ಮಳವಳ್ಳಿ:
ಘಟನೆ ವಿಚಾರವಾಗಿ ವರ್ಷದ ಬಳಿಕ ಸಮನ್ಸ್ ನೀಡಿದ್ದಾರೆ. ನಮಗೆ ಒತ್ತಡ ಇದೆ ಎಂದು ಹೇಳಿ ಫೋನ್ ಮೇಲೆ ಫೋನ್ ಮಾಡಿ ಸಮನ್ಸ್ ನೀಡಿದ್ದಾರೆ. ಕಲ್ಲು ತೂರಿದವರ ಮೇಲೆ ಏನು ಕ್ರಮ ಆಯ್ತು ಅಂತ ಹೇಳಲ್ಲ. ಆದರೆ, ಪ್ರತಿಭಟನೆ ಮಾಡಿದ ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿ ಇದೀಗ ಸಮನ್ಸ್ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆ ಮಾಡುತ್ತೇವೆ. ಮಸೀದಿ ಮುಂದೆಯೇ ಮೆರವಣಿಗೆ ಮಾಡುತ್ತೇವೆ. ತಾಕತ್ ಇದ್ದರೆ ತಡೆಯಿರಿ. ಕಳೆದ ವರ್ಷ ಅನ್ಯಕೋಮಿನವರು ಗಣಪತಿಗೆ ಕಲ್ಲು ತೂರಿದರು. ಇದರಿಂದ ದೊಡ್ಡ ಮಟ್ಟದ ಗಲಾಟೆಯಾಗಿತ್ತು. ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಹೋರಾಟ ಮಾಡಿದ್ದರು. ಕಳೆದ ಒಂದು ವರ್ಷದಿಂದ ಅವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಾರೆ ಎಂದು ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.ನಾವು ಬಹಿರಂಗವಾಗಿ ಕೇಳಿದ್ರು ಮಾಹಿತಿ ನೀಡಿಲ್ಲ. ಟಿ.ನರಸೀಪುರದಲ್ಲಿ ಘಟನೆ ಬಳಿಕ 23 ಜನರಿಗೆ ಸಮನ್ಸ್ ನೀಡಿದ್ದಾರೆ. ಈ ರೀತಿ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ನಾವು ಯಾವ ದೇಶದಲ್ಲಿ ಇದ್ದೀವಿ ಎಂದು ಗೊತ್ತಾಗುತ್ತಿಲ್ಲ. ಹಬ್ಬವನ್ನು ಭಕ್ತಿಯಿಂದ ಮಾಡಲು ಆಗುತ್ತಿಲ್ಲ. ಭಯದಿಂದ ಹಬ್ಬ ಮಾಡುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾವು ಮದ್ದೂರಿನ ಬೃಹತ್ ಸಾಮೂಹಿಕ ವಿಸರ್ಜನೆ ಮೆರವಣಿಗೆ ಮಾಡುತ್ತೇವೆ. 10-15 ಸಾವಿರ ಹಿಂದೂ ಕಾರ್ಯಕರ್ತರು ಬರುತ್ತಾರೆ. ಮಸೀದಿ ಮುಂದೆಯೇ ನಾವು ಮೆರವಣಿಗೆ ಮಾಡುತ್ತೇವೆ. ನಮಗೆ ಅಲ್ಲಿ ಹೋಗಬೇಡಿ ಎಂದು ಯಾರು ಹೇಳಬೇಡಿ.
ಇಂದು 108 ಸಾಮೂಹಿಕ ಗಣಪತಿ ವಿಸರ್ಜನೆ: ಬಿಜೆಪಿ, ಜೆಡಿಎಸ್ ನಾಯಕರು ಭಾಗಿಮದ್ದೂರು: ಪಟ್ಟಣದಲ್ಲಿ ಇಂದು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿರುವ 108 ಗಣೇಶಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮದಲ್ಲಿ ದೋಸ್ತಿ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸುವ ಸಾಧ್ಯತೆ ಇದೆ.
ಮದ್ದೂರು:ಪಟ್ಟಣದಲ್ಲಿ ಕಳೆದ ವರ್ಷ ಗಣೇಶನ ಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಮತ್ತು ಗಲಭೆ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದ 10 ಮಂದಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಜೆಎಂಎಫ್ಸಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ.ಹಿಂದೂಪರ ಸಂಘಟನೆಯ ಗಿರೀಶ್, ಸೌಮ್ಯ, ರಮ್ಯ, ಮಧು, ರಾಕೇಶ್, ವರುಣ, ಭಾಸ್ಕರ್, ಸ್ವಾಮಿ, ರಾಂಖ, ಚಂದನ್ ಹಾಗೂ ದರ್ಶನ್ ವಿರುದ್ಧ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಎಸ್.ಆರ್.ನಂದಿನಿ ಅವರು ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದ್ದಾರೆ.