ಕನ್ನಡಪ್ರಭ ವಾರ್ತೆ ಮೈಸೂರು
ವಿಶ್ವ ಹುಲಿ ದಿನದ ಅಂಗವಾಗಿ ಮೈಸೂರಿನ ಮೃಗಾಲಯ ಸಭಾಂಗಣದಲ್ಲಿ ರೋರಿಂಗ್ ಫಾರ್ವರ್ಡ್: ಎಫೆಕ್ಟಿವ್ ಆಕ್ಷನ್ಸ್ ಫಾರ್ ಬಿಗ್ ಕ್ಯಾಟ್ ಕನ್ಸರ್ವೇಶನ್ ಕುರಿತು ಆಯೋಜಿಸಿದ್ದ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಹುಲಿ ಸಂಖ್ಯೆಯಲ್ಲಿ ಸುಧಾರಣೆ ಆದರೂ ಹುಲಿ ಸೇರಿದಂತೆ ದೊಡ್ಡ ಬೆಕ್ಕುಗಳ ಸಂರಕ್ಷಣೆ ಸವಾಲಾಗಿದೆ. ಅನೇಕ ಕಾರಣದಿಂದ ಅಳವಿನಂಚಿಗೆ ದೂಡಲ್ಪಟ್ಟಿದ್ದ ಹುಲಿಗಳ ಸಂತತಿ ಕೆಲ ವರ್ಷಗಳಿಂದ ಸುಧಾರಿಸಿದೆ. ಅದರಲ್ಲೂ ಕಳೆದ ನಾಲ್ಕೈದು ಗಣತಿ ವೇಳೆ ಹುಲಿಗಳ ಸಂಖ್ಯೆ ಹೆಚ್ಚಿರುವುದು ಕಂಡು ಬಂದಿದೆ. ಆದರೂ, ಹುಲಿಗಳ ಸಂರಕ್ಷಣೆಗೆ ಸವಾಲಾಗಿ ಪರಿಣಮಿಸುತ್ತಿದೆ ಎಂದರು.ದೊಡ್ಡಬೆಕ್ಕುಗಳ ಪಟ್ಟಿಯಲ್ಲಿ ಹುಲಿಯ ಜತೆ ಚಿರತೆಯೂ ಸೇರಿದೆ. ಇತ್ತೀಚೆಗೆ ಚಿರತೆಗಳು ಎಲ್ಲೆಡೆ ಕಂಡು ಬರುತ್ತಿವೆ. ಹುಲಿ, ಚಿರತೆ ಸಂಖ್ಯೆ ಹೆಚ್ಚಳವೂ ಅನೇಕ ಸವಾಲನ್ನು ಸೃಷ್ಟಿಸಿದೆ. ಕೆಲವೆಡೆ ದೊಡ್ಡಬೆಕ್ಕುಗಳ ಸಂಖ್ಯೆ ಹೆಚ್ಚಳದಿಂದಾಗಿ ಮಾನವ ಪ್ರಾಣಿ ಸಂಘರ್ಷ ಉಂಟಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ. ಪ್ರಸ್ತುತ ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು, ಕೋಲಾರ ಮತ್ತು ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ (ಚಿರತೆ) ಮಾನವ-ಪ್ರಾಣಿ ಸಂಘರ್ಷದ ಘಟನೆ ಹೆಚ್ಚಾಗಿವೆ. ಈ ಬೆಳವಣಿಗೂ ಅರಣ್ಯ ಇಲಾಖೆಗೆ ಸವಾಲಾಗಿದೆ ಎಂದು ತಿಳಿಸಿದರು.
ಇತ್ತೀಚೆಗೆ ಮೈಸೂರು- ನಂಜನಗೂಡು ಮುಖ್ಯ ರಸ್ತೆಯ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿ ಒಂದು ಹುಲಿ ಮೃತಪಟ್ಟಿತ್ತು. ಇದೀಗ ಆ ನಾಲ್ಕು ಹುಲಿಗಳಲ್ಲಿ ಮೈಸೂರು ಹೊರವಲಯ ಒಂದು ಹಾಗೂ ಶ್ರೀರಂಗಪಟ್ಟಣ ಬಳಿ ಒಂದು ಕಾಣಿಸಿಕೊಂಡಿದೆ. ಅವುಗಳ ಚಲನವಲನದ ಮೇಲೂ ನಿಗಾ ಇಟ್ಟು ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಡೆಹ್ರಾಡೂನ್ ನ ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿಜ್ಞಾನಿ ಡಾ. ಖಮರ್ ಖುರೇಷಿ ಪ್ರಾತ್ಯಕ್ಷಿಕೆ ಮೂಲಕ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ಇದ್ದರು.