ಶಿರಗುಂಪಿ ಅಂಗನವಾಡಿ ಕೇಂದ್ರದ ಉದ್ಘಾಟನೆ ಯಾವಾಗ?

KannadaprabhaNewsNetwork |  
Published : Sep 12, 2026, 02:45 AM IST
ಯಲಬುರ್ಗಾ ತಾಲೂಕಿನ ಶಿರಗುಂಪಿ ಗ್ರಾಮದ 2ನೇ ಅಂಗನವಾಡಿಯ ಹಳೆಯ ಕಟ್ಟಡ. | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಶಿರಗುಂಪಿ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಜೀವ ಅಂಗೈಯಲ್ಲಿ ಎಂಬಂತಾಗಿದೆ. ಅಂಗನವಾಡಿ ಒಳಗೆ ಹೋದರೆ ಸಾಕು ಬಿರುಕುಬಿಟ್ಟ ಗೋಡೆಗಳು, ನೆಲದಂಚಿನಲ್ಲಿ ನೋಡಿದರೆ ಹೆಗ್ಗಣಗಳು ನೆಲ ಅಗೆದ ತಗ್ಗುಗಳು, ಇದರ ಮಧ್ಯೆ 49 ಕಂದಮ್ಮಗಳು ಕುಳಿಕೊಳ್ಳುವ ದುಸ್ಥಿತಿ.

ಯಲಬುರ್ಗಾ: ತಾಲೂಕಿನ ಶಿರಗುಂಪಿ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಜೀವ ಅಂಗೈಯಲ್ಲಿ ಎಂಬಂತಾಗಿದೆ. ಅಂಗನವಾಡಿ ಒಳಗೆ ಹೋದರೆ ಸಾಕು ಬಿರುಕುಬಿಟ್ಟ ಗೋಡೆಗಳು, ನೆಲದಂಚಿನಲ್ಲಿ ನೋಡಿದರೆ ಹೆಗ್ಗಣಗಳು ನೆಲ ಅಗೆದ ತಗ್ಗುಗಳು, ಇದರ ಮಧ್ಯೆ 49 ಕಂದಮ್ಮಗಳು ಕುಳಿಕೊಳ್ಳುವ ದುಸ್ಥಿತಿ.

ಯಲಬುರ್ಗಾ ತಾಲೂಕಿನ ಶಿರುಗುಂಪಿ ಗ್ರಾಮದ 2ನೇ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ ಮಕ್ಕಳಿಗೆ ಇನ್ನೂ ನೂತನ ಅಂಗನವಾಡಿ ಕೇಂದ್ರಕ್ಕೆ ಹೋಗುವ ಭಾಗ್ಯ ಸಿಕ್ಕಿಲ್ಲ. ಹಳೆಯ ಬಾಡಿಗೆ ಕಟ್ಟಡದಲ್ಲಿಯೇ ಪಾಠ ಕೇಳುವ ದೌರ್ಭಾಗ್ಯ ಮಕ್ಕಳದ್ದಾಗಿದೆ.

ಅಂಗನವಾಡಿಯಲ್ಲಿ ಬರುವ ಆಹಾರ ಸಾಮಗ್ರಿಗಳನ್ನು ಸರಿಯಾಗಿ ಇಡಲು ಸ್ಥಳಾವಕಾಶ ಇಲ್ಲ. ಅಲ್ಲದೆ, ಕೇಂದ್ರದ ನೆಲವನ್ನು ಹೆಗ್ಗಣಗಳು ಅಗೆದಿವೆ. ಕೇಂದ್ರಕ್ಕೆ ಬಂದ ಕೂಡಲೇ ಅಂಗನವಾಡಿ ಶಿಕ್ಷಕರು, ಕಾರ್ಯಕರ್ತೆಯರು ಆ ಮಣ್ಣನ್ನು ತೆಗೆಯುವ ಕೆಲಸ ಮಾಡಬೇಕು. ಇದಕ್ಕೂ ತೀವ್ರ ಸಮಸ್ಯೆ ಎಂಬಂತೆ ಮಕ್ಕಳಿಗಾಗಿ ನೀಡಲು ತಂದಿರುವ ಆಹಾರ ಸಾಮಗ್ರಿಯಲ್ಲಿ ಹೆಗ್ಗಣಗಳ ಓಡಾಟವಾದರೆ, ಅವರ ಆರೋಗ್ಯ ಸಮಸ್ಯೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ಸಹ ಆಗಿದೆ.

ಅಂಗನವಾಡಿ ಕೇಂದ್ರದ ಗೋಡೆಗಳು ಬಿರುಕು ಬಿಟ್ಟಿದ್ದು, ಮಕ್ಕಳ ಮೇಲೆ ಬಿದ್ದರೆ ಅವರಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಇಷ್ಟೆಲ್ಲ ಸಮಸ್ಯೆ ಇದ್ದರೂ ಸಿಡಿಪಿಒ ಇಲಾಖೆ ನೂತನ ಅಂಗನವಾಡಿ ಕೇಂದ್ರದತ್ತ ಯಾಕೆ ಚಿತ್ತ ಹರಿಸುತ್ತಿಲ್ಲ ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಅಂಗನವಾಡಿ ಕೇಂದ್ರಕ್ಕೆಂದು ನೂತನ ಕಟ್ಟಡ ನಿರ್ಮಾಣ ಆಗಿದೆ. ಆದರೂ ಇನ್ನೂ ಉದ್ಘಾಟನೆ ಆಗುತ್ತಿಲ್ಲ. ಹಳೆಯ ಕೇಂದ್ರದಲ್ಲಿ ಜೀವ ಭಯದಲ್ಲಿ ಮಕ್ಕಳು ದಿನ ಕಳೆಯುವ ಸ್ಥಿತಿ ಇದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ ನೂತನ ಅಂಗನವಾಡಿಯಲ್ಲಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಶಿರಗುಂಪಿ ಅಂಗನವಾಡಿ ಕೇಂದ್ರದ ಕೆಲಸ ಪೂರ್ಣ ಆಗದ ಕಾರಣ ಉದ್ಘಾಟನೆ ಮಾಡಿರಲಿಲ್ಲ. ಶೀಘ್ರ ಕೆಲಸ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು ಎಂದು ಯಲಬುರ್ಗಾ ಸಿಡಿಪಿಒ ಹಾಗೂ ಕುಕನೂರು ತಾಪಂ ಇಒ

ಬೆಟದಪ್ಪ ಮಾಳೆಕೊಪ್ಪ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಜನಜೀವನ ಅಭಿವೃದ್ಧಿ: ರಾಬಿನ್ ದೇವಯ್ಯ
ರಾಮಕೃಷ್ಣರ ಸಾಹಿತ್ಯ ಕ್ಷೇತ್ರ ಕೊಡುಗೆ ಪರಿಚಯ ಅಗತ್ಯ: ನಾಗೇಂದ್ರಬಾಬು