ಬ್ಯಾಡಗಿ: ಪಟ್ಟಣದ ಹೆಮ್ಮೆಯ ಹಿರಿಯ ಮಹಿಳಾ ಸಾಹಿತಿ ಕವಿಯತ್ರಿ ಅತ್ಯುತ್ತಮ ಲೇಖಕಿ ಸಂಕಮ್ಮ ಸಂಕಣ್ಣನವರ ಅವರಿಗೆ ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ-2024 ಪ್ರಶಸ್ತಿ ಲಭಿಸಿದ್ದು ಪಟ್ಟಣದ ಸಾಹಿತಿಗಳ ಬಗ್ಗೆ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಜೋಡಿಹಕ್ಕಿ (ಕವನ ಸಂಕಲನ), ಮುತ್ತಿನ ತೆನೆ (ಹನಿ ಗವನ), ವಚನ ವೃಷ್ಟಿ (ಆಧುನಿಕ ವಚನಗಳು), ಕನ್ನಡದ ಕಣ್ಮಣಿ ಡಾ. ಮಹದೇವ ಬಣಕಾರ (ಜೀವನ ಚರಿತ್ರೆ), ಹರಿದಾಡತಾವ ಭಾವ (ಕ.ಸಂ.), ಹೋರಾಟದ ಒಂದು ನೋಟ ಸಿದ್ದಮ್ಮ ಮೈಲಾರ (ಜೀವನ ಚರಿತ್ರೆ), ಮಾಸದ ಹೆಜ್ಜೆಗಳು (ಅಂಕಣ ಬರಹ), ನೆಲದ ನಕ್ಷತ್ರಗಳು (ಹಾವೇರಿ ಜಿಲ್ಲೆಯ ಸಾಧಕರು) ಜಿಲ್ಲೆಯ ಮಹಿಳಾ ರತ್ನಗಳು, ಜಿಲ್ಲೆಯ ಜಾನಪದ ಆಟಗಳು, ಸೂರ್ಯಪ್ರಭಾ, ಧರೆಗಿಳಿದ ಧನ್ವಂತರಿ, ನುಡಿ ಬಾಗಿನ ಬ್ಯಾಡಗಿ ರಾಯರು (ಅಭಿನಂದನಾ ಗ್ರಂಥ) ರಚಿಸಿದ್ದಾರೆ, ಕನಕ (ಸ್ಮರಣ ಸಂಚಿಕೆ) ಹೋರಾಟದ ಒಂದು ನೋಟ (ಅನುವಾದ ಕೃತಿ) ಸಂಕಮ್ಮ ರಚಿಸಿದ ಮಹತ್ವದ ಕೃತಿಗಳಾಗಿವೆ. ಇವರು ಬರದಂತಹ ಸ್ವಾತಂತ್ರ್ಯ ಸೇನಾನಿ ಸಿದ್ದಮ್ಮ ಮೈಲಾರ ಕೃತಿ ಹಿಂದಿ ಭಾಷೆಗೆ ಅನುವಾದಗೊಂಡಿದೆಯಲ್ಲದೇ ಇವರು ರಚಿಸಿದ ಕನ್ನಡದ ಹುಲಿ ಮಹದೇವ ಮೈಲಾರ ಕೃತಿಯು ಚಲನಚಿತ್ರವಾಗಿದ್ದು, ಇವರ ಸಾಧನೆಗಳಲ್ಲಿ ಮಹತ್ವದ ಮೈಲುಗಲ್ಲಾಗಿದೆ. ಧಾರವಾಡ ವಿದ್ಯಾವರ್ಧಕ ಸಂಘದ ನಿರ್ದೇಶಕಿಯಾಗಿ ಸಂಕಮ್ಮ ಆಯ್ಕೆಯಾಗಿದ್ದನ್ನು ಕೂಡ ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಾಹಿತಿಗಳ ಆಶೀರ್ವಾದನೋಡಿದರೆ ಎಲ್ಲೋ ಒಂದು ಕಡೆ ಶಿಕ್ಷಕಿಯಾಗಬೇಕಾಗಿದ್ದ ನಾನು, ಕನ್ನಡದಲ್ಲಿರುವ ಗಟ್ಟಿತನ ಹಾಗೂ ಅದರಲ್ಲಿರುವ ಸ್ವಾದವನ್ನು ಲೇಖನಗಳ ಮೂಲಕ ಸವಿಯುವಂತಹ ಅವಕಾಶ ದೊರೆತಿದ್ದು ನನ್ನ ಪುಣ್ಯ. ನನಗೆ ಪಾಟೀಲ ಪುಟ್ಟಪ್ಪ ಪ್ರೇರಣೆಯಾಗಿದ್ದರೆ ಹಿರಿಯ ಸಾಹಿತಿಗಳ ಆಶೀರ್ವಾದ ಹಾಗೂ ಬ್ಯಾಡಗಿ ಪಟ್ಟಣ ಸೇರಿದಂತೆ ರಾಜ್ಯದೆಲ್ಲೆಡೆ ಸಿಕ್ಕ ಅಭಿಮಾನ ನನ್ನನ್ನು ಪ್ರಶಸ್ತಿ ಹಂತಕ್ಕೆ ತಲುಪಿಸಿವೆ.ಸಂಕಮ್ಮ ಸಂಕಣ್ಣನವರ