ಮನಸ್ಸು, ದೇಹ, ಆತ್ಮದ ಸಮತೋಲನವೇ ಯೋಗ-ಸಿದ್ಧರಾಮ ಸ್ವಾಮೀಜಿ

KannadaprabhaNewsNetwork |  
Published : Jun 30, 2025, 12:34 AM IST
ಗದಗ ನಗರದ ತೋಂಟದಾರ್ಯ ಮಠದಲ್ಲಿ ನಡೆದ ಶಿವಾನುಭವ ಕಾರ್ಯಕ್ರಮದಲ್ಲಿ ಸೃಜನ್ ವೀರಬಸಪ್ಪ ಮುರಗಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭಾರತದ ಯೋಗ ಶಾಸ್ತ್ರವು ಜಗತ್ತಿಗೆ ವ್ಯಾಪಿಸಿದ್ದಲ್ಲದೆ, ಜಗತ್ತನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಿದೆ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ಗದಗ: ಭಾರತದ ಯೋಗ ಶಾಸ್ತ್ರವು ಜಗತ್ತಿಗೆ ವ್ಯಾಪಿಸಿದ್ದಲ್ಲದೆ, ಜಗತ್ತನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಿದೆ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2751ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, 2000 ವರ್ಷಗಳ ಹಿಂದೆ ಪತಂಜಲಿ ಯೋಗ ಸೂತ್ರವನ್ನು ಕೊಟ್ಟರು. ಮಾನವನ ಮನಸ್ಸು ದೇಹ ಮತ್ತು ಆತ್ಮದ ಸಮತೋಲನವನ್ನು ಯೋಗ ಮಾಡುತ್ತದೆ. ಭಾರತೀಯ ದರ್ಶನದಲ್ಲಿ ಯೋಗ ತುಂಬಾ ಮಹತ್ವದ್ದು. ಅಂಗ ಲಿಂಗ ಸಂಯೋಗವೇ ಯೋಗ. ಅಂಗವೇ ಆತ್ಮ. ಲಿಂಗವೇ ಪರಮಾತ್ಮ. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವನ್ನು ಪಡೆಯುವಂತದ್ದು ಯೋಗ ಎಂದರು.ಸಾಮರಸ್ಯದ ಕೆಲಸ ಯೋಗ ಮಾಡುತ್ತದೆ. ಯೋಗದ ಬೇರು ಭಾರತ. ಅತ್ಯಂತ ಹಳೆಯ ವಿಜ್ಞಾನದಲ್ಲಿ ಯೋಗವು ಒಂದು. ದೈಹಿಕ, ಮಾನಸಿಕ ಯೋಗಕ್ಷೇಮದೊಂದಿಗೆ ಆಧ್ಯಾತ್ಮಿಕ ವಿಕಸನ ಸಂರಕ್ಷಣೆಯಲ್ಲಿಯೂ ಯೋಗ ಉಪಯುಕ್ತವಾಗಿದೆ ಎಂದು ಹೇಳಿದರು.

ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಡಾ. ಚಂದ್ರಮೌಳಿ ನಾಯ್ಕರ ಮಾತನಾಡಿ, ಆರೋಗ್ಯ ಭಾಗ್ಯಕ್ಕೆ ಯೋಗ ಒಂದು ಸಾಧನ. ಅನೇಕ ಮಹಾತ್ಮರು ಯೋಗ, ತ್ಯಾಗ ಮತ್ತು ಸಾಧನೆ ಮಾಡಿದ್ದರಿಂದ ಅವರಿಗೆ ಗೌರವ ಕೊಡುತ್ತೇವೆ. ಮನೆಯಲ್ಲಿದ್ದುಕೊಂಡು ಯೋಗ ಮಾರ್ಗದಲ್ಲಿ ಇರುವುದು, ಒಳ್ಳೆಯದಾಗಲಿ ಎನ್ನುವುದೇ ಅಹಿಂಸಾ ಸಂಕಲ್ಪ. ಯೋಗ ಸಾಧನೆ ಮಾಡಿ ಹೆಸರುಳಿಯುವಂತೆ ಬದುಕಬೇಕು ಎಂದರು.

ಈ ವೇಳೆ ಡಾ. ಚಂದ್ರಮೌಳಿ ನಾಯ್ಕರ ಅವರ ಗೋರಕ್ಷ ಸಂಹಿತೆ ಹಾಗೂ ಯೋಗ ಬೀಜ ಪುಸ್ತಕ ಬಿಡುಗಡೆ ಮಾಡಲಾಯಿತು. ನೀಟ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್‌ ಪಡೆದ ಸೃಜನ್ ವೀರಬಸಪ್ಪ ಮುರಗಿ ಅವರನ್ನು ಸನ್ಮಾನಿಸಲಾಯಿತು.

ಯೋಗಾಚಾರ್ಯ ಕೆ.ಎಸ್. ಪಲ್ಲೇದ ನೇತೃತ್ವದಲ್ಲಿ ಎಸ್.ವೈ.ಬಿ.ಎಂ.ಎಸ್. ಯೋಗ ಪಾಠಶಾಲಾ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕವಾದ ಯೋಗಾಸನ ಪ್ರದರ್ಶನ ನಡೆಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರು ವಚನ ಸಂಗೀತ ಸೇವೆ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ವರ್ಷಾ ಆರ್. ಮಳಜಿ ಹಾಗೂ ವಚನ ಚಿಂತನವನ್ನು ಸಾನ್ವಿ ಆರ್. ಪಾಟೀಲ ನಡೆಸಿಕೊಟ್ಟರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು. ದಾಸೋಹ ಸೇವೆಯನ್ನು ಶರಣ ವೀರಬಸಪ್ಪ ಬಸಪ್ಪ ಮುರಗಿ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್