ತ್ರಿದಾಸೋಹ ಇದ್ದೆಡೆ ಪರಮಾತ್ಮ ಇರುತ್ತಾನೆ: ಶ್ರೀಗಳು

KannadaprabhaNewsNetwork |  
Published : Dec 16, 2023, 02:00 AM IST
15ಕೆಆರ್ ಎಂಎನ್‌ 5.ಜೆಪಿಜಿಸೋಲೂರು ಗ್ರಾಮದ ಚಿಲುಮೆಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಸವಲಿಂಗಸ್ವಾಮೀಜಿರವರ ಎರಡನೇ ಪುಣ್ಯಾರಾಧನೆ ಸಮಾರಂಭದಲ್ಲಿ ವಿದ್ಯಾರ್ಥಿನಿಲಯಕ್ಕೆ ಸಿದ್ದಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿರವರು ಗುದ್ದಲಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಕುದೂರು: ಮಕ್ಕಳಿಗೆ ಉಚಿತ ವಿದ್ಯೆ, ವಸತಿ, ಊಟ ನೀಡಿದರೆ ಅಲ್ಲಿ ನಿಜಕ್ಕೂ ಪರಮಾತ್ಮನಿರುತ್ತಾನೆ. ಇಂತಹ ಸತ್ಯವನ್ನು ಅರಿತೇ ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಹಿರಿಯ ಶ್ರೀಗಳು ಒದಗಿಸಿಕೊಟ್ಟು ಇದರ ಸವಿಯನ್ನು ಎಲ್ಲಾ ಮಠಗಳು ಅನುಭವಿಸಲು ಮಾರ್ಗದರ್ಶನ ಮಾಡಿ ಹೋಗಿದ್ದಾರೆ ಎಂದು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕುದೂರು: ಮಕ್ಕಳಿಗೆ ಉಚಿತ ವಿದ್ಯೆ, ವಸತಿ, ಊಟ ನೀಡಿದರೆ ಅಲ್ಲಿ ನಿಜಕ್ಕೂ ಪರಮಾತ್ಮನಿರುತ್ತಾನೆ. ಇಂತಹ ಸತ್ಯವನ್ನು ಅರಿತೇ ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಹಿರಿಯ ಶ್ರೀಗಳು ಒದಗಿಸಿಕೊಟ್ಟು ಇದರ ಸವಿಯನ್ನು ಎಲ್ಲಾ ಮಠಗಳು ಅನುಭವಿಸಲು ಮಾರ್ಗದರ್ಶನ ಮಾಡಿ ಹೋಗಿದ್ದಾರೆ ಎಂದು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಸೋಲೂರು ಚಿಲುಮೆಮಠದಲ್ಲಿ ಶ್ರೀ ಬಸವಲಿಂಗಸ್ವಾಮೀಜಿಯ 2ನೇ ಪುಣ್ಯಾರಾಧನೆ ಸಂದಂರ್ಭದಲ್ಲಿ ಮಕ್ಕಳ ವಸತಿ ಗೃಹಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ಅತ್ಯಂತ ಮಹತ್ವಪೂರ್ಣವಾದ ಐತಿಹ್ಯ ಹೊಂದಿರುವ ಚಿಲುಮೆಮಠದಲ್ಲಿ ವಿದ್ಯಾರ್ಥಿಗಳಿಗೆ ವಸತಿಗೃಹ ನಿರ್ಮಾಣ ಮಾಡುವುದರಿಂದ ಹಳ್ಳಿಗಾಡಿನ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮಕ್ಕಳಿಗೆ ಸರಿಯಾದ ಸಮಯಕ್ಕೆ ಶಿಕ್ಷಣ ಮತ್ತು ಸಂಸ್ಕಾರ ನೀಡಿದ್ದೇ ಆದರೆ ಅವರು ತಮ್ಮ ಮುಂದಿನ ದಾರಿಯನ್ನು ಕಂಡುಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಂಚುಗಲ್ ಬಂಡೇಮಠದ ಶ್ರೀಮಹಾಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಮಾತ್ರ ನಿಜವಾದ ಬೆಳಕು ನೀಡಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಒಂದು ಬಲಿಷ್ಟ ಸರ್ಕಾರ ಮಾಡಬಹುದಾದ ಕೆಲಸವನ್ನು ಶ್ರೀಮಠಗಳು ಮಾಡಿಕೊಂಡು ಬರುತ್ತಿರುವುದನ್ನು ದೇಶ ಬೆರಗಿನಿಂದ ನೋಡಿದೆ. ಈಗ ಇಂತಹ ಚಿಕ್ಕಪುಟ್ಟ ಮಠಗಳಲ್ಲೂ ಕೂಡಾ ಶಿಕ್ಷಣಕ್ರಾಂತಿಯಾಗಬೇಕೆಂದು ವಸತಿ ಶಾಲೆಗಳು ನಿರ್ಮಾಣ ಮಾಡಲು ಸಿದ್ದಗಂಗಾ ಮಠದ ಶ್ರೀಗಳು ನಮಗೆಲ್ಲಾ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.

ಕೆಎಸ್‌ ಆರ್ ಟಿಸಿ ಸಂಸ್ಥೆ ಮಾಜಿ ನಿರ್ದೇಶಕ ಭೃಂಗೇಶ್ ಮಾತನಾಡಿ, ಚಿಲುಮೆಮಠದಲ್ಲಿ ವಿದ್ಯಾಭ್ಯಾಸ ಮಾಡಲು ಅತ್ಯಂತ ಸುಂದರ ವಾತಾವರಣವಿದ್ದು, ಋಷಿಮುನಿಗಳ ತಪೋಸ್ಥಾನದಂತೆ ಕಂಡು ಬರುತ್ತಿದೆ. ಇಲ್ಲಿ ಶಿಕ್ಷಣ ಕ್ರಾಂತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಿಲುಮೆಯಲ್ಲಿ ನೂತನವಾಗಿ ನಿರ್ಮಿಸಿದ ಸುಂದರವಾದ ಗೋಪುರವನ್ನು ಸಿದ್ದಗಂಗಾ ಶ್ರೀಗಳು ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ, ಚಂದ್ರಣ್ಣ, ನಿವೃತ್ತ ಪ್ರಾಚಾರ್ಯ ಹೊನ್ನಶಾಮಯ್ಯ, ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್, ಶಿವಕುಮಾರ್ ಇತರರಿದ್ದರು.15ಕೆಆರ್ ಎಂಎನ್‌ 5.ಜೆಪಿಜಿ

ಸೋಲೂರು ಚಿಲುಮೆ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಸವಲಿಂಗ ಸ್ವಾಮೀಜಿಯ 2ನೇ ಪುಣ್ಯಾರಾಧನೆ ಸಮಾರಂಭದಲ್ಲಿ ವಿದ್ಯಾರ್ಥಿನಿಲಯಕ್ಕೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಗುದ್ದಲಿಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ