ದೇವಿ ಆರಾಧನೆಯಿಂದ ಮಳೆ ಬೆಳೆ ಸಮೃದ್ಧಿ: ಮುನವಳ್ಳಿ

KannadaprabhaNewsNetwork |  
Published : Aug 12, 2026, 02:45 AM IST
11ುಲು1 | Kannada Prabha

ಸಾರಾಂಶ

ಗೌಳಿ ಸಮಾಜದವರು ಕಳೆದ 20 ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಜಾತ್ರೆ, ಪುರಾಣ, ಭಜನೆ ಹಾಗೂ ದೇಗುಲದ ವಾರ್ಷಿಕೋತ್ಸವ ಆಚರಿಸುತ್ತಾ ಬಂದಿದ್ದು.

ಗಂಗಾವತಿ: ದೇವಿ ಆರಾಧನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡುತ್ತ ಬಂದರೆ ಮಳೆ ಬೆಳೆ ಸಮೃದ್ಧಿಯಾಗಿರುತ್ತದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಇಲ್ಲಿಯ ಗೌಳಿ ಸಮಾಜದವರು ಮಹಾಲಕ್ಷ್ಮಿದೇವಿಯ 20ನೇ ವರ್ಷದ ಜಾತ್ರಾ ಮಹೋತ್ಸವ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಹಾಲಕ್ಷ್ಮೀದೇವಿ ಈ ಪ್ರದೇಶದ ಆರಾಧ್ಯ ದೇವತೆಯಾಗಿದ್ದು. ಇಲ್ಲಿಯ ಗೌಳಿ ಸಮಾಜದವರು ಕಳೆದ 20 ವರ್ಷಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಜಾತ್ರೆ, ಪುರಾಣ, ಭಜನೆ ಹಾಗೂ ದೇಗುಲದ ವಾರ್ಷಿಕೋತ್ಸವ ಆಚರಿಸುತ್ತಾ ಬಂದಿದ್ದು. ಮಹಾಲಕ್ಷ್ಮೀಯು ಎಲ್ಲರಿಗೂ ಆಶೀರ್ವಾದಸಲಿ ಎಂದು ಪ್ರಾರ್ಥಿಸಿದರು.

ಕಾರ್ಯಕ್ರಮದ ಸಾನ್ನಿಧ್ಯವನ್ನು ಹೆಬ್ಬಾಳದ ನಾಗಭೂಷಣ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿ, ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿ, ಸಂಗಮೇಶ್ವರ ಸ್ವಾಮೀಜಿ, ಅಪ್ಪಾಜಿಸ್ವಾಮೀಜಿ, ವೆಂಕಟೇಶ್ ಅಮರ್ ಜ್ಯೋತಿ, ನವೀನ್ ಮಾಲೀಪಾಟೀಲ್, ರಮೇಶ್ ಗೌಳಿ, ಶೈಲಜಾ ಹಿರೇಮಠ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಮೀನುಗಾರ ಸಮುದಾಯಗಳು ಸಂಘಟಿತವಾಗಲಿ: ಗುಂಡು ಐನಾಪುರ
ನಾಟಿ ಹಬ್ಬ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ