ಯಾಣ ಶಿಲಾಶಿಖರದ ಅಂಚೆ ಕಾರ್ಡ್‌ ಬಿಡುಗಡೆ

KannadaprabhaNewsNetwork |  
Published : Jun 06, 2026, 02:15 AM IST
ಯಾಣದಲ್ಲಿ ಭೈರವೇಶ್ವರ ಶಿಲಾಶಿಖರದ ಚಿತ್ರಣವುಳ್ಳ ಅಂಚೆ ಕಾರ್ಡ್‌ನ್ನು ಸಿಪಿಎಂಜಿ ಕೆ. ಪ್ರಕಾಶ ಬಿಡುಗಡೆಗೊಳಿಸಿದರು. ರಾಮಚಂದ್ರ ಭಟ್, ಈಶ್ವರ ಭಟ್, ಹರ್ಷ ಎನ್., ಧನಂಜಯ ಆಚಾರ್ ಇದ್ದರು. | Kannada Prabha

ಸಾರಾಂಶ

ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಯಾಣದ ಶ್ರೀ ಗಂಗಾ-ಚಂಡಿಕಾ ಭೈರವೇಶ್ವರ ಮಂದಿರದಲ್ಲಿ ಗುರುವಾರ ಭಾರತೀಯ ಅಂಚೆ ಇಲಾಖೆ ವತಿಯಿಂದ ಯಾಣದ ಮುಖ್ಯ ಶಿಲಾಶಿಖರದ ಭವ್ಯ ಚಿತ್ರಣವುಳ್ಳ ಅಂಚೆ ಕಾರ್ಡ್ (ಪಿಕ್ಚರ್ ಪೋಸ್ಟ್ ಕಾರ್ಡ್) ಮತ್ತು ಕಾಯಂ ಸಚಿತ್ರ ರದ್ಧತಿ ಮುದ್ರೆ (ಪರ್ಮನೆಂಟ್ ಪಿಕ್ಚೋರಿಯಲ್ ಕ್ಯಾನ್ಸಲೇಷನ್)ನ್ನು ಬಿಡುಗಡೆಗೊಳಿಸಲಾಯಿತು.

ಕುಮಟಾ: ತಾಲೂಕಿನ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಯಾಣದ ಶ್ರೀ ಗಂಗಾ-ಚಂಡಿಕಾ ಭೈರವೇಶ್ವರ ಮಂದಿರದಲ್ಲಿ ಗುರುವಾರ ಭಾರತೀಯ ಅಂಚೆ ಇಲಾಖೆ ವತಿಯಿಂದ ಯಾಣದ ಮುಖ್ಯ ಶಿಲಾಶಿಖರದ ಭವ್ಯ ಚಿತ್ರಣವುಳ್ಳ ಅಂಚೆ ಕಾರ್ಡ್ (ಪಿಕ್ಚರ್ ಪೋಸ್ಟ್ ಕಾರ್ಡ್) ಮತ್ತು ಕಾಯಂ ಸಚಿತ್ರ ರದ್ಧತಿ ಮುದ್ರೆ (ಪರ್ಮನೆಂಟ್ ಪಿಕ್ಚೋರಿಯಲ್ ಕ್ಯಾನ್ಸಲೇಷನ್)ನ್ನು ಬಿಡುಗಡೆಗೊಳಿಸಲಾಯಿತು.

ಯಾಣ ಶಿಲಾಶಿಖರದ ಅಂಚೆ ಕಾರ್ಡ್‌ನ್ನು ಅಂಚೆ ಇಲಾಖೆ ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ (ಸಿಪಿಎಂಜಿ) ಬೆಂಗಳೂರಿನ ಕೆ. ಪ್ರಕಾಶ್ ಅವರು ಬಿಡುಗಡೆಗೊಳಿಸಿ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತಾಣಗಳಲ್ಲೊಂದಾಗಿ ವಿಶ್ವಪ್ರಸಿದ್ಧಿಯನ್ನು ಪಡೆದಿರುವ ಯಾಣದ ಪೌರಾಣಿಕ ಹಾಗೂ ಪ್ರಾಕೃತಿಕ ವಿಶೇಷತೆಯನ್ನು ಅಂಚೆ ಕಾರ್ಡಿನ ಮೇಲೆ ದಾಖಲಿಸಿದ ವಿಶಿಷ್ಟ ಮತ್ತು ಐತಿಹಾಸಿಕ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದರು.

ಅತಿಥಿಗಳಾದ ಶ್ರೀಗಂಗಾ-ಚಂಡಿಕಾ ಭೈರವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷ ರಾಮಚಂದ್ರ ಜಿ. ಭಟ್ ಹಾಗೂ ಟ್ರಸ್ಟಿ ಈಶ್ವರ ವಿ. ಭಟ್ ಮಾತನಾಡಿ, ಯಾಣದ ಭವ್ಯತೆಯನ್ನು, ಮಹತ್ವವನ್ನು ಗುರುತಿಸಿ ಅಂಚೆ ಇಲಾಖೆಯ ಕಾರ್ಡಿನಲ್ಲಿ ಪ್ರಚುರಪಡಿಸಿರುವುದು ನಮ್ಮೆಲ್ಲರಿಗೆ ಅಭಿಮಾನದ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ವಲಯದ ಧಾರವಾಡ ಅಂಚೆ ಸೇವಾ ನಿರ್ದೇಶಕ ಹರ್ಷ ಎನ್. ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾರವಾರ ಅಂಚೆ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಸಂದರ್ಭೋಚಿತವಾಗಿ ಮಾತನಾಡಿದರು. ದೇವಾಲಯ ಆಡಳಿತ ಮಂಡಳಿ, ಭಜಕರು, ಗ್ರಾಮಸ್ಥರು ಹಾಗೂ ಅಂಚೆ ಇಲಾಖೆಯವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ಅಹ್ಮದ್ ಖಾನ್‌ ಗೆ ಸಚಿವ ಸ್ಥಾನ ನೀಡುವಂತೆ ಪ್ರತಿಭಟನೆ
ಕುಷ್ಟಗಿ ಹಸಿರು ನಗರವನ್ನಾಗಿ ಮಾಡಲು ಪಣ ತೊಡಿ