ಎಲ್ಲ ವೃತ್ತಿ ರಂಗದಲ್ಲೂ ಮಹಿಳೆಯರು ಸಾಧನೆ ಮಾಡಿದ್ದಾರೆ

KannadaprabhaNewsNetwork |  
Published : Jan 31, 2024, 02:18 AM IST
ಕಾರ್ಯಗಾರದಲ್ಲಿ ಸಾಧಕರನ್ನ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಡು ಮುಟ್ಟದ ಗಿಡ ಇಲ್ಲ, ಮಹಿಳೆ ಇಲ್ಲದ ವೃತ್ತಿ ರಂಗವಿಲ್ಲ ಎನ್ನುವಂತೆ ಪ್ರಸ್ತುತ ದಿನಗಳಲ್ಲಿ ಪುರುಷರ ಸಮನಾಗಿ ಮಹಿಳೆಯರು ಕೂಡಾ ಎಲ್ಲ ವೃತ್ತಿ ರಂಗದಲ್ಲಿ ಮುಂದಡಿ ಇಟ್ಟು ಭಾಗವಹಿಸಿ, ಯಶಸ್ವಿ ಆಗಿದ್ದಾರೆ ಎಂದು ಕುಟುಂಬ ಕಲ್ಯಾಣ ಇಲಾಖೆಯ ಸಖಿ ಒನ್ ಸೆಂಟರ್‌ನ ಆಪ್ತ ಸಮಾಲೋಚಕಿ ನಾಗರತ್ನಾ ನಾಲ್ಕರವಿ ಹೇಳಿದರು.

ಮುಳಗುಂದ: ಆಡು ಮುಟ್ಟದ ಗಿಡ ಇಲ್ಲ, ಮಹಿಳೆ ಇಲ್ಲದ ವೃತ್ತಿ ರಂಗವಿಲ್ಲ ಎನ್ನುವಂತೆ ಪ್ರಸ್ತುತ ದಿನಗಳಲ್ಲಿ ಪುರುಷರ ಸಮನಾಗಿ ಮಹಿಳೆಯರು ಕೂಡಾ ಎಲ್ಲ ವೃತ್ತಿ ರಂಗದಲ್ಲಿ ಮುಂದಡಿ ಇಟ್ಟು ಭಾಗವಹಿಸಿ, ಯಶಸ್ವಿ ಆಗಿದ್ದಾರೆ ಎಂದು ಕುಟುಂಬ ಕಲ್ಯಾಣ ಇಲಾಖೆಯ ಸಖಿ ಒನ್ ಸೆಂಟರ್‌ನ ಆಪ್ತ ಸಮಾಲೋಚಕಿ ನಾಗರತ್ನಾ ನಾಲ್ಕರವಿ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ನಡೆದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ ವ್ಯಾಪಾರಸ್ಥರಿಗೆ ಸ್ವ-ನಿಧಿ ಸೇ ಸಮೃದ್ಧಿ ಯೋಜನೆಗಳ, ಜಾಗೃತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಗದಗ ತಾಲೂಕು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಂಜುಳಾ ಕಮತರ ಮಾತನಾಡಿ, ಸರ್ಕಾರವು ಬೀದಿ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿ ಜತೆಗೆ ಇನ್ನೂ ಹಲವು ಯೋಜನೆಗಳನ್ನ ಜಾರಿಗೊಳಿಸಿದೆ. ಬೀದಿ ವ್ಯಾಪಾರಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಈ ವೇಳೆ ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ನೀಲಗುಂದ, ಸದಸ್ಯರಾದ ಹೊನ್ನಪ್ಪ ಹಳ್ಳಿ, ಮಹಾದೇವಪ್ಪ ಗಡಾದ, ನೀಲವ್ವ ಅಸುಂಡಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ ಕಾಂಬಳೆ, ಸಮುದಾಯ ಯೋಜನಾಧಿಕಾರಿ ವಾಣಿಶ್ರೀ ನಿರಂಜನ, ವೈದ್ಯಾಧಿಕಾರಿ ಡಾ. ಪ್ರವೀಣ ತುಪ್ಪದ, ಕೃಷಿ ಸಾಧಕಿ ಮಂಗಳಾ ನೀಲಗುಂದ, ಆರೋಗ್ಯ ಸಂರಕ್ಷಣಾಧಿಕಾರಿ ಸುಮೀತ್ರಾ ಹೊಂಬಳ, ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಅಧ್ಯಕ್ಷ ಭೀಮಪ್ಪ ಕೋಳಿ ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು. ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಟೀ ಶರ್ಟ್, ಕನ್ನಡಕ ವಿತರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರಪ್ಪ ಕರ್ನಾಟಕ ರತ್ನಕ್ಕೆ ಅರ್ಹ : ಶ್ರೀ
ಮೈಸೂರು ಹೀಲಿಯಂ ಸಿಲಿಂಡರ್‌ ಸ್ಫೋಟ : ಎನ್‌ಐಎ ಭೇಟಿ