತೆಗೆ ಕೋಟ್ಯಂತರ ರುಪಾಯಿ ಹಣಕಾಸು ವ್ಯವಹಾರ, ಚುನಾವಣೆಯಲ್ಲಿ ಹಣ ಹಂಚಿಕೆ ಮತ್ತಿತರ ಕುರಿತಾಗಿ ಪತ್ರದಲ್ಲಿರುವ ಉಲ್ಲೇಖಗಳು ತೆರಿಗೆ ಇಲಾಖೆಯವರ ಕಿವಿ ನಿಮಿರಿಸಿದರೆ ಅಚ್ಚರಿಯಿಲ್ಲ.
ಸ್ಫಿಫ್ಟ್ ಕಾರು ಜಾಡು ಹಿಡಿದು ತನಿಖೆ:
ಮೊಬೈಲ್ ಟಾವರ್ ನೀಡಿದ ಸುಳಿವು:
ರೂಮ್ನಿಂದ ಊಟಕ್ಕೆಂದು ಹೊರ ನಡೆದಿದ್ದ ಸುಗುರೆ ಬರೋಬ್ಬರಿ ರಾತ್ರಿ 9.30ರ ಸುಮಾರಿಗೆ ಕೊಠಡಿ ಪ್ರವೇಶಿಸುತ್ತಿದ್ದಂತೆ ಪೊಲೀಸರು ಎಂಟ್ರಿ ಕೊಟ್ಟಿದ್ದು ಸುಗುರೆ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಮುಟ್ಟಿಸಿ ಅಲ್ಲಿಂದ ಅವರನ್ನು ಬಸವಕಲ್ಯಾಣಕ್ಕೆ ಬೆಳಗಿನ ಜಾವ 4.30ರ ಸುಮಾರಿಗೆ ವಾಪಸ್ ಕರೆತಂದಿದ್ದಾರೆ.
ಪೊಲೀಸರು ಇನ್ನೇನು ಸ್ವಲ್ಪ ತಡ ಮಾಡಿದ್ದರೂ ಸುಗುರೆ ಅಲ್ಲಿಂದ ದೆಹಲಿಗೆ ತೆರಳಿಬಿಡುತ್ತಿದ್ದರು. ಪ್ರಕರಣ ಮತ್ತಷ್ಟು ಜಟಿಲವಾಗುತ್ತಿತ್ತು. ಹೈದ್ರಾಬಾದ್ನಿಂದ ದೆಹಲಿಗೆ ತೆರಳಲು ವಿಮಾನದ ಟಿಕೆಟ್ ಕಾಯ್ದಿರಿಸಿದ್ದ ಸುಗುರೆ ಅವರು ಏರ್ಪೋರ್ಟ್ಗೆ ಹೊರಡಬೇಕಿದ್ದ ಸಮಯದಲ್ಲಿಯೇ ಪೊಲೀಸರ ಎಂಟ್ರಿಯಾಗಿದೆ.
ಆ ಇಬ್ಬರು ಯಾರ ವಿರೋಧಿಗಳು..?:ಅಷ್ಟಕ್ಕೂ ಸುಗುರೆ ಮನೆಯಿಂದಾಚೆ ಸ್ವಲ್ಪ ದೂರ ಬರುತ್ತಿದ್ದಂತೆ ಹತ್ತಿದ ಕಾರಿನಲ್ಲಿ ಇಬ್ಬರು ಸವಾರರಾಗಿದ್ದರು. ಇವರಿಬ್ಬರೂ ಸುಗುರೆ ಜೊತೆ ದೆಹಲಿಗೆ ಹಾರುವ ತವಕದಲ್ಲಿದ್ದರು ಎಂಬ ಮಾಹಿತಿಯನ್ನು ಮೂಲಗಳು ಹೊರ ಹಾಕುತ್ತಿದ್ದಂತೆ ಸುಗುರೆ ನಾಪತ್ತೆ ಪ್ರಕರಣ ಪೂರ್ವಯೋಜಿತ ಎಂಬುವದು ಸ್ಪಷ್ಟವಾಗುತ್ತಿದೆ.
ಇದೀಗ ಸುಗುರೆ ನಾಪತ್ತೆಯಾಗಿದ್ದ ಪ್ರಕರಣ ಬಗೆಹರಿದಿರುವ ಬೆನ್ನಲ್ಲಿಯೇ ನಾಪತ್ತೆಯಾಗಲು ಸಾಥ್ ನೀಡಿರುವ ವ್ಯಕ್ತಿಗಳ್ಯಾರು, ಅವರು ಏಕೆ ಇಂಥದ್ದಕ್ಕೆ ಕೈಹಾಕಿದರು, ಅವರಿಗೇನು ಲಾಭ, ಅವರು ಯಾರ ಗೆಳೆಯರು, ಯಾರ ವಿರೋಧಿಗಳು, ಸುಗುರೆ ಬರೆದ ಪತ್ರದ ಮೂಲಕ ಶಾಸಕ ಶರಣು ಸಲಗರ ಅವರನ್ನು ಖೆಡ್ಡಾಕ್ಕೆ ಬೀಳಿಸೋ ಯೋಜನೆ ಇತ್ತೇ ಎಂಬಿತ್ಯಾದಿ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ವಿಷಯಗಳು ಹೊರ ಬೀಳುವ ಮಾಹಿತಿ ಲಭ್ಯವಾಗಿದೆ.ತೆರಿಗೆ ಇಲಾಖೆಯ ಕಿವಿ ನಿಮಿರೋ ಸಾಧ್ಯತೆ:
ಇನ್ನು ಕೋಟ್ಯಂತರ ರುಪಾಯಿ ಹಣ ನೀಡಿದ್ದರ ಕುರಿತು ಉಲ್ಲೇಖವಾದ ಪತ್ರದ ಜಾಡು ಹಿಡಿದು ಆದಾಯ ತೆರಿಗೆ ಇಲಾಖೆಯವರು ಫೀಲ್ಡ್ಗೆ ಇಳಿದಿದ್ದೆಯಾದಲ್ಲಿ ಯಾರೆಲ್ಲ ಉತ್ತರಿಸಬೇಕಾದೀತು ಎಂಬುದು ಸಹ ಕುತೂಹಲಕಾರಿ. ಒಟ್ಟಾರೆ ಪೊಲೀಸರ ಕಾರ್ಯಕ್ಷಮತೆ ಮೆಚ್ಚುವಂಥದ್ದು ಎಂದು ಜನ ಬೆನ್ನು ತಟ್ಟುತ್ತಿದ್ದಾರೆ.