ಉಕ್ರೇನ್‌ನಿಂದ ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳು ನೀಡಿದ ಹಣದಿಂದ ಚುನಾವಣಾ ಠೇವಣಿ!

KannadaprabhaNewsNetwork |  
Published : Mar 31, 2024, 02:05 AM ISTUpdated : Mar 31, 2024, 06:14 AM IST
ಸಚಿವ ವಿ ಮುರಳೀಧರನ್‌ ಅವರಿಗೆ  ವಿದ್ಯಾರ್ಥಿಗಳು ಠೇವಣಿ ಸಲ್ಲಿಸಲು 25 ಸಾವಿರ ರು. ದೇಣಿಗೆ ನೀಡಿದರು. | Kannada Prabha

ಸಾರಾಂಶ

ಉಕ್ರೇನ್‌ ರಾಷ್ಟ್ರದಿಂದ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದ ವಿದ್ಯಾರ್ಥಿಗಳ ತಂಡವು ಸಚಿವ ವಿ ಮುರಳೀಧರನ್‌ ಅವರಿಗೆ ನಾಮಪತ್ರಕ್ಕೆ ಭದ್ರತಾ ಠೇವಣಿ ಸಲ್ಲಿಸಲು 25 ಸಾವಿರ ರು. ದೇಣಿಗೆ ನೀಡಿದರು.

ಅತ್ತಿಂಗಲ್‌(ಕೇರಳ): ಯುದ್ಧಪೀಡಿತ ಉಕ್ರೇನ್‌ ರಾಷ್ಟ್ರದಿಂದ ಆಪರೇಷನ್‌ ಗಂಗಾ ಯೋಜನೆಯ ಭಾಗವಾಗಿ ಭಾರತಕ್ಕೆ ಸುರಕ್ಷಿತವಾಗಿ ಮರಳಿ ಬಂದಿದ್ದ ವಿದ್ಯಾರ್ಥಿಗಳ ತಂಡವು ಕೃತಜ್ಞತಾ ಪೂರ್ವಕವಾಗಿ ವಿದೇಶಾಂಗ ಖಾತೆ ಸಹಾಯಕ ಸಚಿವ ವಿ ಮುರಳೀಧರನ್‌ ಅವರಿಗೆ ನಾಮಪತ್ರಕ್ಕೆ ಭದ್ರತಾ ಠೇವಣಿ ಸಲ್ಲಿಸಲು 25 ಸಾವಿರ ರು. ದೇಣಿಗೆ ನೀಡಿದೆ.

ಈ ಹಣವನ್ನು ಉಕ್ರೇನ್‌ ವಿದ್ಯಾರ್ಥಿಗಳಾದ ಸೌರವ್‌ ಮತ್ತು ಸಾಯಿಶೃತಿ ನೇತೃತ್ವದಲ್ಲಿ ಸಂಗ್ರಹಿಸಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ದೇಣಿಗೆ ನೀಡಿದ್ದಾರೆ. ಇದಕ್ಕೆ ಮುರಳೀಧರನ್‌ ಧನ್ಯವಾದ ಅರ್ಪಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮತಚೋರಿ ಹೆಸರಲ್ಲಿ ಸುಳ್ಳು ಪ್ರಚಾರ ತಪ್ಪು: ದೇವೇಗೌಡ
ದೆಹಲಿಯಲ್ಲೂ ಸಿದ್ದು ಸಿದ್ದು, ಡಿಕೆ ಡಿಕೆ ಸದ್ದು