ಗದಗ: ದಾರ್ಶನಿಕರು, ಋಷಿ-ಮುನಿಗಳು ಇನ್ನಿತರ ಪೂರ್ವಜರು ಹಲವು ವಿಧದ ಕೊಡುಗೆಗಳನ್ನು ನೀಡಿದ್ದಾರೆ. ಅವುಗಳಲ್ಲಿ ಯೋಗವು ಉತ್ಕೃಷ್ಟ ಕೊಡುಗೆಯಾಗಿದೆ ಎಂದು ಎಂದು ಹೈದರಾಬಾದ್ ಗುರು ಮಂದಿರದ ಶ್ರೀ ಶಿವಹಂಸಾರೂಢ ಪ್ರಭುಸ್ವಾಮಿಗಳು ಹೇಳಿದರು.
ತೋಂಟದಾರ್ಯ ಮಠದ ಶ್ರೀ ಮಹಾಂತದೇವರು ಮಾತನಾಡಿ, ಯೋಗದಲ್ಲಿ ಸಾಕಷ್ಟು ಪ್ರಕಾರಗಳಿವೆ. ಅವುಗಳಲ್ಲಿ ಶಿವಯೋಗ ಶ್ರೇಷ್ಠವಾಗಿದೆ. ಶಿವಯೋಗ ಸಾಧನೆಯಿಂದ ಶಿವನೊಲುಮೆ ಜತೆಗೆ ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಂತೃಪ್ತಿ, ಸಮೃದ್ಧಿಗಳನ್ನು ಪಡೆಯಲು ಸಾಧ್ಯವಾಗುವುದು ಎಂದು ತಿಳಿಸಿದರು.
ಡಾ. ದೀಪಾ ಮೂರಶಿಳ್ಳಿನ ಮಾತನಾಡಿ, ಇತ್ತೀಚೆಗೆ ಮಹಿಳೆಯರು ಹೆಚ್ಚು ಹೆಚ್ಚು ರೋಗ ರುಜಿನಗಳಿಗೆ, ಭಯ, ಆತಂಕ, ಅತ್ಯಾಚಾರಗಳಿಗೆ ಬಲಿಯಾಗುತ್ತಲಿದ್ದಾರೆ. ಇವೆಲ್ಲ ಸಮಸ್ಯೆಗಳ ನಿವಾರಣೆಗಾಗಿ ಅವರಲ್ಲಿ ದೈಹಿಕ, ಮಾನಸಿಕ ಶಕ್ತಿ ಹೆಚ್ಚಿಸಬೇಕಾಗಿದೆ. ಯೋಗವು ಈ ಕಾರ್ಯಕ್ಕೆ ಸಹಾಕಾರಿಯಾಗಿದೆ ಎಂದರು.ಜ. ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿದರು.
ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎಂ.ಎಸ್. ಶಿರಿಯಣ್ಣವರ, ನಿವೃತ್ತ ಎಂಜಿನಿಯರ್ ವಿ.ಎಚ್. ಪಾಟೀಲ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಸುನಂದಾ ಜ್ಯಾನೋಪಂತರ, ಡಾ. ಎಂ.ವಿ. ಐಹೊಳ್ಳಿ, ವಿ.ಎಂ. ಮುಂದಿನಮನಿ, ಯಶವಂತ ಮತ್ತೂರ, ಜಯಶ್ರೀ ದಾವಣಗೆರೆ, ಅರುಣಾ ಇಂಗಳಳ್ಳಿ, ಅಜಿತಾ ಶಿವಪ್ರಸಾದ, ಗೌರಿ ಜಿರಂಕಳಿ ಇದ್ದರು. ವಿಜಯಾ ಚನ್ನಶೆಟ್ಟಿ ಸ್ವಾಗತಿಸಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಕಾರ್ಯಕ್ರಮ ನಿರೂಪಿಸಿದರು.