ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದವರಿಗೆ ಸನ್ಮಾನ ಸಮಾರಂಭಕನ್ನಡಪ್ರಭ ವಾರ್ತೆ ಕೊಪ್ಪಳ
ಮುನಿರಾಬಾದ್ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದವರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.
ಗೇಟ್ ಮುರಿದು ಹೋಗಿದ್ದರೂ ಕೇವಲ ವಾರದಲ್ಲಿ ದುರಸ್ತಿ ಮಾಡಿದ್ದರಿಂದ ಸುಮಾರು 20 ಟಿಎಂಸಿ ನೀರು ಉಳಿಸಿದ್ದಾರೆ. ಹೀಗಾಗಿ, ನಾನು ಕನ್ನಯ್ಯ ನಾಯ್ಡು ಸೇರಿದಂತೆ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಳೆದ ವರ್ಷ ಮಳೆಯ ಅಭಾವದಿಂದ ನೀರಿನ ಸಮಸ್ಯೆಯಾಗಿತ್ತು. ಆದರೆ, ಈ ವರ್ಷ ಮಳೆ ಬಂದಿದ್ದರೂ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ, ನೀರು ಪೋಲಾಗಿದ್ದರಿಂದ ಆತಂಕಗೊಂಡಿದ್ದರು. ಈ ವರ್ಷವೂ ಬೆಳೆಗೆ ನೀರು ಇಲ್ಲದಾಗುತ್ತದೆ ಎಂದು ಚಿಂತೆಗೀಡಾಗಿದ್ದರು.
ಇನ್ನು ಕೂಡಾ ಮಳೆಗಾಲ ಇರುವುದರಿಂದ ಜಲಾಶಯ ಹಿಂಗಾರು ಅವಧಿಗೂ ಮತ್ತೊಮ್ಮೆ ಭರ್ತಿಯಾಗುವ ವಿಶ್ವಾಸದೊಂದಿಗೆ ಹೇಳುತ್ತೇನೆ, ಎರಡನೇ ಬೆಳೆಗೂ ನೀರು ಕೊಡುತ್ತೇವೆ ಎಂದರು.ನಿರ್ವಹಣೆ:
ಗೇಟ್ ಮುರಿದಾಗ ವಿರೋಧಪಕ್ಷಗಳು ಬಾಯಿಗೆ ಬಂದಂತೆ ಮಾತನಾಡಿದರು. ಸರ್ಕಾರದ ನಿರ್ಲಕ್ಷ್ಯದಿಂದ ಹೀಗಾಗಿದೆ, ನೀರು ಅಷ್ಟು ಪೋಲಾಗುತ್ತದೆ ಎಂದೆಲ್ಲ ಟೀಕಿಸಿದ್ದರು. ಆದರೆ, ನಾವು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದುರಸ್ತಿ ಮಾಡಿಸುವ ಮೂಲಕ ಉತ್ತರ ನೀಡಿದ್ದೇವೆ ಎಂದರು.
371 ಜಾರಿ ಮಾಡಲು ಎಸ್.ಎಂ. ಕೃಷ್ಣ ಕೇಂದ್ರಕ್ಕೆ ಪತ್ರ ಬರೆದಾಗ, ಆಗಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಆಗುವುದಿಲ್ಲ ಎಂದು ಪತ್ರ ಬರೆದಿದ್ದರು. ಆದರೆ, ಪ್ರಧಾನಿ ಮನಮೋಹನ ಸಿಂಗ್ ಜಾರಿ ಮಾಡಿದರು. ಈಗ ನಾವು ಕಲ್ಯಾಣ ಕರ್ನಾಟಕ ಭಾಗಕ್ಕೆ ₹5 ಸಾವಿರ ಕೋಟಿ ನೀಡಿದ್ದೇವೆ, ಕೇಂದ್ರದವರು ವಿಶೇಷ ಅನುದಾನವಾಗಿ ₹ 5 ಸಾವಿರ ಕೋಟಿ ನೀಡಲಿ ಎಂದು ಆಗ್ರಹಿಸಿದರು.ಲೆಕ್ಕ ಆಗಲಿಲ್ಲ ಪಕ್ಕಾ:
ಇದಾದ ಮೇಲೆಯೂ ಅವರು ತಾವೂ ಹೇಳುತ್ತಲೇ ಅತ್ತಿತ್ತ ನೋಡುತ್ತಿದ್ದಾಗ ಅಧಿಕಾರಿಯೋರ್ವರು ಹೇಳಿದ ಲೆಕ್ಕವೂ ತಾಳೆಯಾಗಲೇ ಇಲ್ಲ. ಆಗ ಕೊನೆಗೆ ರಾಜ್ಯದ ವ್ಯಾಪ್ತಿಯಲ್ಲಿ 9.26 ಸಾವಿರ ಎಕರೆ ನೀರಾವರಿಯಾಗುತ್ತಿದ್ದರೆ ಆಂಧ್ರ ವ್ಯಾಪ್ತಿಯಲ್ಲಿ 6.75 ಸಾವಿರ ಎಕರೆ ಹಾಗೂ ತೆಲಂಗಾಣ ವ್ಯಾಪ್ತಿಯಲ್ಲಿ 87 ಸಾವಿರ ಎಕರೆ ನೀರಾವರಿಯಾಗುತ್ತದೆ ಎಂದು ಘೋಷಣೆ ಮಾಡಿದರು. ಅಷ್ಟಕ್ಕೆ ಸುಮ್ಮನಾಗದ ಅವರು, ಇದನ್ನು ನನಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹಾಗೊಂದು ವೇಳೆ ಇದು ತಪ್ಪಾದರೆ ಖಂಡಿತವಾಗಿಯೂ ಅವರ ಮೇಲೆ ಕ್ರಮವಹಿಸುತ್ತೇನೆ ಎಂದು ವೇದಿಕೆಯಲ್ಲಿಯೇ ಖಡಕ್ ಎಚ್ಚರಿಕೆ ನೀಡಿದರು.