ಕನ್ನಡಪ್ರಭ ವಾರ್ತೆ ವಿಜಯಪುರ
ಈ ವೇಳ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಂ.ಅವಟಿ ಮಾತನಾಡಿ, ವಿದ್ಯಾರ್ಥಿಗಳು ಭಯಮುಕ್ತರಾಗಿ ಪರೀಕ್ಷೆ ಬರೆಯಬೇಕು. ಪರೀಕ್ಷಾ ಕೊಠಡಿಯಲ್ಲಿ ನಕಲು ಮಾಡಲು ಅವಕಾಶವಿಲ್ಲ. ಇಡೀ ಪರೀಕ್ಷಾ ಕೇಂದ್ರ ಹಾಗೂ ಕೊಠಡಿಗಳು ಸಿಸಿ ಕ್ಯಾಮರಾ ನಿಗಾದಲ್ಲಿರುತ್ತವೆ. ಶಾಂತತೆಯಿಂದ ಪ್ರಶ್ನೆ ಪತ್ರಿಕೆಯನ್ನು ಅರ್ಥೈಸಿಕೊಂಡು ಉತ್ತರಗಳನ್ನು ಬರೆದು ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕು ಎಂದು ಧೈರ್ಯ ತುಂಬಿದರು.ಪ್ರತಿ ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಪರೀಕ್ಷಾ ಕೇಂದ್ರದ ಹೊರಗೆ ಸಾರ್ವಜನಿಕರಿಂದ ಯಾವುದೇ ತೊಂದರೆಯಾಗದಂತೆ ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಉಪ ಅಧಿಕ್ಷಕರು ಬಿ.ಎಂ.ಬಡಿಗೇರ, ಕಸ್ಟೋಡಿಯನ್ ಸಿ.ಎಲ್.ಪಾಟೀಲ್, ಸಂಸ್ಥೆಯ ಮುಖ್ಯೋಪಾಧ್ಯಾಯ ಚಿದಾನಂದ ಅವಟಿ, ಎಂ.ಡಿ. ಪಡಂದಾರ, ಬಿ.ಸಿ.ನಾವಿ, ಆನಂದ ಝಂಡೆ, ಗಜಾನಂದ ಜುಂಜರವಾಡ, ಎಸ್.ಎನ್.ಬಾಗಲಕೋಟ ಮುಂತಾದವರು ಇದ್ದರು.