ಎಚ್ಚರಗೊಂಡಾಗ ಎಲ್ಲರೂ ಮಣ್ಣಿನಲ್ಲಿ ಮುಚ್ಚಿಹೋಗಿದ್ರು

KannadaprabhaNewsNetwork |  
Published : May 01, 2026, 03:30 AM IST
Balaji, book Marchant  shivajinagar | Kannada Prabha

ಸಾರಾಂಶ

ಎರಡು ಜನ ಲೇಡಿಸು ಕೇರಳದವ್ರು ಬಂದ್ರು, ಆಲಿಕಲ್ಲು ಅವರ್ ಮೇಲೆ ಬೀಳಬಾರ್ದು ಅಂತ ಟಾರ್ಪಾಲ್ ಗಟ್ಟಿಯಾಗಿ ಹಿಡ್ಕೊಂಡಿದ್ದೆ. ಎಡಗಡೆ ಗೋಡೆ ಸ್ವಲ್ಪ ಅಲ್ಲಾಡ್ತು, ಇನ್ನಾ ನಾನು ನೋಡ್ತಾನೆ ಇದ್ದೀನಿ, ಬಲಗಡೆಯಿಂದ ನನ್ನ ತಲೆ ಮೇಲೆ ಕಾಂಪೌಂಡ್ ಪೀಸ್ ಬಿತ್ತು. ಆಗ ತಲೆ ಸುತ್ತಿ ಕೆಳಗೆ ಬಿದ್ದೆ, ಅಷ್ಟೇ ನನಗೆ ಗೊತ್ತು, ಕಣ್ಣು ಬಿಟ್ಟಾಗ ಪೂರ್ತಿ ಗೋಡೆ ಎಲ್ಲರ ಮೇಲೆ ಬಿದ್ದಿತ್ತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಜನ ಲೇಡಿಸು ಕೇರಳದವ್ರು ಬಂದ್ರು, ಆಲಿಕಲ್ಲು ಅವರ್ ಮೇಲೆ ಬೀಳಬಾರ್ದು ಅಂತ ಟಾರ್ಪಾಲ್ ಗಟ್ಟಿಯಾಗಿ ಹಿಡ್ಕೊಂಡಿದ್ದೆ. ಎಡಗಡೆ ಗೋಡೆ ಸ್ವಲ್ಪ ಅಲ್ಲಾಡ್ತು, ಇನ್ನಾ ನಾನು ನೋಡ್ತಾನೆ ಇದ್ದೀನಿ, ಬಲಗಡೆಯಿಂದ ನನ್ನ ತಲೆ ಮೇಲೆ ಕಾಂಪೌಂಡ್ ಪೀಸ್ ಬಿತ್ತು. ಆಗ ತಲೆ ಸುತ್ತಿ ಕೆಳಗೆ ಬಿದ್ದೆ, ಅಷ್ಟೇ ನನಗೆ ಗೊತ್ತು, ಕಣ್ಣು ಬಿಟ್ಟಾಗ ಪೂರ್ತಿ ಗೋಡೆ ಎಲ್ಲರ ಮೇಲೆ ಬಿದ್ದಿತ್ತು.

ಬೌರಿಂಗ್ ಆಸ್ಪತ್ರೆಯ ದುರಂತದಲ್ಲಿ ಏಳು ಜನ ಸಾವಿಗೀಡಾಗುವ ಮುನ್ನ ಮೃತರ ಜೊತೆಯಲ್ಲಿ 30 ನಿಮಿಷಗಳವರೆಗೆ ಮಳೆಯಲ್ಲಿ ನಿಂತು, ಸ್ವಲ್ಪದರಲ್ಲೇ ಪಾರಾದ ಬಟ್ಟೆ ವ್ಯಾಪಾರಿ ವಿಜಯನಗರದ ನದೀಂಪಾಷಾ (51) ದುರಂತವನ್ನು ವಿವರಿಸಿದರು.

ಜೋರು ಮಳೆ, ಸಂಜೆ ಸುಮಾರು ಐದೂ ಮುಕ್ಕಾಲರ ಸುಮಾರಿಗೆ ಮಳೆ ಬೀಳ್ತಾನೆ ಇತ್ತು. ಆಲಿಕಲ್ಲು ಹೊಡೆತ ಜೋರಾಗೇ ಇತ್ತು. ಮಳೆ ಸ್ಟಾಟಿಂಗ್ ನಲ್ಲಿ ಗೋಡೆ ಕುಸಿದಿರಲಿಲ್ಲ. ಅರ್ಧಗಂಟೆ ನಂತ್ರ ಗೋಡೆ ಅಲ್ಲಾಡಲು ಶುರುವಾಯ್ತು, ನಾನು ಎರಡ್ ಹೆಜ್ಜೆ ಮುಂದೆ ಬಂದೆ. ಇಲ್ಲದಿದ್ರೆ ನಾನೂ ಗೋಡೆಯೊಳಗೆ ಸಮಾಧಿಯಾಗುತ್ತಿದ್ದೆ ಎಂದರು.ಮಣ್ಣಲ್ಲಿ ಸಿಕ್ಕಿಕೊಂಡವರಲ್ಲಿ ಒಂದು ಮಗು ಕೂಡಾ ಇತ್ತು. ನನ್ನ ಜೊತೆಯಲ್ಲಿ ವ್ಯಾಪಾರ ಮಾಡ್ತಾ ಇದ್ದ ಫಯಾಜ್, ಫಾರೂಕ್, ರಿಯಾಜ್ ಇಬ್ಬರು ಹೆಂಗಸ್ರು ಮಣ್ಣಲ್ಲಿ ಮುಚ್ಚಿಹೋಗಿದ್ರು, ನಾನು ಎಚ್ಚರಗೊಂಡಾಗ ನನ್ನ ಕಾಲು ಕೂಡ ಮಣ್ಣಿನಡಿ ಸಿಕ್ಕಿಕೊಂಡಿತ್ತು. ನಾನು ಕಾಲು ಎಳೆದುಕೊಂಡು ಚರ್ಚ್ ಒಳಗೆ ಹೋದೆ, ಅಲ್ಲಿ ಅವರು ನನಗೆ ಟವಲ್ ಕೊಟ್ರು, ನಡುಗ್ತಾ ಇದ್ದ ನನ್ನ ಮಣ್ಣನ್ನೆಲ್ಲಾ ಅವರೇ ತೊಳೆದ್ರು ಎಂದು ವಿವರಿಸಿದರು.

ಕಳೆದ ವರ್ಷದ ಮಳೆಯಲ್ಲಿಯೇ ಈ ಗೋಡೆಯ ಸಣ್ಣ ತೂತುಗಳಿಂದ ನೀರು ಬರ್ತಾ ಇತ್ತು. ಆಗಲೆ ಸ್ವಲ್ಪ ಡೌಟ್ ಇತ್ತು. ಅದನ್ನ ನೆನೆಸಿಕೊಂಡು ನಾನು ಈಗಲೂ ಹಾಗೆಯೇ ಬರಬಹುದು ಅಂದುಕೊಂಡಿದ್ದೆ. ಆದ್ರೆ, ಗೋಡೆಯೇ ಬಿತ್ತು, ಈ ಕಾಂಪೌಂಡ್ ಪಕ್ಕ ಸುಮಾರು 25 ರಿಂದ 30 ಜನ ವ್ಯಾಪಾರ ಮಾಡ್ತಾ ಇದ್ರು, ಆ ಕಡೆ ಯಾರೂ ಇರಲಿಲ್ಲ, ಹೆಚ್ಚಿಗೆ ಜನ ನಮ್ಮ ಕಡೆಯೇ ಇದ್ರು, ಈ ಕಡೆಯೇ ಗೋಡೆ ಬಿತ್ತು, ದೇವರು ಈ ರೀತಿ ಮಾಡ್ಬಾರದಿತ್ತು ಎಂದರು.

ದುರಂತವನ್ನು ಕಣ್ಣಾರೆ ಕಂಡ ಮತ್ತೊಬ್ಬ ಪ್ರತ್ಯಕ್ಷ ದರ್ಶಿ 65 ವರ್ಷ ವಯಸ್ಸಿನ ಪುಸ್ತಕ ವ್ಯಾಪಾರಿ ಬಾಲಾಜಿ ಘಟನೆಯ ವಿವರಿಸಿದ್ದು ಹೀಗೆ, ಮಳೆ ಶುರುವಾಗ್ತಾ ಇದ್ದಂತೆ ಆಲಿಕಲ್ಲು ಬೀಳ್ತಾ ಇದ್ದವು. ನಾನು ಅವುಗಳಿಂದ ತಪ್ಪಿಸಿಕೊಳ್ಳಲು ಪುಸ್ತಕಕ್ಕೆ ಮುಚ್ಚಿದ್ದ ಟಾರ್ಪಾಲಿನ ಒಳಗೆ ನಿಂತಿದ್ದೆ. ದಪ್ ಅಂತ ಶಬ್ದ ಜೋರಾಗಿ ಬಂತು. ಟಾರ್ಪಾಲ್ ತೆಗೆದು ನೋಡಿದ್ರೆ ಎಲ್ಲಾ ಕಿರುಚಾಡ್ತಾ ಇದ್ರು, ನಂತ್ರ ಜೆಸಿಬಿ ಬಂದು ಶವಗಳನ್ನು ಒಂದೊಂದಾಗಿ ಹೊರಗೆ ತೆಗೆಯುತ್ತಿದ್ದರೆ ಕಣ್ಣಲ್ಲಿ ನೀರು ಬಂತು ಎಂದು ನೆನಪಿಸಿಕೊಂಡರು.

ನಾನು ಈ ಚಿಕ್ಕ ಗಲ್ಲಿಯಲ್ಲಿ ಸುಮಾರು 30 ವರ್ಷಗಳಿಂದ ಹಳೆಯ ಪುಸ್ತಕಗಳನ್ನು ವ್ಯಾಪಾರ ಮಾಡುತ್ತಿದ್ದೇನೆ. ಯಾವಾಗಲೂ ಈ ರೀತಿಯ ಮಳೆ ನೋಡಿರಲಿಲ್ಲ. ಜಲಪಾತದಂತೆ ಆ ಗೋಡೆಯ ಕಡೆಯಿಂದ ನೀರು ಬೀಳ್ತಾ ಇತ್ತು. ಆಲಿಕಲ್ಲು ಹೊಡೆತದಿಂದ ಬೆನ್ನೆಲ್ಲಾ ನೋವು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಮೋಟ್‌ ಕೇಸ್‌ ದಾಖಲಿಸಲು ಲೋಕಾಯುಕ್ತ ಸೂಚನೆ
ಗ್ರೇಟರ್‌ ಬೆಂಗಳೂರು ಸಮಗ್ರಉಪನಗರಕ್ಕೆ ಸಂಪುಟ ಅಸ್ತು