ಯಲಸಿ ದೊಡ್ಡಕೆರೆ ಮೀನು ಶಿಕಾರಿ

KannadaprabhaNewsNetwork |  
Published : Jun 13, 2025, 03:40 AM IST
ಫೋಟೊ:೧೨ಕೆಪಿಸೊರಬ-೦೨ : ಸೊರಬ ತಾಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಮೀನು ಶಿಕಾರಿ ಭರ್ಜರಿಯಾಗಿ ಸಡಗರದಿಂದ ಜರುಗಿತು. | Kannada Prabha

ಸಾರಾಂಶ

ತಾಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಗುರುವಾರ ಜನಪದ ಕ್ರೀಡೆ ಮೀನು ಶಿಕಾರಿ ಸಡಗರದಿಂದ ಜರುಗಿತು.

ಸೊರಬ: ತಾಲೂಕಿನ ಯಲಸಿ ಗ್ರಾಮದ ದೊಡ್ಡಕೆರೆ ಹೆಗ್ಗೆರೆಯಲ್ಲಿ ಗುರುವಾರ ಜನಪದ ಕ್ರೀಡೆ ಮೀನು ಶಿಕಾರಿ ಸಡಗರದಿಂದ ಜರುಗಿತು.

ಕಳೆದ ಒಂದುವಾರದಿಂದ ಸತತ ಮಳೆಯಾಗುತ್ತಿದೆ. ಎರಡ್ಮೂರು ದಿನದಿಂದ ಮಳೆ ಬಿಡುವು ನೀಡಿದ ಹಿನ್ನೆಲೆ ಕೆರೆಬೇಟೆ ನಡೆಸಲಾಯಿತು. ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕ ಕಾಲದಲ್ಲಿ ಕೆರೆಗಿಳಿದು ಮೀನುಗಳನ್ನು ಹಿಡಿಯುವುದನ್ನು ನೋಡಲು ನೂರಾರು ಜನ ಆಗಮಿಸುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ವೇಳೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಡಗರ.

ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಜಾತಿ, ಮತಗಳ ಭೇದವಿಲ್ಲದೆ, ಹಿರಿಯರು, ಕಿರಿಯರೆನ್ನೆದೇ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಕೆಲವರಿಗೆ ಸುಮಾರು ೧೫ಕೆ.ಜಿ ವರೆಗೆ ಮೀನು ಲಭಿಸಿತು. ಕೂಣಿ ಹಿಡಿದು ಕೆರೆಗೆ ಇಳಿದವರು ಕೆರೆಬೇಟೆ ಮಾಡಿ ತೆರಳಿದರು.

ಗ್ರಾಮಸ್ಥರಿಗೆ ಮಾತ್ರವೇ ಕೆರೆಬೇಟೆ ನಡೆಸಲು ಅವಕಾಶ ನೀಡಲಾಗಿತ್ತು. ಆದರೂ ಗ್ರಾಮಸ್ಥರು ಅವರ ಸಂಬಂಧಿಗಳನ್ನು ಕೆರೆಗೆ ಇಳಿಸಿದರು. ಕೆಲವರು ಸುಮಾರು ೧೫ರಿಂದ ೨೦ ಕೆಜಿ ವರೆಗೆ ಮೀನುಗಳನ್ನು ಹಿಡಿದು ಸಂಭ್ರಮಿಸಿದರು. ಕೆರೆಬೇಟೆಗೆ ಯಲಸಿ ಗ್ರಾಮದವರು ಮಾತ್ರವಲ್ಲದೇ ಸುತ್ತಲಿನ ಹುಲ್ತಿಕೊಪ್ಪ, ಕೊರಕೋಡು, ಗುನ್ನೂರು, ಕಾರೆಹೊಂಡ, ಕೊಡಕಣಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ