ಭಾರತ ಸಾಕ್ಷಾತ್ಕರಿಸಿಕೊಂಡ ಜೀವನ ದೃಷ್ಟಿ ಯೋಗ

KannadaprabhaNewsNetwork |  
Published : Jun 22, 2025, 11:47 PM IST
67 | Kannada Prabha

ಸಾರಾಂಶ

ಯೋಗ ವಿಜ್ಞಾನವು ಕೇವಲ ಯಾವುದೋ ಒಂದು ಜಾತಿ, ಧರ್ಮಕ್ಕೆ ಮೀಸಲಾದುದ್ದಲ್ಲ, ಪ್ರಪಂಚದ ಎಲ್ಲ ಧರ್ಮೀಯರು ಯೋಗವನ್ನು ಒಪ್ಪಿಕೊಂಡಿದ್ದಾರೆಂದರೇ ಇದು ಧಾರ್ಮಿಕ ಆಚರಣೆ ಅಲ್ಲ

ಕನ್ನಡಪ್ರಭ ವಾರ್ತೆ ಟಿ. ನರಸೀಪುರಯೋಗವೆಂದರೆ ಆಸನ–ಪ್ರಾಣಾಯಾಮಗಳಷ್ಟೇ ಅಲ್ಲದೆ, ಭಾರತವು ಸಾಕ್ಷಾತ್ಕರಿಸಿಕೊಂಡಿರುವ ಒಂದು ಜೀವನದೃಷ್ಟಿಯಾಗಿದೆ ಎಂದು ಮಾಜಿ ಶಾಸಕ ಎನ್. ಮಹೇಶ್ ಹೇಳಿದರು.ಪಟ್ಟಣದ ಪಿಆರ್.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಲಾ ಪದ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.ಯೋಗ ವಿಜ್ಞಾನವು ಕೇವಲ ಯಾವುದೋ ಒಂದು ಜಾತಿ, ಧರ್ಮಕ್ಕೆ ಮೀಸಲಾದುದ್ದಲ್ಲ, ಪ್ರಪಂಚದ ಎಲ್ಲ ಧರ್ಮೀಯರು ಯೋಗವನ್ನು ಒಪ್ಪಿಕೊಂಡಿದ್ದಾರೆಂದರೇ ಇದು ಧಾರ್ಮಿಕ ಆಚರಣೆ ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು. ಅಧ್ಯಕ್ಷತೆಯನ್ನು ಪಿಆರ್.ಎಂ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕೆ.ಎನ್. ಸೌಮ್ಯ ವಹಿಸಿದ್ದರು.ಮೂಗೂರಿನ ದೇಶೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಎಸ್. ಅಜಯ್ ಶಾಸ್ತ್ರಿ, ವಿಶ್ವ ಚೇತನ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ ಡಾ. ಸಿ.ಎಚ್. ಗುರುರಾಜರಾವ್, ಅಮೃತ ಯೋಗಿ ಅಂತರರಾಷ್ಟ್ರೀಯ ಯೋಗ ಪ್ರತಿಷ್ಠಾನದ ಅಧ್ಯಕ್ಷ ಅಮೃತ ಯೋಗಿ, ಸಮಾಜ ಸೇವಕ ಕೆ.ಎನ್. ಪ್ರಭುಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಪ್ರಕಾಶ್, ಕ್ಷೇತ್ರ ಬಿಜೆಪಿ ಅಧ್ಯಕ್ಷ ಸತ್ಯಪ್ಪ, ಕುಮಾರ್, ಯುವಿಕ್ ಜೋಶ್ ತಂಡದ ಸಂಚಾಲಕ ವಿ. ಶ್ರೀನಿವಾಸ್, ಕನ್ನಡ ಸಹಾಯಕ ಪ್ರಾಧ್ಯಾಪಕ ಎಂ. ನಾಗರಾಜು, ಉಪನ್ಯಾಸಕರಾದ ಎಸ್. ಸಿದ್ದೇಶ್, ಮಹಾದೇವಸ್ವಾಮಿ, ಹರೀಶ್, ಬಸವಣ್ಣ, ರಾಘವೇಂದ್ರ, ಸೋಮು, ದೈಹಿಕ ಶಿಕ್ಷಕ ಪ್ರಕಾಶ್ ಇದ್ದರು.--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ರಸ್ತೆ ಅತಿಕ್ರಮಣ ತೆರವು
ಔದ್ಯೋಗಿಕ ಕ್ಷೇತ್ರದಲ್ಲಿ ಕೌಶಲ್ಯಯುಕ್ತ ವ್ಯಕ್ತಿತ್ವ ಅಗತ್ಯ: ಶ್ರೀನಿವಾಸನ್ ವರದರಾಜನ್‌