ಯೋಗ ಕೂಟದಿಂದ ಯೋಗ ತರಬೇತಿ

KannadaprabhaNewsNetwork |  
Published : Jun 18, 2025, 11:48 PM IST
18ಎಚ್ಎಸ್ಎನ್4 : ಹೊಳೆನರಸೀಪುರ ಯೋಗ ಭವನದಲ್ಲಿ, ಜೂನ್ ೨೧ ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಪತಂಜಲಿ ಯೋಗಕೂಟದ ವತಿಯಿಂದ ಹೊಸ ಸದಸ್ಯರಿಗೆ ಯೋಗ ಶಿಕ್ಷಕ ಗಣೇಶ್ ಬಾಬು ತರಬೇತಿ ನೀಡುತ್ತಿದ್ದಾರೆ. | Kannada Prabha

ಸಾರಾಂಶ

ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್ ಬಾಬು ಯೋಗಾಸನ ಹೇಳಿಕೊಡುವ ಜತೆಗೆ ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ. ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಯೋಗದ ಮಹತ್ಬ ತಿಳಿಸಿ, ಅರಿವು ಮೂಡಿಸುತ್ತಾರೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಪತಂಜಲಿ ಯೋಗ ಭವನದಲ್ಲಿ ಜೂನ್ ೨೧ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಭಾಗವಹಿಸಲು ಇಚ್ಛಿಸುವವರಿಗಾಗಿ ಯೋಗ ಕೂಟದ ವತಿಯಿಂದ ಯೋಗ ಭವನದಲ್ಲಿ ಉಚಿತ ಯೋಗಾಭ್ಯಾಸ, ಸೂರ್ಯ ನಮಸ್ಕಾರ ಹಾಗೂ ಪ್ರಾಣಾಯಾಮ ತರಬೇತಿ ನೀಡಲಾಗುತ್ತಿದೆ.

ಪತಂಜಲಿ ಯೋಗ ಕೂಟದ ಅನೇಕರು ಅತ್ಯುತ್ತಮ ಯೋಗ ಪಟುಗಳಿದ್ದು ಅವರ ಜೊತೆಯಲ್ಲಿ ಹೊಸಬರಿಗೂ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಯೋಗ ಶಿಕ್ಷಕ ಗಣೇಶ್ ಬಾಬು ಯೋಗಾಸನ ಹೇಳಿಕೊಡುವ ಜತೆಗೆ ಪ್ರತೀ ಆಸನ ಮಾಡುವಾಗಲೂ ಆ ಆಸನದಿಂದ ದೊರೆಯುವ ಪ್ರಯೋಜನಗಳ ಬಗ್ಗೆ ವಿವರಿಸುತ್ತಾರೆ. ಯೋಗಾಸನ ನಮ್ಮ ದೈಹಿಕ ಆರೋಗ್ಯ ಕಾಪಾಡಿ, ದೇಹವನ್ನು ರೋಗ ಮುಕ್ತವಾಗಿಸುತ್ತದೆ. ಪ್ರಾಣಾಯಾಮ ನಮ್ಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಧ್ಯಾನ ನಮ್ಮ ಮೆದುಳಿಗೆ ವಿಶ್ರಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ಯೋಗದ ಮಹತ್ಬ ತಿಳಿಸಿ, ಅರಿವು ಮೂಡಿಸುತ್ತಾರೆ.

ಪತಂಜಲಿ ಯೋಗಕೂಟದಲ್ಲಿ ೭೦ ವರ್ಷ ದಾಟಿದವರು ಅನೇಕರಿದ್ದಾರೆ. ಅವರು ಹಲವಾರು ವರ್ಷಗಳಿಂದ ಯೋಗ ಭವನದಲ್ಲಿ ಯೋಗಾಭ್ಯಾಸ ಮಾಡುತ್ತಾ, ಆರೋಗ್ಯ ಕಾಪಾಡಿಕೊಂಡು ಉತ್ತಮ ದೈಹಿಕ ಸಾಮಥ್ಯ ಹೊಂದಿದ್ದಾರೆ ಎಂದರು.

ಹಿರಿಯ ಯೋಗಪಟುಗಳಾದ ವಾಸುದೇವಮೂರ್ತಿ, ಲೋಕೇಶ್, ನರಸಿಂಹ, ನಾರಾಯಣ, ಕರುಣಾಕರ ಗುಪ್ತಾ, ಲಲಿತಾ ದಯಾನಂದ್, ಸುಮಾ, ಧನಲಕ್ಷ್ಮೀ ಅವರೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಅನೇಕರು ತರಬೇತಿ ಪಡೆಯುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ