ಯುವಕನಿಗೆ ಹಿಗ್ಗಾ ಮುಗ್ಗಾ ಥಳಿತ: ವಿಡಿಯೋ ವೈರಲ್‌

KannadaprabhaNewsNetwork |  
Published : Sep 10, 2025, 01:05 AM IST
ಜಮಖಂಡಿ ನಗರದ ಬಿಎಲ್‌ಡಿಇ ಕಾಲೇಜು ರಸ್ತೆ ಯಲ್ಲಿ ಯುವಕನನ್ನು ಥಳಿಸುತ್ತಿರುವದು.  | Kannada Prabha

ಸಾರಾಂಶ

ಯುವತಿಯನ್ನು ಚುಡಾಯಿಸಿದ ಎಂದು ಆರೋಪಿಸಿ ಯುವಕನನ್ನು ನಾಲ್ವರು ಜನರ ತಂಡ ರಿಂಗ್‌ ಪಾನಾ, ಕಬ್ಬಿಣದ ಸರಳು, ಕಲ್ಲುಗಳಿಂದ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದ್ದು, ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್‌ ಕೂಡ ಆಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ಯುವತಿಯನ್ನು ಚುಡಾಯಿಸಿದ ಎಂದು ಆರೋಪಿಸಿ ಯುವಕನನ್ನು ನಾಲ್ವರು ಜನರ ತಂಡ ರಿಂಗ್‌ ಪಾನಾ, ಕಬ್ಬಿಣದ ಸರಳು, ಕಲ್ಲುಗಳಿಂದ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದ್ದು, ಅದರ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್‌ ಕೂಡ ಆಗಿದೆ.

ಯುವಕ ತನ್ನನ್ನು ಹೊಡೆಯದೇ, ಬಿಟ್ಟುಬಿಡುವಂತೆ ಅಂಗಲಾಚಿದರೂ ನಾಲ್ವರು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಹುಲ್ಯಾಳ ಗ್ರಾಮದ ಶಂಭು ಪುಂಡಲೀಕ ಕೋರಿ (25) ಹಲ್ಲೆಗೊಳಗಾದ ಯುವಕ. ಕಂಕಣವಾಡಿ ಗ್ರಾಮದ ನರಸಿಂಹ ಬಸಪ್ಪ ಅತ್ತೆಪ್ಪನವರ, ಶ್ರೀಶೈಲ ಅತ್ತೆಪ್ಪನವರ, ಮಲ್ಲಪ್ಪ ಅತ್ತೆಪ್ಪನವರ, ಬಸು ಅತ್ತೆಪ್ಪನವರ ಹಲ್ಲೆ ನಡೆಸಿದವರು ಎಂದು ಹೇಳಲಾಗುತ್ತಿದೆ.

ಘಟನೆಯ ಹಿನ್ನೆಲೆ: ಹಲ್ಲೆಗೊಳಗಾದ ಶಂಭು ಎರಡು ವರ್ಷಗಳ ಹಿಂದೆ ಕಂಕಣವಾಡಿ ಗ್ರಾಮಕ್ಕೆ ಕಬ್ಬು ಕಡಿಯಲೆಂದು ಕೂಲಿ ಕೆಲಸಕ್ಕೆ ಹೋಗಿದ್ದ. ಆಗಿನಿಂದ ಕಂಕಣವಾಡಿ ಗ್ರಾಮದ ಯುವತಿಯ ಹಿಂದೆ ಬಿದ್ದು ಪೀಡಿಸುತ್ತಿದ್ದ ಎಂದು ಆರೋಪಿಸಿ ಯುವತಿಯ ಸಂಬಂಧಿಕರು ಭಾನುವಾರ ಜಮಖಂಡಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಭಾನುವಾರ ಶಂಭುನಿಗೆ ಕರೆ ಮಾಡಿದ ಆರೋಪಿಗಳು ಏಕೆ ಪೀಡಿಸುತ್ತಿದ್ದೀಯಾ ಎಂದು ಪ್ರಶ್ನಿಸಿ ಬೆದರಿಕೆ ಹಾಕಿದ್ದು, ನಾನು ಅಂತಹ ಕೆಲಸ ಮಾಡಿಲ್ಲ ಎಂದು ಶಂಭು ಉತ್ತರ ನೀಡಿದ್ದಾನೆ.

ನಮ್ಮ ಬಳಿ ದಾಖಲೆ ಇದ್ದು, ಗ್ರಾಮಕ್ಕೆ ಬರುವಂತೆ ಕರೆದಿದ್ದಾರೆ. ನಾನೀಗ ಜಮಖಂಡಿಯಲ್ಲಿ ಇದ್ದೇನೆಂದು ಶಂಭು ತಿಳಿಸಿದ್ದಾನೆ. ಕೂಡಲೇ ಆರೋಪಿಗಳು ಜಮಖಂಡಿಗೇ ಬಂದು ಏಕಾಏಕಿ ಮಾರಕಾಸ್ತ್ರಗಳಿಂದ ಥಳಿಸಲಾರಂಭಿಸಿದ್ದಾರೆ. ಸ್ಥಳದಲ್ಲಿದ್ದ ಸ್ಥಳೀಯರು ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕುರಿತು ಜಮಖಂಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ