ಕಾಡು ಹಂದಿ ಬೇಟೆ: ಓರ್ವನ ಬಂಧನ 6ಜನ ಪರಾರಿ

KannadaprabhaNewsNetwork |  
Published : Jul 25, 2025, 12:30 AM IST
24ಶಿರಾ4: ಹಾಡು ಹಂದಿಗಳ ಮೃತ ದೇಹಗಳು | Kannada Prabha

ಸಾರಾಂಶ

ಶೀಬಿ ಗಸ್ತಿನ ವ್ಯಾಪ್ತಿಯ ಕಳ್ಳಂಬೆಳ್ಳ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೇ ನಂ 89ರಲ್ಲಿ ಕಾಡು ಹಂದಿ ಸುಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ 4 ಕಾಡುಹಂದಿಗಳ ಮೃತದೇಹ ಹಾಗೂ ಒಂದು ಬೈಕ್‌, ಒಂದು ಸತ್ತರ್‌, ಒಂದು ಚೂರಿ ಹಾಗೂ ಮಾಂಸ ಕತ್ತರಿಸಲು ಬಳಸುವ 2 ಮರದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ಶಿ ಶಿರಾ

ಶೀಬಿ ಗಸ್ತಿನ ವ್ಯಾಪ್ತಿಯ ಕಳ್ಳಂಬೆಳ್ಳ ಹೋಬಳಿ ತಿಪ್ಪನಹಳ್ಳಿ ಗ್ರಾಮದ ಸರ್ವೇ ನಂ 89ರಲ್ಲಿ ಕಾಡು ಹಂದಿ ಸುಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ 4 ಕಾಡುಹಂದಿಗಳ ಮೃತದೇಹ ಹಾಗೂ ಒಂದು ಬೈಕ್‌, ಒಂದು ಸತ್ತರ್‌, ಒಂದು ಚೂರಿ ಹಾಗೂ ಮಾಂಸ ಕತ್ತರಿಸಲು ಬಳಸುವ 2 ಮರದ ತುಂಡುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಗುರುವಾರ ಮಧ್ಯಾಹ್ನ ಸುಮಾರು 1.30ರ ಸಮಯದಲ್ಲಿ ಬೋರಸಂದ್ರ ಗ್ರಾಮದ ವಾಸಿಯಾದ ಲೋಕೇಶ ರಂಗದಾಸಪ್ಪ, ಸಿದ್ದಪ್ಪ ಬಿನ್‌ ತಿಪ್ಪೇಸ್ವಾಮಿ, ರಾಮಣ್ಣ ಬಿನ್‌ ಗೋವಿಂದಪ್ಪ ರವಿ , ರಮೇಶ, ಮೂರ್ತಿ ಬಿನ್‌ ತಿಗಳಪ್ಪ, ರಂಗಯ್ಯ ಬಿನ್‌ ಲೇಟ್‌ ರಾಜಣ್ಣ ಎಂಬುವವರು ಸೇರಿ ಕಾಡುಹಂದಿಗಳನ್ನು ಬೇಟೆಯಾಡಿ ಕಾಡಿನಲ್ಲಿಯೇ ಬೇಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಅರಣ್ಯಾ ಸಂರಕ್ಷಣಾಧಿಕಾರಿ ಶಶಿಧರ ಜಿ.ಆರ್‌ ಮಾರ್ಗದರ್ಶನದಲ್ಲಿ, ಮಧುಗಿರಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಲ್ಲಿಕಾರ್ಜುನಪ್ಪ ಎಚ್‌, ಶಿರಾ ವಲಯದ ವಲಯ ಅರಣ್ಯಾಧಿಕಾರಿ ನವನೀತ್‌ ಟಿ.ಎನ್‌, ಉಪವಲಯ ಅರಣ್ಯಾಧಿಕಾರಿ ನಾಗರಾಜು , ಶೀಬಿ ಗಸ್ತಿನ ಅರಣ್ಯ ಪಾಲಕ ನಿಂಗರಾಜು, ಸಹಾಯಕ ಸಿಬ್ಬಂದಿ ನಿಜಲಿಂಗಪ್ಪ ಇವರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಲೋಕೇಶ್ ಮಾತ್ರವೇ ಸೆರೆ ಸಿಕ್ಕಿದ್ದು ಉಳಿದವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ಶಿರಾ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವನ್ಯಜೀವಿ (ರಕ್ಷಣಾ) ಕಾಯ್ದೆ-1972ರ ಕಲಂ 2(16),9,39,51 ರಡಿ ಪ್ರಕರಣ ದಾಖಲಿಸಿ ಪರಾರಿಯಾದ 6 ಜನ ಆರೋಪಿಗಳ ಪತ್ತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''