ಕನ್ನಡಪ್ರಭ ವಾರ್ತೆ ಕೆಜಿಎಫ್ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿ ಸದೃಢ ಸಮಾಜ ನಿರ್ಮಿಸಲು ಅವರನ್ನು ಸಜ್ಜುಗೊಳಿಸುವುದೇ ರಾಷ್ಟ್ರೀಯ ಯುವದಿನ ಉದ್ದೇಶವಾಗಿದೆ ಎಂದು ೩ ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ತಿಳಿಸಿದರು.
ವಿವೇಕಾನಂದರ ವಾಣಿ
ಏಳಿ..ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕಾನಂದರ ವಾಣಿ ಸರ್ವ ಕಾಲಕ್ಕೂ ಯುವಕರನ್ನು ಒಳ್ಳೆಯ ಕೆಲಸಗಳಿಗೆ ಬಡಿದೆಚ್ಚರಿಸುವ ಧ್ಯೇಯವಾಖ್ಯದಂತಿದೆ. ವಿವೇಕಾನದರ ಆದರ್ಶ, ಕೊಡುಗೆ ಹಾಗೂ ಸೇವೆಗಳ ನೆನಪಿಗಾಗಿ ರಾಷ್ಟ್ರೀಯ ಯುವ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದರು.ಹಿರಿಯ ನ್ಯಾಯಾಧೀಶರಾದ ಮುಜಫರ್ ಎ ಮಜಾಂರಿ ಮಾತನಾಡಿ, ಜೀವನ ಎಂಬುದು ಕಠಿಣ ಸತ್ಯ, ಅದನ್ನು ಎದುರಿಸಿ, ನಿಮ್ಮ ಮಾರ್ಗದಲ್ಲಿ ಮುಂದುವರೆಯರಿ, ಅದು ಅಭೇದ್ಯವಾಗಿರುಬಹುದು, ಆದರೆ ಅತ್ಮ ಅದಕ್ಕಿಂತ ಬಲಯುತವಾದ್ದು ಎಂದು ಸದಾ ಯುವ ಶಕ್ತಿಯನ್ನು ಎಚ್ಚರಿಸಿ ದೇಶ ಕಟ್ಟುವಂತಹ ಕೆಲಸವನ್ನು ವಿವೇಕಾನಂದರು ಮಾಡಿದ್ದರು, ವಿವೇಕಾನಂದರ ಜನ್ಮ ದಿನವನ್ನು ಸರ್ಕಾರ ರಾಷ್ಟ್ರೀಯ ಯುವ ದಿನವನ್ನಾಗಿ ಆಚಿರುಸುತ್ತಿದೆ ಎಂದರು. ಯುವಕರಿಗೆ ವಿವೇಕರೇ ಆದರ್ಶಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿನೋದ್ಕುಮಾರ್ ಮಾತನಾಡಿ, ಸ್ವಾಮಿ ವಿವೇಕಾನಂದರು ಯುವಜನರಿಗೆ ಅದರ್ಶವೆಂದು ಪರಿಗಣಿಸಿದ್ದು, ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದಲ್ಲಿ ವಿಶೇಷವಾಗಿ ಯುವಕರಿಗೆ ಅನ್ವಯವಾಗುವ ಅಂಶಗಳಿದ್ದು, ಯುವಕರು ಸಮಾಜದಲ್ಲಿ ತಮ್ಮ ಸ್ಥಾನವನ್ನು ಕಂಡುಕೊಳ್ಳಬೇಕು, ಒಂದು ಅರ್ಥಪೂರ್ಣ ಸಮಾಜವನ್ನು ಕಟ್ಟಬೇಕಾದರೆ ಯುವ ಶಕ್ತಿಯನ್ನು ಒಂದುಗೂಡಿಸಬೇಕೆಂದು ತಿಳಿಸಿದ್ದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಸ್.ಎನ್.ರಾಜಗೋಪಾಲಗೌಡ, ಉಪಾಧ್ಯಕ್ಷರಾದ ಮಣಿವಣ್ಣನ್, ಬೇತಮಂಗಲ ವೃತ್ತ ನೀರಿಕ್ಷಕ ರಂಗಶಾಮಯ್ಯ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ, ಅರುಣಾ ಎಲ್ ಭಟ್, ರಾಷ್ಟ್ರೀಯ ಯುವ ದಿನಾಚರಣೆ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ಆಶ್ವಥ್ ನಿರ್ವಹಿಸಿದರು. ಶಿಕ್ಷಕರು ಹಾಗೂ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.