ಗ್ರಾಮದಲ್ಲೇ ಮಹಿಳೆಯರು ಸ್ವಾವಲಂಬಿಯಾಗಿ: ಡಾ.ಎಸ್.ಆಕಾಶ್

KannadaprabhaNewsNetwork |  
Published : Feb 20, 2026, 01:30 AM IST
ಪೋಟೋ೧೯ಸಿಎಲ್‌ಕೆ೧ ಚಳ್ಳಕೆರೆ ತಾಲ್ಲೂಕಿನ ಜಡೇಕುಂಟೆ ಗ್ರಾಮದಲ್ಲಿ ಶ್ರೀವಿದ್ಯಾ ಹೋಮ್ ಪ್ರಾಡೆಕ್ಟ್÷್ಸನ ನೂತನ ಘಟಕವನ್ನು ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಗ್ರಾಮೀಣ ಭಾಗದ ಗುಡಿಕೈಗಾರಿಕೆಗಳು ಸೇರಿದಂತೆ ಮಹಿಳೆಯರಿಗಾಗಿ ಅನೇಕ ನೂತನ ಯೋಜನೆಗಳನ್ನು ಸರ್ಕಾರಿ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದು, ಅವರು ಸಹ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಮಹಿಳಾ ಸಮುದಾಯವನ್ನು ಪ್ರೋತ್ಸಾಹಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಭಾಗದ ಗುಡಿಕೈಗಾರಿಕೆಗಳು ಸೇರಿದಂತೆ ಮಹಿಳೆಯರಿಗಾಗಿ ಅನೇಕ ನೂತನ ಯೋಜನೆಗಳನ್ನು ಸರ್ಕಾರಿ ಜಾರಿಗೆ ತಂದಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಮಹಿಳಾ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದು, ಅವರು ಸಹ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ. ಮಹಿಳಾ ಸಮುದಾಯವನ್ನು ಪ್ರೋತ್ಸಾಹಿಸುವ ಗುಣ ಎಲ್ಲರಲ್ಲೂ ಬೆಳೆಯಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ತಾಲೂಕಿನ ಸಾಣೀಕೆರೆ ಗ್ರಾಪಂ ವ್ಯಾಪ್ತಿಯ ಜಡೇಕುಂಟೆ ಗ್ರಾಮದಲ್ಲಿ ಶ್ರೀವಿದ್ಯಾ ಹೋಮ್ ಪ್ರಾಡೆಕ್ಟ್‌ ನೂತನ ಘಟಕವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಹಲವಾರು ವಿಚಾರಗಳಬಗ್ಗೆ ಮಹಿಳೆಯರು ಚರ್ಚೆ ನಡೆಸುತ್ತಾರೆ. ಗ್ರಾಮದಲ್ಲಿ ಆರಂಭವಾದ ವಿದ್ಯಾಹೋಮ್ ಪ್ರಾಡೆಕ್ಟ್÷್ಸನಿಂದ ನೂರಾರು ಮಹಿಳೆಯರು ಸ್ವಯಂ ಉದ್ಯೋಗವಂತರಾಗುವ ಎಲ್ಲಾ ಲಕ್ಷಣಕಾಣುತ್ತಿವೆ. ಓರ್ವ ಮಹಿಳೆ ವಿದ್ಯಾವಂತೆ ಮತ್ತು ಉದ್ಯೋಗವಂತೆಯಾದರೆ ಇಡೀ ಗ್ರಾಮದಲ್ಲೇ ಅಭಿವೃದ್ದಿ ಪರ್ವಆರಂಭವಾಗದಂತೆ. ಒಬ್ಬ ಮಹಿಳೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿದರೆ ಹತ್ತಾರು ಮಹಿಳೆಯರು ಅವರನ್ನು ಅನುಕರಿಸುತ್ತಾರೆಲ್ಲದೆ, ಅವರೂ ಸ್ವಂತ ಉದ್ಯೋಗ ಹೊಂದುವ ನಿಟ್ಟಿನಲ್ಲಿ ಕಾಯೋನ್ಮುಖರಾಗುತ್ತಾರೆ ಎಂದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಎಸ್.ರಂಗಸ್ವಾಮಿ, ಮಹಿಳೆಯರಿಗೆ ವಿವಿಧ ಯೋಜನೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅತಿಕಡಿಮೆ ಬಡ್ದದರಲ್ಲಿ ಧೀರ್ಘಕಾಲದ ಸಾಲಪಡೆಯಲು ಮಹಿಳೆಯರಿಗೆ ಅವಕಾಶ ನೀಡಿದೆ. ಸಾಮಾನ್ಯವಾಗಿ ಯಾವುದೇ ಮಹಿಳೆ ಸ್ವಯಂ ಉದ್ಯೋಗವನ್ನು ಆಯ್ಕೆಮಾಡಿಕೊಂಡರೆ ನಷ್ಟವಾಗದಂತೆ ಎಚ್ಚರಿಕೆ ವಹಿಸುತ್ತಾರೆಂದರು.

ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ, ಇಒ ಎಚ್.ಶಶಿಧರ, ಉಪಕೃಷಿ ನಿರ್ದೇಶಕ ಡಾ.ಎನ್.ಉಮೇಶ್, ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ಸಹಾಯಕಕೃಷಿನಿರ್ದೇಶಕ ಟಿ.ರಮೇಶ್, ಕೆ.ವಿಜಯ್, ನಿವೃತ್ತ ಪಶುವೈದ್ಯಾಧಿಕಾರಿ ಡಾ.ಬಿ.ಟಿ.ರವೀಂದ್ರನಾಥ, ವೈದ್ಯಾಧಿಕಾರಿ ಡಾ.ಪಿ.ಎನ್.ನಾಗರಾಜು, ಕಲಮರಹಳ್ಳಿಶಿವಣ್ಣ, ಹೆಗ್ಗೆರೆ ಆನಂದಪ್ಪ, ಮಹಾಲಿಂಗಪ್ಪ, ಭಾಗ್ಯಮ್ಮ, ಶಶಿಕಲಾ, ತಿಪ್ಪೇರುದ್ರಸ್ವಾಮಿ, ಪ್ರೇಮಾ, ಜೆ.ತಿಪ್ಪೇಸ್ವಾಮಿ, ಶ್ವೇತ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಬಂಧನಗಳಿಂದ ರಾಯರು ರಕ್ಷಿಸಿ, ಭಕ್ತರ ಉದ್ಧರಿಸುತ್ತಾರೆ: ವಿದ್ಯಾಶ್ರೀಶ ಶ್ರೀ
ಶ್ರೇಯಸ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ