ಕಾರ್ಖಾನೆಗಳ ಬಫರ್ ಝೋನ್ ಸಹ ಇಲ್ಲ
ಜನರ ಆರೋಗ್ಯದ ಮೇಲೆಯೂ ದುಷ್ಪರಿಣಾಮ
ಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಇದು, ಸರ್ಕಾರವೇ ನೀಡಿರುವ ಉತ್ತರ. ಮುಚ್ಚುವ ಕುರಿತು ಮಾಡಲಾದ ಆದೇಶವೇನಾಯಿತು? ಎನ್ನುವುದು ಮಾತ್ರ ನಿಗೂಢ.
17 ಬೃಹತ್ ಕಾರ್ಖಾನೆಗಳು ಸೇರಿದಂತೆ ಜಿಲ್ಲೆಯಲ್ಲಿ ಬರೋಬ್ಬರಿ 202 ಇಂಡಸ್ಟ್ರೀಗಳು ಇವೆ ಎಂದು ಲಿಖಿತ ಉತ್ತರದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಸುಮಾರು 50ಕ್ಕೂ ಹೆಚ್ಚು ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿಯೇ ಇದ್ದು, ಹಾನಿಕಾರಕವಾಗಿರುವ ಕಾರ್ಖಾನೆಗಳೇ ಆಗಿವೆ.
ಅಚ್ಚರಿ ಎಂದರೆ ಕೊಪ್ಪಳ ಬಳಿ ತಲೆ ಎತ್ತಿರುವ ಕಾರ್ಖಾನೆಗಳಿಗೆ ಬಫರ್ ಝೋನ್ ಸಹ ಇಲ್ಲ. ಯಾವುದೇ ಕಾರ್ಖಾನೆ ಪ್ರಾರಂಭಿಸಲು ಅದು ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಶೇ. 30ರಷ್ಟು ಬಫರ್ ಝೋನ್ ಪ್ರದೇಶವನ್ನು ಕಾಯ್ದಿರಿಸಬೇಕು ಮತ್ತು ಅದನ್ನು ಹಸಿರು ಕಾಡಾಗಿ ಬೆಳೆಸಿರಬೇಕು ಎನ್ನುವುದು ನಿಯಮ.
ಇದಲ್ಲದೆ ಜನರ ಆರೋಗ್ಯದ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದೆ. ಬಫರ್ ಝೋನ್ ಇಲ್ಲದೆ ಇರುವುದರಿಂದ ಅಕ್ಕಪಕ್ಕದಲ್ಲಿಯೇ ಇರುವ ಕೃಷಿ ಭೂಮಿಯಲ್ಲಿ ಬೆಳೆಯುವ ಬೆಳೆಗಳ ಮೇಲೆಯು ದುಷ್ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿಯೇ ಉಲ್ಲೇಖ ಮಾಡಲಾಗಿದೆ.
ಅಚ್ಚರಿ ಎಂದರೆ ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಈ ಕುರಿತು ಸ್ಪಷ್ಟವಾಗಿ ವರದಿಯನ್ನೇ ನೀಡಿದ್ದರೂ ಯಾವುದೇ ಕಾರ್ಖಾನೆ ಮೇಲೆ ಇದುವರೆಗೂ ಕ್ರಮವಾಗಿರುವ ಕುರಿತು ಉತ್ತರದಲ್ಲಿ ಮಾಹಿತಿ ನೀಡಿಲ್ಲ.
ಕೊಪ್ಪಳ ಬಳಿ ಬೃಹತ್ ಕಾರ್ಖಾನೆ ಪ್ರಾರಂಭಿಸುವುದಕ್ಕೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿ ನೀಡಿದ್ದರೂ ಸಹ ಶಾಸಕ ರಾಘವೇಂದ್ರ ಹಿಟ್ನಾಳ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲದಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಬೃಹತ್ ಕಾರ್ಖಾನೆ ಪ್ರಾರಂಭಿಸಲು ತಮ್ಮ ಸಹಕಾರ ಇದೆಯೋ ಅಥವಾ ವಿರೋಧ ಇದೆಯೋ ಎನ್ನುವುದನ್ನು ಶಾಸಕರು ಸ್ಪಷ್ಟಪಡಿಸಬೇಕು ಎನ್ನುವ ಕೂಗು ಸಹ ಕೇಳಿ ಬರುತ್ತಿದೆ.ಕಾರ್ಖಾನೆ ವಿರುದ್ಧ ಜನಾಂದೋಲನವಾಗಿದ್ದು, ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಇದನ್ನು ವಿರೋಧಿಸಿ, ಹೇಳಿಕೆ ನೀಡಿದ್ದು ಅಲ್ಲದೆ ಪ್ರತಿಭಟನೆ ಮಾಡುವುದಾಗಿ ಹೇಳಿವೆ. ಆದರೆ, ಕಾಂಗ್ರೆಸ್ ನಾಯಕರು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಹಾಗೂ ವಿಶೇಷವಾಗಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ತಮ್ಮ ನಿಲುವು ಇದುವರೆಗೂ ವ್ಯಕ್ತಪಡಿಸದೇ ಇರುವುದು ಭಾರಿ ಚರ್ಚೆಗೆ ಕಾರಣವಾಗಿದೆ.