ತೋಟಗಳಿಗೆ ಕಾಡಾನೆಗಳ ಕಾಟ

KannadaprabhaNewsNetwork |  
Published : Feb 05, 2026, 04:30 AM IST
ಕಾಡಾನಡೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಖಾನಾಪುರ ತಾಲೂಕಿನ ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿ ತೀರದಲ್ಲಿ ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳು ಸೋಮವಾರ ರಾತ್ರಿ ನೀಲಾವಡೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿವೆ. ಕಾಡಾನೆಗಳ ಕಾಲ್ತುಳಿತಕ್ಕೆ ನೀಲಾವಡೆಯ ರೈತ ರಮೇಶ ನಾಯಕ ಅವರ ಬಾಳೆ, ಅಡಿಕೆ ತೋಟ ಸಂಪೂರ್ಣ ಬಲಿಯಾಗಿದೆ. ಆನೆಗಳ ಉಪಟಳದಿಂದ ಬೆಳೆಯನ್ನು ಸಂರಕ್ಷಿಸಬೇಕು.

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕಿನ ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿ ತೀರದಲ್ಲಿ ಕಳೆದ ಹಲವು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳು ಸೋಮವಾರ ರಾತ್ರಿ ನೀಲಾವಡೆ ಹಾಗೂ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆಹಾನಿ ಮಾಡುತ್ತಿವೆ. ಕಾಡಾನೆಗಳ ಕಾಲ್ತುಳಿತಕ್ಕೆ ನೀಲಾವಡೆಯ ರೈತ ರಮೇಶ ನಾಯಕ ಅವರ ಬಾಳೆ, ಅಡಿಕೆ ತೋಟ ಸಂಪೂರ್ಣ ಬಲಿಯಾಗಿದೆ. ಆನೆಗಳ ಉಪಟಳದಿಂದ ಬೆಳೆಯನ್ನು ಸಂರಕ್ಷಿಸಬೇಕು. ಈಗಾಗಲೇ ಉಂಟಾಗಿರುವ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನೀಲಾವಡೆ ಹಾಗೂ ಪಕ್ಕದ ಗ್ರಾಮಗಳ ರೈತರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಬೆಳೆಹಾನಿ ಮಾಡುತ್ತಿರುವ ಗಜಪಡೆ ನೀಲಾವಡೆ ಗ್ರಾಮದ ಬಳಿ ಆಗಮಿಸಿ ಐದಾರು ವಾರಗಳು ಕಳೆದಿವೆ. ಈ ಸಂದರ್ಭದಲ್ಲಿ ಗಜಪಡೆಯಲ್ಲಿದ್ದ ಒಂದು ಹೆಣ್ಣಾನೆಗೆ ಪ್ರಸವವಾಗಿ ಮರಿಯಾನೆ ಜನಿಸಿದೆ. ತಮ್ಮೊಡನೆ ಮರಿ ಇರುವ ಕಾರಣ ಆನೆಗಳ ಹಿಂಡು ನೀಲಾವಡೆ ಪ್ರದೇಶವನ್ನು ಬಿಟ್ಟು ಬೇರೆಡೆ ಕದಲುತ್ತಿಲ್ಲ. ಹಗಲು ಹೊತ್ತು ಮರಿಯಾನೆಯ ರಕ್ಷಣೆ ಮಾಡುವ ಆನೆಗಳು ರಾತ್ರಿ ಕೃಷಿ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಆನೆಗಳನ್ನು ಬೇರೆಡೆ ಸಾಗಿಸುವಲ್ಲಿ ಅರಣ್ಯ ಇಲಾಖೆ ಪ್ರಯತ್ನಗಳೂ ವಿಫಲವಾಗಿವೆ. ಆನೆಗಳ ಕಾಟಕ್ಕೆ ಈ ಭಾಗದ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೀಲಾವಡೆ ಗ್ರಾಪಂ ಸದಸ್ಯ ವಿನಾಯಕ ಮುತಗೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆನೆಗಳನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆದಿದೆ. ಇತ್ತ ರೈತರ ಬೆಳೆಹಾನಿಗೆ ಪರಿಹಾರ ನೀಡುವ ಕೆಲಸವೂ ಪ್ರಗತಿಯಲ್ಲಿದೆ. ರೈತರು ಆತಂಕ ಪಡದೇ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ಕೋರಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?