ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕಾವೇರಿ ನೀರಾವರಿ ನಿಗಮದಿಂದ ಕೆಆರ್ಎಸ್ನ ಕಾರ್ಯಪಾಲಕ ಎಂಜಿನಿಯರ್ ಜಯಂತ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಸೇರಿ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಜಯಂತ್ ಮಾತನಾಡಿ, ಸರ್.ಎಂ.ವಿ ದೂರ ದೃಷ್ಟಿಯುಳ್ಳ ನಾಯಕರು. ಅವರಲ್ಲಿದ್ದ ಜ್ಞಾನದಿಂದ ದೇಶದ ವಿವಿಧೆಡೆ ಅನೇಕ ಅಣೆಕಟ್ಟೆ ನಿರ್ಮಾಣವಾಗಿವೆ. ಇವರ ತಂತ್ರಜ್ಞಾನ ಮೆಚ್ಚಿ ವಿದೇಶದಲ್ಲಿ ಕೂಡ ಅಣೆಕಟ್ಟೆ ವಿನ್ಯಾಸ ಮಾಡಲು ಕರೆದು ಅಲ್ಲಿಯೂ ಕೂಡ ಸರ್ಎಂವಿ ಪ್ರಸಿದ್ದರಾದರು ಎಂದರು.
ಕೆಆರ್ಎಸ್ನಲ್ಲಿ ಅಣೆಕಟ್ಟೆಗೆ ನಿರ್ಮಿಸಿರುವ ಅವರ ಅಟೋಮ್ಯಾಟಿಕ್ ಗೇಟುಗಳ ತಂತ್ರಜ್ಞಾನ ಇಂದಿಗೂ ಹೆಸರುವಾಸಿ. ದೇಶದಲ್ಲಿನ ವಿವಿಧ ಅಣೆಕಟ್ಟೆಗಳಲ್ಲಿ ಪ್ರವಾಹದ ಸಂದರ್ಭಲ್ಲಿ ಅಟೋಮ್ಯಾಟಿಕ್ ತಂತ್ರಜ್ಞಾನ ಬಳಸಿ ಗೇಟುಗಳ ನಿರ್ವಹಣೆ ಮಾಡುವುದನ್ನು ವಿನ್ಯಾಸ ಮಾಡಿದ್ದರು. ಅವರು ಬಳಸಿದ ತಂತ್ರಜ್ಞಾನಗಳು ನಮ್ಮೆಲ್ಲ ಎಂಜಿನಿಯರ್ಗಳ ಮಾದರಿಯಾಗಿದ್ದಾರೆ ಎಂದರು.ಕೆಆರ್ಎಸ್ ಅಣೆಕಟ್ಟೆ ನಿರ್ವಹಣೆ ವಿಭಾಗದ ಸಹಾಯಕ ಕಾರ್ಯಪಾಲಕ ಫಾರೂಕ್ ಅಬು, ಗೇಜಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿಶೋರ್ ಕುಮಾರ್, ತಾಂತ್ರಿಕ ಸಹಾಯಕರಾದ ರಶ್ಮಿ ಸರ್.ಎಂ.ವಿಶ್ವೇಶ್ವರಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ವೇಳೆ ಕೆಆರ್ಎಸ್ ಕಾ.ನೀ.ನಿಗಮದ ಸಹಾಯಕ ಎಂಜಿನಿಯರ್ಗಳಾದ ಲೋಹಿತ್, ಸುರೇಶ್ ಬಾಬು, ವೇಣುಗೊಪಾಲ, ಕುಮಾರಸ್ವಾಮಿ, ಅಭಿಲಾಷ್, ಪುನೀತ್ ಶಿವಕುಮಾರ್, ಸಹನಾ ವ್ಯವಸ್ಥಾಪಕ ಶ್ರೀನಿವಾಸ್ ಕೆಆರ್ಎಸ್ ಸರ್ಕಾರಿ ನೌಕರರ ಸಂಘದ ನಿರ್ದೇಶಕರುಗಳಾದ ನಾಗೇಶ್, ಜಯಪ್ರಕಾಶ್ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಮಳವಳ್ಳಿ:
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಅಪರ ಪೊಲೀಸ್ ಮಹಾನಿರ್ದೇಶಕ ಎಂ.ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಂಗಸ್ವಾಮಿ ವಹಿಸಲಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಡಿವೈಎಸ್ಪಿ ವಿ.ಕೃಷ್ಣಪ್ಪ, ಮನ್ಮುಲ್ ಉಪಾಧ್ಯಕ್ಷ ಕೃಷ್ಣೇಗೌಡ, ಸೊಸೈಟಿ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ ಸೇರಿದಂತೆ ಇತರರು ಭಾಗವಹಿಸುವರು ಎಂದರು.