ಯಕ್ಷಗಾನ ಕಲೆ ವಿಶಿಷ್ಟ,ಪರಿಪೂರ್ಣವಾದ ಕಲೆ: ಕಲಾವಿದ ಚಿಟ್ಟಾಣಿ

KannadaprabhaNewsNetwork |  
Published : Feb 04, 2026, 02:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿನವರಸ ಕಲೆಗಳಲ್ಲಿ ಪ್ರಮುಖ ಕಲೆಯಾಗಿರುವ ಯಕ್ಷಗಾನ ವಿಶಿಷ್ಟ, ಪರಿಪೂರ್ಣವಾದ ಕಲೆಯಾಗಿದೆ ಎಂದು ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿ ಹೇಳಿದರು.

ಸುವರ್ಣ ಮಹೋತ್ಸವ ಅಂಗವಾಗಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಶೃಂಗೇರಿ

ನವರಸ ಕಲೆಗಳಲ್ಲಿ ಪ್ರಮುಖ ಕಲೆಯಾಗಿರುವ ಯಕ್ಷಗಾನ ವಿಶಿಷ್ಟ, ಪರಿಪೂರ್ಣವಾದ ಕಲೆಯಾಗಿದೆ ಎಂದು ಯಕ್ಷಗಾನ ಕಲಾವಿದ ಸುಬ್ರಮಣ್ಯ ಚಿಟ್ಟಾಣಿ ಹೇಳಿದರು.

ತಾಲೂಕಿನ ಹೊನ್ನವಳ್ಳಿ ಹೊಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ ಆಯೋಜಿಸಿದ್ದ ಸುವರ್ಣ ಮಹೋತ್ಸವ ಅಂಗವಾಗಿ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಯಕ್ಷಗಾನ ಕಲೆ ಕರಾವಳಿಯಲ್ಲಿ ಹುಟ್ಟಿದರೂ ಮಲೆನಾಡಿನಲ್ಲಿ ತನ್ನ ಜಾಲ ವಿಸ್ತರಿಸಿಕೊಂಡು ತನ್ನದೇ ಆದ ಪ್ರೇಕ್ಷಕ,ಅಭಿಮಾನಿ ವರ್ಗವನ್ನು ಹೊಂದಿದೆ.ಕಲೆಗೆ ಜಾತಿ,ಸೀಮೆ ಎಂಬುದಿಲ್ಲ.ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಆತ ಕಲೆಯಲ್ಲಿ ಮತ್ತಷ್ಟು ತೊಡಗಿ ಕಲೆಯನ್ನು ಬೆಳೆಸಬಲ್ಲ. ಸಂಘಟನೆಗಳ ಇಚ್ಚಾಶಕ್ತಿಯಿಂದ ಮತ್ತು ಕಲೆಯ ಆರಾಧಕರಿಂದ ಯಕ್ಷಗಾನ ಕಲೆ ಬೆಳೆಸಿ ವಿಸ್ತರಿಸಲು ಸಾಧ್ಯ ಎಂದರು. ಕಲಾವಿದರಿಗೆ ಎಳೆಯ ವಯಸ್ಸಿನಲ್ಲಿಯೇ ಒಳ್ಳೆಯ ತರಬೇತಿ ಕೊಟ್ಟರೆ ಕಲೆ ಪರಿಪೂರ್ಣತೆ ಕಾಣಲು ಸಾಧ್ಯ. ಕಲಾಭಿಮಾನಿಗಳು ಅಥವಾ ಕಲಾವಿದರು ತಮ್ಮ ಮಕ್ಕಳಿಗೆ ತಮ್ಮಂತೆ ಕಲಾಭಿಮಾನಿಯೋ ಕಲಾವಿದನಾಗಲು ಪ್ರೋತ್ಸಾಹಿಸಬೇಕು ಎಂದರು.

ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ನಾಗೇಶ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆ, ಕಲಾವಿದ ಬೆಳೆಯಲು ಪ್ರೇಕ್ಷಕರ ಸಹಕಾರ ಅಗತ್ಯ. ನಮ್ಮ ಸಂಘ ಕಳೆದ 50 ವರ್ಷಗಳಿಂದ ಅನೇಕ ಏಳು ಬೀಳುಗಳನ್ನು ಕಂಡರೂ ಸದಾ ಕಲಾ ಚಟುವಟಿಕೆ ಗಳಲ್ಲಿ ತೊಡಗಿಸಿಕೊಂಡು ಇಂದಿಗೂ ಯಶಸ್ವಿ ಹಾದಿಯಲ್ಲಿದೆ. ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಸಂಘದ ಏಳಿಗೆಯಲ್ಲಿ ಕಲಾವಿದರು, ಕಲಾ ಪ್ರೇಕ್ಷಕರ ಪಾತ್ರವೂ ಪ್ರಮುಖವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಚೆಂಡೆವಾದಕ ರಾಮಕೃಷ್ಣ ಮಂದಾರ್ತಿಯವರನ್ನು ಸನ್ಮಾನಿಸಲಾಯಿತು. ಶೇಷಗಿರಿಯಪ್ಪ ಎದುರು ಮನೆ, ಶ್ರೀ ಸುಬ್ರಾಯ ಅರಳುಕೊಂಡಿಗೆ,ಜನಾರ್ದನ ಮಂಡಗಾರು, ವೆಂಕಟೇಶ ಆಚಾರ್ಯ,ರಮೇಶ್,ಸುಬ್ರಮಣ್ಯ,ನಾಗರಾಜ್,ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಚತುರ್ಜನ್ಯ ಮೋಕ್ಷ ಯಕ್ಷಗಾನ ಪ್ರದರ್ಶನ ನಡೆಯಿತು.

2 ಶ್ರೀ ಚಿತ್ರ 2-

ಶೃಂಗೇರಿ ಹೊಂಬಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಳವಿ ಮಹಾರಥೋತ್ಸವ ಸಂಪನ್ನ
ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ: ಹರಿಹರಪುರ ಶ್ರೀ