ಮಂಡ್ಯ:
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಚಲುವರಾಯಸ್ವಾಮಿ ಅವರಿಗೆ ಸಚಿವ ಸ್ಥಾನ ಸಿಗಬಹುದು. ಜೊತೆಗೆ ರಮೇಶ್ ಬಾಬು ಅವರು ಕೂಡ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ. ದಲಿತ ಕೋಟಾದಲ್ಲಿ ನರೇಂದ್ರಸ್ವಾಮಿ ಕೇಳ್ತಿದ್ದಾರೆ. ಚಲುವರಾಯಸ್ವಾಮಿ ಸಚಿವರಾಗೋ ಚಾನ್ಸ್ ಜಾಸ್ತಿ ಇದೆ ಎಂದರು.
ನಾನು ಮಂತ್ರಿಗಿರಿ ಬೇಡ ಅಂತ ಹೇಳಿದ್ದೇನೆ. ಬೇರೆ ಯಾರಿಗಾದರೂ ಸಚಿವ ಸ್ಥಾನ ಕೊಡಲಿ. ಈ ಹಿಂದೆ ಮಂತ್ರಿ ಆಗದವರಿಗೆ ಅವಕಾಶ ಕೊಡಲಿ. ನನಗೆ ಈ ಎರಡೂ ವರ್ಷ ಮಂತ್ರಿ ಆಗೋಕೆ ಇಷ್ಟ ಇಲ್ಲ. ತಾಲೂಕು ಅಭಿವೃದ್ಧಿ ಮಾಡಬೇಕು, ಸಾಕಷ್ಟು ಕೆಲಸ ಇದೆ. ಮಂತ್ರಿಯಾಗಿ ರಾಜ್ಯ ಸುತ್ತಕ್ಕಾಗಲ್ಲ, ಕ್ಷೇತ್ರ ಅಭಿವೃದ್ಧಿ ಮುಖ್ಯ ಎಂದರು.ಐವರು ಹೊಸಬರಿಗೆ ಮಂತ್ರಿ ಕೊಡಿ ಅಂತ ಕೇಳಿದ್ದೇವೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿಎಂಗೆ ಹೊಸಬರ ಕಷ್ಟ ಏನು ಅಂತ ಗೊತ್ತಿದೆ. ಅವಕಾಶ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ಜನಸಂಖ್ಯೆ ಜಾಸ್ತಿಯಾಗಿದೆ. ಉದ್ಯೋಗ ಕಡಿಮೆ ದುಡ್ಡು ಕೊಟ್ಟು ಕೆಲಸ ಪಡೆಯೋಣ ಎನ್ನುವಂತಾಗಿದೆ. ಈ ಬಗ್ಗೆ ಜನರು ಬದಲಾಗಬೇಕು. ಎಕ್ಸಾಂ ಬರೆದು ಮೆರಿಟ್ ಮೇಲೆ ಕೆಲಸ ತೆಗೆದುಕೊಳ್ಳಬೇಕು. ಈ ಹಗರಣದ ಬಗ್ಗೆ ಪಾಸ್ಟ್ ಟ್ರಾಕ್ ಕೋರ್ಟ್ ನಲ್ಲಿ ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾದರೆ ಇನ್ನೊಂದು ಬಾರಿ ಈ ರೀತಿ ಹಗರಣ ಆಗಲ್ಲ ಎಂದು ತಿಳಿಸಿದರು.