ಅಣ್ಣೀಗೆರೆ ಗ್ರಾಮದಲ್ಲಿ ಶರಣರ ಬೆಳದಿಂಗಳು, ವಿಶ್ವ ಯೋಗ ದಿನಾಚರಣೆ
ಕನ್ನಡಪ್ರಭ ವಾರ್ತೆ, ಕಡೂರುದ್ವೇಷ, ಅಸೂಯೆ ಮತ್ತು ಹೊಟ್ಟೆಕಿಚ್ಚಿನ ಭಾವನೆ ಮರೆಯಾಗಿ ಮಾನವೀಯತೆ ಕಹಳೆ ಎಲ್ಲೆಡೆ ಮೊಳಗಲಿ ಎಂಬ ಮಾತಿನ ಜೊತೆ ವಸುದೈವ ಕುಟುಂಬಕಂ ಮಂತ್ರ ಸಾರಿದ್ದು ಯೋಗ ಎಂದು ಶಿಕ್ಷಕ ಯಗಟಿ ಪ್ರಹ್ಲಾದ್ ಅಭಿಪ್ರಾಯಪಟ್ಟರು
ತಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಯಶಸ್ವಿನಿ ಯೋಗ ಸಂಸ್ಥೆ ಮತ್ತು ಅಣ್ಣಿಗೆರೆ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಮತ್ತು ವಿಶ್ವ ಯೋಗ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.2014ರ ಸೆ.27ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಸ್ತಾಪ ಮಾಡಿದಾಗ ಪ್ರಪಂಚದ ಬಹಳಷ್ಟು ರಾಷ್ಟ್ರಗಳು ಆಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರತಿ ವರ್ಷ ಜೂ. 21 ರಂದು ವಿಶ್ವಯೋಗ ದಿನಾಚರಣೆ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಲಾಯಿತು. ಮೊದಲ ವರ್ಷವೇ 192 ರಾಷ್ಟ್ರಗಳು 250 ನಗರಗಳಲ್ಲಿ 200 ಕೋಟಿಗೂ ಹೆಚ್ಚು ಜನರು ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಷಯ ಎಂದರು.
ಯೋಗದಿಂದ ದೇಹ ಮತ್ತು ಮನಸ್ಸನ್ನು ಸಮಚಿತ್ತದಲ್ಲಿಡುವ ಜೊತೆಗೆ ಆರೋಗ್ಯವಂತರಾಗಿರಲು ಸಹಕರಿಸುತ್ತದೆ. ಜೀವಾತ್ಮ ಮತ್ತು ಪರಮಾತ್ಮನ ಸಹಯೋಗವೇ ಯೋಗದ ಅಂತಿಮ ಗುರಿ. ಯೋಗದ ಅರ್ಥ ಸೇರಿಸುವುದು ಜೋಡಿಸುವುದು ಎಂದರ್ಥ. ಯೋಗ ಚಿತ್ತ ವೃತ್ತಿ ನಿರೋಧಕ ಎಂಬ ಅರ್ಥ ಅಡಗಿದೆ. ವಿಶ್ವದಲ್ಲಿ ಶಾಂತಿ ನೆಮ್ಮದಿ ಮತ್ತು ಸೌಹಾರ್ದತೆ ಕಾಪಾಡು ವುದು ಯೋಗ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಸಿಂಗಟಗೆರೆ ಶ್ರೀಕಲ್ಲೇಶ್ವರ ಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಕೆ. ನಾಗ ರಾಜಪ್ಪ ಮಾತನಾಡಿ ಅಣ್ಣಿಗೆರೆ ಗ್ರಾಮದಲ್ಲಿರುವ ಯಶಸ್ವಿನಿ ಯೋಗ ಸಂಸ್ಥೆ ಉಚಿತವಾಗಿ ಯೋಗದ ಬಗ್ಗೆ ಮಕ್ಕಳಿಂದ ವಯೋವೃದ್ಧರವರೆಗೆ ಅರಿವು ಮೂಡಿಸುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಬಸವಾದಿ ಶರಣರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿದ ತಾಲೂಕು ಕುಳುವ ಸಮಾಜದ ಅಧ್ಯಕ್ಷ ಎ. ಜಿ. ಗಿರೀಶ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯನು ಶಾಂತಿ ನೆಮ್ಮದಿಯಿಂದ ಬದುಕಲು ಯೋಗ ನಮಗೆ ಸಹಕಾರಿ. ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಸಮಾಜಕ್ಕೆ ಏನಾದರು ಕೊಡುಗೆ ಕೊಟ್ಟರೆ ಅದು ಸಾರ್ಥಕ ಎಂದು ಹೇಳಿದರು.ಯಳನಡು ಸಂಸ್ಥಾನದ ಶ್ರೀ ಜ್ಞಾನ ಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ದೊಡ್ಡ ಮಠ ಕೆ.ಬಿದರೆ ಶ್ರೀ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಐಎಫ್.ಎಸ್.ನಲ್ಲಿ 98 ನೇ ರ್ಯಾಂಕ್ ಗಳಿಸಿದ ಸೋಮನಹಳ್ಳಿ ವಿಶ್ವಾಸ್ ರನ್ನು ಅಭಿನಂದಿಸಲಾಯಿತು.
ಯಶಸ್ವಿನಿಯೋಗ ಸಂಸ್ಥೆ ಅಧ್ಯಕ್ಷ ಎ.ಎಂ.ಕುಮಾರಪ್ಪ ಯೋಗ ಗುರು ಬಿ.ಸಿ.ದೇವೇಂದ್ರಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ವಿರೂಪಾಕ್ಷ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆಮಲ್ಲಪ್ಪ, ಎ.ಆರ್. ಕಲ್ಲೇಗೌಡ್ರು, ಎ.ಎಂ. ಶಿವಕುಮಾರ್, ಕೆ.ಜಯಪ್ಪ, ಗ್ರಾಪಂ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷ ಎ.ಎಂ.ತಮ್ಮಯ್ಯ. ಕೆ.ಬಿ ಬಸವರಾಜಪ್ಪ ಯಗಟಿಪುರ ಪ್ರಸನ್ನ, ಎಸ್.ವಿ ಮರುಳಸಿದ್ದಪ್ಪ, ಗರ್ಜೆ ರಾಜಶೇಖರ, ಎ.ಎಂ.ವಸಂತಕುಮಾರ್, ಎಂ.ಆರ್ ಪ್ರಕಾಶ್, ಭಾಗ್ಯ ಕಲ್ಲೇಶ್, ಸಿ. ಜಿ. ಸುರೇಶ್ ಎಸ್. ಬಿ ರಾಜಣ್ಣ, ಆಶಾ ಪ್ರಭು ಚಟ್ನಳ್ಳಿ ರವಿ, ಎ ಟಿ. ಯತೀಶ್, ಮೋಹನ್ ಮತ್ತಿತರರು ಇದ್ದರು. 26ಕೆಕೆೆೆೆೆೆೆಡಿಯು1.ಕಡೂರು ತಾಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ನಡೆದ ಶರಣರ ಬೆಳದಿಂಗಳು ಮತ್ತು ವಿಶ್ವ ಯೋಗ ದಿನಾಚರಣೆಯಲ್ಲಿ ಐ.ಎಫ್.ಎಸ್.ನಲ್ಲಿ 98 ನೇ ರಾಂಕ್ ಗಳಿಸಿದ ಸೋಮನಹಳ್ಳಿ ವಿಶ್ವಾಸ್ ರನ್ನು ಗೌರವಿಿಸಲಾಯಿತು.