ಬಳ್ಳಾರಿ ಅಭಿವೃದ್ಧಿಗೆ ರಾಮುಲು, ಬಿಜೆಪಿ ಕೊಡುಗೆ ಏನು: ಡಿಕೆ ಶಿವಕುಮಾರ ಪ್ರಶ್ನೆ

KannadaprabhaNewsNetwork |  
Published : Apr 30, 2024, 02:03 AM IST
ಸ್ | Kannada Prabha

ಸಾರಾಂಶ

ಬಿಜೆಪಿ ಎಂಪಿಗಳು ಪಾರ್ಲಿಮೆಂಟ್‌ನಲ್ಲಿ ಮಾತೇ ಆಡಲಿಲ್ಲವಲ್ಲ? ಬಳ್ಳಾರಿಯನ್ನು ಏಕೆ ಅಭಿವೃದ್ಧಿ ಮಾಡಲಿಲ್ಲ? ಬಿಜೆಪಿ ಡಬಲ್ ಎಂಜಿನ್ ಸರ್ಕಾರದಿಂದ ಏನು ಅಭಿವೃದ್ಧಿ ಮಾಡಿದ್ರಿ? ಅಚ್ಛೇ ದಿನ ಬಂತಾ?

ಕೂಡ್ಲಿಗಿ: ನಿನ್ನ ಅನುಕೂಲಕ್ಕೆ ನೀನು ಹೇಗಾದರೂ ರಾಜಕೀಯ ಮಾಡಬಹುದಾ ರಾಮುಲು? ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ ನಿನ್ನ ಹಾಗೂ ನಿಮ್ಮ ಪಕ್ಷದ ಕೊಡುಗೆ ಏನು? ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಏಕವಚನದಲ್ಲಿ ಪ್ರಶ್ನಿಸಿದರು.

ಸೋಮವಾರ ಇಲ್ಲಿ ಬಳ್ಳಾರಿ ಲೋಕಸಭಾ ಅಭ್ಯರ್ಥಿ ಈ.ತುಕಾರಾಂ ಪರ ಮತಯಾಚಿಸಿದ ಅವರು, ಬಿಜೆಪಿ ಎಂಪಿಗಳು ಪಾರ್ಲಿಮೆಂಟ್‌ನಲ್ಲಿ ಮಾತೇ ಆಡಲಿಲ್ಲವಲ್ಲ? ಬಳ್ಳಾರಿಯನ್ನು ಏಕೆ ಅಭಿವೃದ್ಧಿ ಮಾಡಲಿಲ್ಲ? ಬಿಜೆಪಿ ಡಬಲ್ ಎಂಜಿನ್ ಸರ್ಕಾರದಿಂದ ಏನು ಅಭಿವೃದ್ಧಿ ಮಾಡಿದ್ರಿ? ಅಚ್ಛೇ ದಿನ ಬಂತಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.

ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಕಲಂ ೩೭೧ಜೆ ಜಾರಿಗೊಳಿಸಿದೆ. ಆದರೆ ನಿನ್ನ ಸಾಧನೆ ಏನು ಶ್ರೀರಾಮುಲು? ಎಂದು ತರಾಟೆಗೆ ತೆಗೆದುಕೊಂಡರು.

ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಮಾತನಾಡಿ, ಈ ಬಾರಿ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸಲು ಜನರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.

ಶ್ರೀರಾಮುಲು ರಾಜಕೀಯ ಪುನರ್ಜನ್ಮದ ಬಗ್ಗೆ ಮಾತನಾಡುವುದು ಸಲ್ಲದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಸೋತಿದ್ದಾರೆ. ಅವರಂತೆ ಬೇರೆ ಅಭ್ಯರ್ಥಿಗಳು ಪರಾಜಯಗೊಂಡಿದ್ದಾರೆ. ಅವರೆಲ್ಲರೂ ರಾಜಕೀಯ ಪುನರ್ಜನ್ಮದ ಬಗ್ಗೆ ಮಾತನಾಡುತ್ತಾರಾ? ರಾಮುಲು ಅವರನ್ನು ಜನರು ಈ ಬಾರಿಯೂ ಧಿಕ್ಕರಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ