ಯುವ ಬ್ರಿಗೇಡ್ ವತಿಯಿಂದ ಕಪಿಲಾ ನದಿ ಸ್ವಚ್ಛತೆ

KannadaprabhaNewsNetwork |  
Published : Dec 15, 2025, 02:15 AM IST
57 | Kannada Prabha

ಸಾರಾಂಶ

ಸುಮಾರು 6 ಟಿಪ್ಪರ್ ನಷ್ಟು ತ್ಯಾಜ್ಯವನ್ನು ನದಿಯಿಂದ ಹೊರ

ಕನ್ನಡಪ್ರಭ ವಾರ್ತೆ ನಂಜನಗೂಡುನಗರದ ಯುವಾ ಬ್ರಿಗೇಡ್ ನ ಕಪಿಲಾ ನದಿ ಸ್ವಚ್ಛತೆ ಅಭಿಯಾನಕ್ಕೆ ಭಾನುವಾರ ಹಲವು ಸಂಘ ಸಂಸ್ಥೆಗಳ ನೂರಾರು ಯುವಕರು ಭಾಗಿಯಾಗಿ , ಶುಕ್ರವಾರದಿಂದ ಭಾನುವಾರದವರೆಗೆ ಮೂರು ದಿನಗಳ ನಡೆದ ನದಿ ಸ್ವಚ್ಚತಾ ಕಾರ್ಯ ಪೂರ್ಣಗೊಂಡಿತು. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಪಿಲಾ ನದಿಯ ಸ್ನಾನಘಟ್ಟದ ಸ್ವಚ್ಛತಾ ಕಾರ್ಯವನ್ನು ಯುವ ಬ್ರಿಗೇಡ್‌ ಕಾರ್ಯಕರ್ತರು , ಶ್ರೀಕಂಠೇಶ್ವರ ದೋಣಿ ಸಂಘ, ಧರ್ಮಸ್ಥಳ ಸಂಘ, ಎನ್ಐ ಕಾಲೇಜು ವಿದ್ಯಾರ್ಥಿಗಳು, ರೋಟರಿ, ಕೆಂಪೇಗೌಡ ಬಡವಾಣೆ ಯುವಕರು, ಕಪಿಲಾ ನದಿ ಸ್ವಚ್ಛತಾ ಅಭಿಯಾನದಲ್ಲಿ ಪಾಲುಗೊಂಡು ಕಪಿಲಾ ನದಿ ಹಾಗೂ ಸ್ನಾನಘಟ್ಟವನ್ನು ಸ್ವಚ್ಛಗೊಳಿಸಿದರು.ನೂರಾರು ಸಂಖ್ಯೆಯಲ್ಲಿ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಕೊಂಡ ಯುವಕರು ನದಿಯಲ್ಲಿ ಭಕ್ತರು ಬಿಟ್ಟಿದ್ದ ಬಟ್ಟೆ ಬರೆ, ಮಡಿಕೆ ಕುಡಿಕೆ, ಅಯ್ಯಪ್ಪನ ಮಾಲೆ, ದೇವರ ಫೋಟೋ, ಪ್ಲಾಸ್ಟಿಕ್ ಕವರ್, ಪೂಜಾ ತ್ಯಾಜ್ಯಗಳು ಸೇರಿದಂತೆ ಇನ್ನಿತರ ಸುಮಾರು 6 ಟಿಪ್ಪರ್ ನಷ್ಟು ತ್ಯಾಜ್ಯವನ್ನು ನದಿಯಿಂದ ಹೊರ ತೆಗೆದರು. ನದಿ ಸ್ವಚ್ಛಗೊಂಡಿದ್ದರಿಂದ ನದಿಯ ಹರಿವು ಸುಲಲಿತಗೊಳಿಸುವುದರ ಜೊತೆಗೆ ಭಕ್ತರಿಗೆ ನದಿಗೆ ಬಟ್ಟೆ, ಪೂಜಾ ತ್ಯಾಜ್ಯವನ್ನುವನ್ನು ಎಸೆಯದಂತೆ ಮನವಿ ಮಾಡಿ ಅರಿವು ಮೂಡಿಸಿದರು.ಸ್ವಚ್ಛತಾ ಅಭಿಯಾನಕ್ಕೆ ನಗರಸಭೆ ಟಿಪರ್ ಹಾಗೂ ಜೆಸಿಬಿ ನೀಡಿ ಕಸ ವಿಲೇವಾರಿಗೆ ಸಹಕರಿಸಿತು. ಸ್ವಚ್ಛತೆಯಲ್ಲಿ ಪಾಲ್ಗೊಂಡ ಯುವಕರಿಗೆ ಶ್ರೀಕಂಠೇಶ್ವರ ದೇವಾಲಯದಿಂದ ಊಟ -ತಿಂಡಿ ಸರಬರಾಜು ಮಾಡಲಾಗಿತ್ತು.ಸ್ವಚ್ಚತಾ ಅಭಿಯಾನದಲ್ಲಿ ಯುವಾ ಬ್ರಿಗೇಡ್ ರಾಜ್ಯ ಸಂಚಾಲಕ ಎಸ್. ಚಂದ್ರಶೇಖರ್, ತಾಲೂಕು ಸಂಚಾಲಕ ಚಂದನ್, ಸುನಿಲ್, ಗಿರೀಶ್, ರವಿಶಾಸ್ತ್ರಿ, ರವಿ, ಮಹದೇವ, ಪವನ್, ಸೂರಿ, ಪ್ರಜ್ವಲ್, ಚರಣ್, ಅರ್ಜುನ್, ಶಶಾಂಕ್, ನೀಲಕಂಠನಗರದ ಅನಂತ ಹಾಗೂ ದೋಣಿ ಸಂಘದ ಸುರೇಶ್, ರಂಗಸ್ವಾಮಿ, ಸುಬ್ಬಣ್ಣ, ಚಂದ್ರು, ಶ್ರೀಕಂಠ, ಧರ್ಮಸ್ಥಳದ ಸಂಘದ ಧರ್ಮರಾಜ್, ರೋಟರಿ ಮುರುಳಿ, ಕೆಂಪೇಗೌಡ ಬಡಾವಣೆಯ ರಾಘವೇಂದ್ರ, ಎನ್ಐಇ ಕಾಲೇಜಿನ ವಿದ್ಯಾರ್ಥಿಗಳಾದ ಸಂಜನ್, ಪವನ್, ರಮಿತ, ಯಾನ ಸೀತಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ