ಶಿವಾನಂದ ಗೊಂಬಿ ಹುಬ್ಬಳ್ಳಿ
ಇಂಥ ಪ್ರಶ್ನೆಗಳೀಗ ಸಾರ್ವಜನಿಕರಲ್ಲಿ ಕಾಡುತ್ತಿದೆ. ಹಾಗೆ ನೋಡಿದರೆ ಭಾರತ್- ಪಾಕಿಸ್ತಾನ ಮಧ್ಯೆ ಯುದ್ಧವೇನೂ ಘೋಷಣೆಯೂ ಆಗಿಲ್ಲ. ಯುದ್ಧ ನಡೆಯುತ್ತಲೂ ಇಲ್ಲ. ನಮ್ಮ ದೇಶದ ಅಮಾಯಕ ನಾಗರಿಕರ ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ "ಆಪರೇಷನ್ ಸಿಂದೂರ " ನಡೆಸಿ ಉಗ್ರರ ನೆಲೆಗಳನ್ನು ನಮ್ಮ ಸೈನ್ಯ ಧ್ವಂಸ ಮಾಡಿದೆ. ತದನಂತರ ಪಾಕ್ ಸೈನ್ಯ ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರವನ್ನಷ್ಟೇ ನಮ್ಮ ಸೈನಿಕರು ಕೊಡುತ್ತಿದ್ದಾರೆ.
ಯುದ್ಧ ಘೋಷಣೆಯಾಗದಿದ್ದರೂ ಯುದ್ಧದ ಭೀತಿಯಂತೂ ಇದ್ದೇ ಇದೆ. ಜತೆಗೆ ಪ್ರತಿನಿತ್ಯ, ಪ್ರತಿಕ್ಷಣ ಬಿತ್ತರವಾಗುತ್ತಿರುವ ಸುದ್ದಿಗಳು ಜನರಲ್ಲಿ ಆತಂಕವನ್ನುಂಟು ಮಾಡಿದೆ. ಯುದ್ಧವಾಗುತ್ತಿದೆ. ಈಗೇನೋ ಓಕೆ, ಮುಂದೆ ತಿನ್ನೋಕೆ, ಕುಡಿಯೋಕೆ ಸಿಗಲ್ಲ. ಈಗಲೇ ಸ್ಟಾಕ್ ಮಾಡಿಟ್ಟುಕೊಳ್ಳಬೇಕು ಎಂಬ ಗುಲ್ಲು ಹಬ್ಬುತ್ತಿದೆ. ಈ ಕಾರಣದಿಂದ ಜನರಲ್ಲಿ ಕಳವಳ, ತಳಮಳ ಶುರುವಾಗುತ್ತಿದೆ. ತಮಗೆ ಪರಿಚಯ ಇದ್ದಂತಹ ಪತ್ರಕರ್ತರನ್ನೋ, ಅಧಿಕಾರಿ ವರ್ಗವನ್ನೋ, ವರ್ತಕರನ್ನೋ ಕೇಳುತ್ತಿದ್ದಾರೆ. ಅಲ್ಲದೇ, ಮಹಾರಾಷ್ಟ್ರ, ರಾಜಸ್ಥಾನಗಳಲ್ಲಿರುವ ತಮ್ಮ ನೆಂಟರಿಷ್ಟರೊಂದಿಗೆ ಈ ಸಂಬಂಧ ಚರ್ಚೆ ಕೂಡ ಮಾಡುತ್ತಿದ್ದು, ಅಲ್ಲಿನ ಪರಿಸ್ಥಿತಿ ಕೇಳುತ್ತಿದ್ದಾರೆ. "ಸಾರ್ ಮುಂದೆ ರೇಷನ್ ಸಿಗಂಗಿಲ್ಲ ಏನ್ರಿ.. ಈಗ ಸ್ಟಾಕ್ ಮಾಡಿಕೋಬೇಕ್ ಏನ್ರಿ.. " ಎಂದೆಲ್ಲ ಪ್ರಶ್ನೆಗಳನ್ನೆಲ್ಲ ಕೇಳುತ್ತಿದ್ದಾರೆ.ಎರಡನೆಯ ಮಹಾಯುದ್ಧದ ನೆನಪು:
ಸಚಿವರ ಸ್ಪಷ್ಟನೆ: ಈ ವದಂತಿ, ಸಾರ್ವಜನಿಕರ ಆತಂಕದ ಹಿನ್ನೆಲೆಯಲ್ಲೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಅವರೂ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರು ಆತಂಕಕ್ಕೊಳಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರತಿನಿತ್ಯ ತಮ್ಮ ಸಂಬಂಧಿಕರೋ, ದವಸ ಧಾನ್ಯ ಮಾರಾಟ ಮಾಡುವ ವರ್ತಕರನ್ನೋ, ಸ್ನೇಹಿತರನ್ನೋ ಕೇಳುವುದು ಮಾತ್ರ ತಪ್ಪುತ್ತಿಲ್ಲ.
ದೇಶದಲ್ಲಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ದುಪ್ಪಟ್ಟು ದಾಸ್ತಾನಿದೆ. ಎಲ್ಲೂ ಕೂಡಾ ಕೊರತೆಯಿಲ್ಲ, ಜನಸಾಮಾನ್ಯರು, ವರ್ತಕರು ಯಾರೂ ಈ ಬಗ್ಗೆ ಚಿಂತಿತರಾಗಬೇಕಿಲ್ಲ.
ಹಿಂದೆ ಯುದ್ಧವಾದಾಗ ಆಹಾರದ ಕೊರತೆಯಾಗಿತ್ತು ಅಂತೆ. ಭಾರತ- ಪಾಕಿಸ್ತಾನ ನಡುವೆ ಯುದ್ಧ ನಡೆಯುತ್ತಿದೆಯೆಲ್ಲ ಈಗಲೂ ಅದೇ ರೀತಿ ಆಹಾರದ ಸಮಸ್ಯೆಯಾಗುತ್ತದೆಯೇ? ಈಗಲೇ ಸ್ಟಾಕ್ ಮಾಡಿಟ್ಟುಕೊಳ್ಳಬೇಕಾ? ಎಂದು ಗೃಹಿಣಿ ಪ್ರೀತಿ ವರ್ಮಾ ಅಳಲು ಆತಂಕ ವ್ಯಕ್ತಪಡಿಸಿದರು.