ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ಸೋಲೂರು ಹೋಬಳಿಯ ಲಕ್ಕೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿ ಕಸ, ಒಣ ಕಸ ತ್ಯಾಜ್ಯ ವಿಂಗಡನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಈ ಮೂಲಕ ಸ್ವಚ್ಛ ಪಂಚಾಯತಿಯನ್ನಾಗಿಸಲು ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ಉತ್ತಮ ಕೆಲಸಕ್ಕೆ ಕೈ ಹಾಕಿದ್ದಾರೆ. ಇದೇ ರೀತಿ ಎಲ್ಲಾ ಪಂಚಾಯತಿಗಳು ಘನತ್ಯಾಜ್ಯ ವಿಂಗಡನಾ ಘಟಕ ಆರಂಭಿಸಿದರೆ ಆರೋಗ್ಯವಂತ ಪರಿಸರವನ್ನು ಕಾಣಬಹುದು ಎಂದು ಶಾಸಕ ಶ್ರೀನಿವಾಸ್ ತಿಳಿಸಿದರು.
ನೆಲಮಂಗಲಕ್ಕೆ ಮೆಟ್ರೋ ಬರುವ ನಿಟ್ಟಿನಲ್ಲಿ ಡಿಪಿಆರ್ ಕಾರ್ಯ ನಡೆಯುತ್ತಿದ್ದು, ತುಮಕೂರಿಗೆ ಮೆಟ್ರೋ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಪಿಪಿಆರ್ ಮಾಡೆಲ್ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೆಟ್ರೋ ತರಲು ಪ್ರಯತ್ನ ಮಾಡುತ್ತಿದ್ದು, ನೆಲಮಂಗಲಕ್ಕೂ ತುಮಕೂರಿಗೂ ಯಾವುದೇ ಸಂಬಂಧವಿಲ್ಲ. ನೆಲಮಂಗಲ ಜನತೆ ಈ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ ಎಂದು ಶಾಸಕರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.ಪಕ್ಷದ ತೀರ್ಮಾನಕ್ಕೆ ಬದ್ಧ:
ಲಕ್ಕೇನಹಳ್ಳಿ ಗ್ರಾಪಂ ಅಧ್ಯಕ್ಷ ನಾರಾಯಣ್ ಮಾತನಾಡಿ, ಸ್ವಚ್ಛ ಪಂಚಾಯತಿ ಮಾಡುವ ನಿಟ್ಟಿನಲ್ಲಿ ಘನ ತ್ಯಾಜ್ಯ ಸಂಗ್ರಹಣಾ ಘಟಕ ಆರಂಭ ಮಾಡಲಾಗಿದ್ದು, ನರೇಗಾ ಯೋಜನೆಯಡಿ 18 ಲಕ್ಷ , 70 ಸಾವಿರ ರು., 15ನೇ ಹಣಕಾಸು ಯೋಜನೆಯಡಿ 2.5 ಲಕ್ಷ ರು., ಗ್ರಾಮ ಪಂಚಾಯತಿ ನಿಧಿಯಡಿ 2.5 ಲಕ್ಷ ರು. ಒಟ್ಟು 23 ಲಕ್ಷ, 70 ಸಾವಿರ ರು.ಗಳ ವೆಚ್ಚದಲ್ಲಿ ಒಂದೂವರೆ ಎಕರೆ ಸ್ವಂತ ಪಂಚಾಯತಿ ಜಾಗದಲ್ಲಿ ಘಟಕ ನಿರ್ಮಾಣ ಮಾಡಿದ್ದು, ಪ್ರತಿ ಮನೆಗೂ ತಿಂಗಳಿಗೆ 20 ಹಾಗೂ ವಾಣಿಜ್ಯ ಅಂಗಡಿ ಮತ್ತು ಹೋಟೆಲ್ ಗಳಿಗೆ 50 ರು. ನಂತೆ ಹಸಿ ಕಸ ಸಂಗ್ರಹಣೆ ಮಾಡಿ ಇಲ್ಲಿ ಬೇರ್ಪಡಿಸುವ ಕೆಲಸ ಮಾಡಲಾಗುತ್ತದೆ. ನಂತರ ಗೊಬ್ಬರದ ರೂಪದಲ್ಲಿ ಮಾರಾಟ ಮಾಡಲಿದ್ದು, ಈ ಮೂಲಕ ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಮಾಡಲಾಗುತ್ತದೆ. 48 ಹಳ್ಳಿಗಳಿಂದ ಕಸ ಸಂಗ್ರಹಣೆ ಮಾಡುವ ಗುರಿ ಇಟ್ಟುಕೊಂಡಿದ್ದು, ಬೇಡಿಕೆಗೆ ತಕ್ಕಂತೆ ಕಸ ಸಂಗ್ರಹಣ ವಾಹನ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದರು.