ಕನ್ನಡಪ್ರಭ ವಾರ್ತೆ ಸಕಲೇಶಪುರ
ವಿದ್ಯುತ್ ಪ್ರವಹಿಸಿದ್ದರಿಂದ ಕಾಡಾನೆಯಿಂದ ಭಾರಿ ಪ್ರಮಾಣದ ರಕ್ತಸ್ರಾವವಾಗಿದ್ದು, ಆನೆ ಮೃತಪಟ್ಟ ಪ್ರದೇಶ ಸಂಪೂರ್ಣ ರಕ್ತದಿಂದ ತೊಯ್ದು ಹೋಗಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲೆ ಹೊಂಡ ತೋಡಿ ಹೂಳುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.ಚೆಸ್ಕಾಂ ಸಿಬ್ಬಂದಿ ವಿರುದ್ಧ ಆಕ್ರೋಶ:
ಕಾಡಾನೆ ಸಾವಿಗೆ ಚೆಸ್ಕಾಂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಮರಕ್ಕೆ ಕಟ್ಟಲಾಗಿದ್ದ ವಿದ್ಯುತ್ ಕಂಬದ ಗಯ್ ತಂತಿಯನ್ನು ಬದಲಿಸುವಂತೆ ಸಾಕಷ್ಟು ಬಾರಿ ಲೈನ್ಮ್ಯಾನ್ಗೆ ತಿಳಿಸಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದ ಪರಿಣಾಮ ಕಳೆದ ಒಂದು ವಾರದ ಹಿಂದೆ ಶಾಂತಪುರ ಗ್ರಾಮದ ಉದಯ ಎಂಬುವವರಿಗೆ ಸೇರಿದ ಹಸು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿತ್ತು. ಈ ಹಸುವನ್ನು ಕಾಡಾನೆ ಮೃತಪಟ್ಟ ಪ್ರದೇಶದಲ್ಲೇ ಹೂಳಲಾಗಿತ್ತು. ಇಂದು ಕಾಡಾನೆ ಮೃತಪಟ್ಟಿದೆ. ಆದ್ದರಿಂದ ಕಾಡಾನೆ ಸಾವಿಗೆ ಕಾರಣವಾಗಿರುವ ಲೈನ್ಮ್ಯಾನ್ ಸೇರಿದಂತೆ ಸಂಬಂಧಪಟ್ಟ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.