ಸೂಲಿಬೆಲೆ: ಭಾರತ ಬಲಿಷ್ಠ ದೇಶವಾಗಬೇಕಾದರೆ ಯುವ ಸಮುದಾಯ ದೇಶದ ಬಗ್ಗೆ ಚಿಂತಿಸಬೇಕು. ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಯುವಕರ ಪಾತ್ರ ಅವಶ್ಯ ಎಂದು ಸೂಲಿಬೆಲೆ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಶಂಕರಪ್ಪ ಹೇಳಿದರು.
ಮಾದಕ ವ್ಯಸನದಿಂದ ಸಮಾಜದಲ್ಲಿ ಆಶಾಂತಿ ನಿರ್ಮಾಣವಾಗುತ್ತದೆ. ಸಾರ್ವಜನಿಕ ಆಸ್ತಿಪಾಸ್ತಿ ನಾಶದಂತಹ ಪ್ರಕರಣಗಳು ದಾಖಲಾಗುತ್ತದೆ. ಇದರಿಂದ ಸಾಮಾಜಿಕ ಸ್ವಾಸ್ತ್ಯ ಹಾಗೂ ಯುವಜನತೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ದೇಶದ ಯುವ ಶಕ್ತಿ ಕ್ಷೀಣಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮದ್ಯಪಾನ, ರಸ್ತೆ ಸಾರಿಗೆ ನಿಯಮಗಳು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ, ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಕಾಲೇಜು ಪ್ರಾಚಾರ್ಯ ಸುಬ್ರಮಣಿ, ಸಹಾಯಕ ಇನ್ಸ್ಪೆಕ್ಟರ್ ನಟರಾಜ್, ಮೂರ್ತಿ, ಅಸ್ಕಿ, ಉಪನ್ಯಾಸಕರಾದ ಕುಮಾರ್, ರೇಷ್ಮಾ, ಶ್ರೀಕೃಪಾ, ನಾಗರಾಜ್, ಸರಸ್ವತಿ, ಶಿವಕುಮಾರ್, ರೂಪ, ಮುನಿಲಕ್ಷ್ಮಮ್ಮ ಇತರರಿದ್ದರು.
ಚಿತ್ರ; ೨೬ ಸೂಲಿಬೆಲೆ ೦೧ ಜೆಪಿಜೆ ನಲ್ಲಿದೆ