ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಉಕ್ಕಲಿ ಮತ್ತು ಇಂಗಳೇಶ್ವರ ಗ್ರಾಮ ಪಂಚಾಯತಿಯಲ್ಲಿ ಲೇಬರ್ ಎಂಗೇಜ್ ಗೂ ಮತ್ತು ಎನ್ಎಂಎಂಎಸ್ ಹಾಜರಾತಿ ಪ್ರಕಾರ ಕೂಲಿಕಾರರ ಹಾಜರಾತಿ ತಾಳೆ ಮಾಡಿ ಕಾಮಗಾರಿ ಸ್ಥಳದಲ್ಲಿ ಕೂಲಿಕಾರ್ಮಿಕರು ಕಡಿಮೆ ಇರುವುದನ್ನು ಪರಿಶೀಲಿಸಿ ಮುಂದಿನ ದಿನದಲ್ಲಿ ಕೂಲಿಕಾರರ ಸಂಖ್ಯೆ ಹೆಚ್ಚಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿದಿನ ಎನ್ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಗ್ರಾಪಂ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಮುಂದಿನ ದಿನಗಳಲ್ಲಿ ಗರಿಷ್ಠ 200 ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ತಿಳಿಸಿದರು.ಉಕ್ಕಲಿ ಗ್ರಾಪಂ ವ್ಯಾಪ್ತಿಯ ಪರಮಾನಂದ ಕೆರೆಯಲ್ಲಿ ಕೂಲಿಕಾರರಿಗೆ ಅಳತೆಯಲ್ಲಿ 50*50 ಮಾಪನದಲ್ಲಿ ಕೆಲಸ ನೀಡಿ ನಡುವೆ ಸಾಕ್ಷಿಗುಡ್ಡದ ತೆರನಾಗಿ ಕಾಮಗಾರಿ ಹಮ್ಮಿಕೊಂಡು ಕೆಲಸ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು. ಎನ್.ಎಂ.ಆರ್. ಮುಗಿದ 15 ದಿನಗಳಲ್ಲಿ ಕೂಲಿಮೊತ್ತ ಜಮಾ ಆಗಲಿದೆ ಎಂದು ಕೂಲಿಕಾರರಿಗೆ ಭರವಸೆ ನೀಡಿದರು.
ಕೂಲಿಕಾರರೊಂದಿಗೆ ಸಂವಾದ ನಡೆಸಿದ ಉಪ ಕಾರ್ಯದರ್ಶಿಗಳು ವಿಬಿಜಿ–ರಾಮ್ ಜಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ಕೆಲಸಕ್ಕೆ ಎಷ್ಟು ಮಂದಿ ಬಂದರೂ ಸಹ 125 ದಿನಗಳವರೆಗೆ ಉದ್ಯೋಗ ಒದಗಿಸುವ ವ್ಯವಸ್ಥೆ ಇದೆ ಎಂದು ತಿಳಿಸಿ, ಕೂಲಿಕಾರರು ನಿರಂತರವಾಗಿ ಕೆಲಸಕ್ಕೆ ಹಾಜರಾಗುವಂತೆ ಮನವರಿಕೆ ಮಾಡಿಕೊಟ್ಟರು. ಯೋಜನೆ ಪ್ರಾರಂಭದ ಹಂತದಲ್ಲಿರುವುದರಿಂದ ವೇತನ ಜಮೆಯಾಗುವಲ್ಲಿ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದ್ದರೂ, ಅದಕ್ಕಾಗಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಬಾರದು ಎಂದು ತಿಳಿಸಿದ ಅವರು, ತಮ್ಮ ಮಕ್ಕಳನ್ನು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿಸಿ ಭವಿಷ್ಯ ರೂಪಿಸುವಂತೆ ಕೂಲಿಕಾರರಿಗೆ ಸಲಹೆ ನೀಡಿದರು.ಕಾಮಗಾರಿ ಸ್ಥಳದಲ್ಲಿ ಜಾಬ್ಕಾರ್ಡ್ ಸಮಸ್ಯೆ ಇದ್ದವರ ವರದಿ ಸಿದ್ಧಪಡಿಸಿ ಜಿಪಂಗೆ ಕಳಿಸುವಂತೆ ಗಣಕಯಂತ್ರ ನಿರ್ವಾಹಕರಿಗೆ ಸೂಚನೆ ನೀಡಿದರು. ಜಾಬ್ ಕಾರ್ಡ್ ಮೇಳವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಂಡು ಜಾಬ್ಕಾರ್ಡ್ ನ್ನು ಕೂಲಿಕಾರರಿಗೆ ಒದಗಿಸಿ ಹೆಚ್ಚಿನ ಉದ್ಯೋಗ ಕಲ್ಪಿಸಿಕೊಡುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ನಮೂನೆ–6ರಲ್ಲಿ ಕೆಲಸದ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬರಿಗೂ ಉದ್ಯೋಗ ಒದಗಿಸಲಾಗುವುದು ಎಂದು ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ ಕೂಲಿಕಾರರಿಗೆ ಭರವಸೆ ನೀಡಿದರು.