ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ

KannadaprabhaNewsNetwork |  
Published : May 24, 2025, 12:51 AM IST
ಸಿಕೆಬಿ-6 ಯಲಹಂಕ ಬಳಿಯ ಹುಣಸಮಾರನಹಳ್ಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತಿರುವುದು | Kannada Prabha

ಸಾರಾಂಶ

ಜಿಪಂ, ತಾಪಂ ಚುನಾವಣೆ ಪೂರ್ವ ಸಿದ್ಧತಾ ಸಭೆಯ ನೆಪದಲ್ಲಿ ಈ ಸಭೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಕೆಲವರು ಹಣದ ಹಿಂದೆ ಬಿದ್ದಿದ್ದಾರೆ ಇದ್ಯಾವುದೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವ ಯಾರೊಬ್ಬರನ್ನು ನಾನು ಸಹಿಸುವುದಿಲ್ಲ, ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರೋಧ ಪಿತೂರಿ ಮಾಡುವವರು ಯಾರು ನಮಗೆ ಬೇಕಾಗಿಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸ್ವಪಕ್ಷದ ಭಿನ್ನರು ಶಾಸಕ ಪ್ರದೀಪ್ ಈಶ್ವರ್ ವಿರುಧ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ದೂರುತ್ತಿರುವ ಬೆನ್ನಲ್ಲಿಯೇ ಶಾಸಕ ಪ್ರದೀಪ್ ಈಶ್ವರ್ ಬೆಂಗಳೂರಿನ ಹುಣಸಮಾರನಹಳ್ಳಿಯಲ್ಲಿ ಸ್ವಪಕ್ಷದ ಆತ್ಮೀಯರ ಜೊತೆಗೂಡಿ ಸಭೆ ನಡೆಸಿ ಸ್ವಪಕ್ಷದ ಭಿನ್ನರಿಗೆ ಯಾವುದೇ ಚುನಾವಣೆ ನಡೆಯಲು ಹಣ ಒಂದೇ ಮಾನದಂಡ ಅಲ್ಲ ಎಂದು ಕಿವಿಮಾತು ಹೇಳಿದ್ದಾರೆ.

ಈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಹಣ ಒಂದರಿಂದಲೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಅದೇ ರೀತಿ ಹಣವನ್ನೇ ಮಾನದಂಡವಾಗಿಸಿಕೊಂಡು ವಿಧಾನಸಭೆ ಚುನಾವಣೆಯಲ್ಲಿ ನಾನು ಚುನಾವಣೆಯನ್ನ ಎದುರಿಸಿ ಗೆಲ್ಲಲಿಲ್ಲ. ಇದನ್ನು ಮೊದಲು ನೆನಪಿಟ್ಟುಕೊಳ್ಳಿ ಎಂದು ತಮ್ಮ ಎದುರಾಳಿಗಳಿಗೆ ಬಾಣ ಬಿಟ್ಟಿದ್ದಾರೆ.

ಪಕ್ಷದಲ್ಲಿದ್ದುಕೊಂಡೇ ಪಿತೂರಿ

ಜಿಪಂ, ತಾಪಂ ಚುನಾವಣೆ ಪೂರ್ವ ಸಿದ್ಧತಾ ಸಭೆಯ ನೆಪದಲ್ಲಿ ಈ ಸಭೆ ನಡೆದಿದೆ. ತಮ್ಮ ಕ್ಷೇತ್ರದಲ್ಲಿ ಕೆಲವರು ಹಣದ ಹಿಂದೆ ಬಿದ್ದಿದ್ದಾರೆ ಇದ್ಯಾವುದೂ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುವ ಯಾರೊಬ್ಬರನ್ನು ನಾನು ಸಹಿಸುವುದಿಲ್ಲ, ಪಕ್ಷದಲ್ಲಿ ಇದ್ದುಕೊಂಡೆ ಪಕ್ಷದ ವಿರೋಧ ಪಿತೂರಿ ಮಾಡುವವರು ಯಾರು ನಮಗೆ ಬೇಕಾಗಿಲ್ಲ. ನನಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದವರನ್ನು ಗೆಲ್ಲಿಸಿಕೊಂಡು ಬರುವುದು ಗೊತ್ತು ಎಂದು ಚಾಟಿ ಬಿಸಿದ್ದಾರೆ.

ರುವ ಅವರು ನಗರಸಭೆಯಲ್ಲಿ ಅಡ್ಡ ಮತದಾನ ಮಾಡಿದವರು ಸೇರಿದಂತೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ನಮ್ಮ ಪಕ್ಷದಲ್ಲಿ ಇರಲು ಅವಕಾಶ ಕೊಡುವುದಿಲ್ಲ. ಕೆಲವರು ಹಣಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ ಅಂತಹವರಿಂದ ಪಕ್ಷಕ್ಕೆ ಏನೂ ಲಾಭವಿಲ್ಲ. ಆದೆ ರೀತಿ ಹೊಂದಾಣಿಕೆ ರಾಜಕಾರಣ ಮಾಡುವವರು ಪಕ್ಷಕ್ಕೆ ಅವಶ್ಯಕತೆಯೂ ಇಲ್ಲ ಎಂದು ಬಿನ್ನರ ಬಗ್ಗೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

200ಕ್ಕೂ ಹೆಚ್ಚು ಮಂದಿ ಭಾಗಿ

ಭಿನ್ನರ ಪಡೆಯಲ್ಲಿ ಗುರುತಿಸಿಕೊಂಡಿರುವ ಮುಖಂಡರು ಸೇರಿದಂತೆ ಹಲವು ಪ್ರಮುಖ ಮುಖಂಡರು ಹುಣಸಮಾರನಹಳ್ಳಿಯಲ್ಲಿ ಕರೆದಿದ್ದ ಸಭೆಯಲ್ಲಿ ಕಾಣಿಸಲಿಲ್ಲ. ಸಭೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ಸಿಗರು, ಹೊಸದಾಗಿ ಸೇರ್ಪಡೆಯಾದವರೇ ಹೆಚ್ಚಾಗಿ ಕಾಣಿಸಿಕೊಂಡರು. ಸುಮಾರು 200ಕ್ಕೂ ಹೆಚ್ಚು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಈ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಎನ್. ಕೇಶವರೆಡ್ಡಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಮುಖಂಡರಾದ ಕೆ. ಎಂ.ಮುನೇಗೌಡ, ನಾರಾಯಣಸ್ವಾಮಿ, ಮತ್ತಿತರರು ಇದ್ದರು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ