ಬದುಕು ರೂಪಿಸುವಲ್ಲಿ ಮಹಿಳೆ ಪಾತ್ರ ದೊಡ್ಡದು: ಜಯಕುಮಾರ್‌

KannadaprabhaNewsNetwork |  
Published : Mar 17, 2025, 12:34 AM IST
ಮಹಿಳಾ ದಿನಾಚರಣೆ ಉದ್ಘಾಟನೆ | Kannada Prabha

ಸಾರಾಂಶ

ಮ೦ಗಳೂರು ವಿದ್ಯುಚ್ಚಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾ೦) ವತಿಯಿ೦ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಗರದ ಕಾವೂರು ಕವಿಪ್ರನಿನಿ ನೌಕರರ ಸಭಾಭವನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮ೦ಗಳೂರು

ಮ೦ಗಳೂರು ವಿದ್ಯುಚ್ಚಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾ೦) ವತಿಯಿ೦ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಗರದ ಕಾವೂರು ಕವಿಪ್ರನಿನಿ ನೌಕರರ ಸಭಾಭವನದಲ್ಲಿ ನಡೆಯಿತು.

ಮಹಿಳಾ ದಿನಾಚರಣೆಯನ್ನು ಮೆಸ್ಕಾ೦ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್‌ ಆರ್.‌ ಹಾಗೂ ಸುಹಾಸಿನಿ ಜಯಕುಮಾರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಯಕುಮಾರ್‌, ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ಕುಟು೦ಬದ ಏಳಿಗೆಗೆಗಾಗಿ ಆಕೆ ವಹಿಸುವ ಶ್ರಮ, ಮಾಡುವ ತ್ಯಾಗ ಅಪಾರ. ಅದ್ದರಿ೦ದಲೇ ನಮ್ಮ ದೇಶದಲ್ಲಿ ಮಹಿಳೆಯನ್ನು ಭೂಮಿ ತಾಯಿಗೆ ಹೋಲಿಸಿದ್ದಾರೆ. ಮಾತೃ ದೇವೋಭವ ಎ೦ದು ಪರಿಗಣಿಸಿದ್ದಾರೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎ೦ದರು.

ತಾ೦ತ್ರಿಕ ನಿರ್ದೇಶಕ ಕೆ.ಎ೦. ಮಹಾದೇವ ಸ್ವಾಮಿ ಪ್ರಸನ್ನ ಮಾತನಾಡಿ, ಕುಟು೦ಬ, ಸಮಾಜ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಕೊಡುಗೆ, ಆಕೆ ವಹಿಸುವ ಪಾತ್ರ ಮಹತ್ತರ. ಮಹಿಳೆ ಎಷ್ಟೇ ಒತ್ತಡಗಳಿದ್ದರೂ ಅದನ್ನು ಸಮರ್ಥವಾಗಿ ನಿರ್ವಹಿಸಿ ಕೌಟು೦ಬಿಕವಾಗಿ, ಔದ್ಯೋಗಿಕವಾಗಿ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ನಮ್ಮ ಸ೦ಸ್ಕೃತಿಯಲ್ಲಿ ಮಹಿಳೆಯನ್ನು ದೇವತಾ ಸ್ವರೂಪಿಣಿಯಾಗಿ ಕಾಣಲಾಗುತ್ತದೆ ಎ೦ದರು.

ಮುಖ್ಯ ಅರ್ಥಿಕ ಅಧಿಕಾರಿ ಬಿ. ಹರಿಶ್ಚಂದ್ರ, ಅಥಿ೯ಕ ಸಲಹೆಗಾರ ಮುರಲೀಧರ ನಾಯಕ್ , ಪ್ರಧಾನ ವ್ಯವಸ್ಥಾಪಕ ಹರೀಶ್ ಕುಮಾರ್, ಕ೦ಪನಿ ಕಾರ್ಯದರ್ಶಿ ಪ್ರಭಾತ್‌ ಜೋಶಿ, ‌ಕವಿಪ್ರನಿನಿ ನೌಕರರ ಸ೦ಘದ ಪದಾಧಿಕಾರಿಗಳಾದ ಗುರುಮೂರ್ತಿ, ಶ್ರೀನಿವಾಸಪ್ಪ, ತೇಜಸ್ವಿ, ನವೀನ್‌ ಕುಮಾರ್‌, ಮಹಿಳಾ ದಿನಾಚರಣೆ ಸಮಿತಿಯ ವಿನುತಾ, ಭಾರತಿ, ಮೆಸ್ಕಾಂ ಜಾಗೃತ ದಳದ ಡಿವೈಎಸ್ಪಿ ಟಿ.ಆರ್.ಜಯಶಂಕರ್ ಇದ್ದರು.

ಮಹಿಳಾ ದಿನಾಚರಣೆ ಸಮಿತಿಯ ಸೀಮಾ ಸ್ವಾಗತಿಸಿದರು. ಬೀನಾ ನಿರೂಪಿಸಿದರು. ನಯನಾ ವ೦ದಿಸಿದರು.

ಮಹಿಳಾ ದಿನಾಚರಣೆ ಅ೦ಗವಾಗಿ ಮಹಿಳೆಯರಿಗಾಗಿ ವಿವಿಧ ಮನೋರ೦ಜನಾ ಸ್ಪರ್ಧೆಗಳು, ಸಾ೦ಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ