ಅಧ್ಯಕ್ಷ ಸ್ಥಾನ ಕುರಿತು ನಾನೊಬ್ಬನೇ ನಿರ್ಧರಿಸಲಾಗಲ್ಲ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

Published : Feb 13, 2025, 11:53 AM IST
satish jarkiholi

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಹಿಂದ ವರ್ಗಕ್ಕೆ ನೀಡುವ ವಿಷಯವನ್ನು ಎಲ್ಲರೂ ಸೇರಿ ಚರ್ಚಿಸಬೇಕಾಗುತ್ತದೆ, ನಮ್ಮನ್ನು ಕೇಳಿದಾಗ ಆ ಬಗ್ಗೆ ಚರ್ಚಿಸುತ್ತೇವೆ, ಈ ವಿಚಾರ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

 ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಹಿಂದ ವರ್ಗಕ್ಕೆ ನೀಡುವ ವಿಷಯವನ್ನು ಎಲ್ಲರೂ ಸೇರಿ ಚರ್ಚಿಸಬೇಕಾಗುತ್ತದೆ, ನಮ್ಮನ್ನು ಕೇಳಿದಾಗ ಆ ಬಗ್ಗೆ ಚರ್ಚಿಸುತ್ತೇವೆ, ಈ ವಿಚಾರ ಹೈಕಮಾಂಡ್ ಹಂತದಲ್ಲಿ ಚರ್ಚೆಯಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಯಾರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂಬುದನ್ನು ತಾವೊಬ್ಬರೇ ನಿರ್ಧರಿಸಲು ಆಗಲ್ಲ, ಸದ್ಯ ನಮ್ಮ ಹಂತದಲ್ಲಿ ಯಾವ ಚರ್ಚೆಯೂ ಆಗಿಲ್ಲ. ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರನ್ನು ಕರೆದು ಕೇಳುತ್ತಾರೆ. ನಮ್ಮನ್ನು ಕೇಳಿದಾಗ ಆಗ ಹೇಳುತ್ತೇವೆ, ಹಾಗಾಗಿ ಈಗ ಚರ್ಚೆ ಅನಾವಶ್ಯಕ ಎಂದರು.

ದಲಿತ ಸಮಾವೇಶ ಸದ್ಯಕ್ಕೆ ಯಾವುದೂ ಇಲ್ಲ, ಸಮಾವೇಶ ನಡೆಸಬೇಕಾದರೆ ಪಕ್ಷದ ಅಡಿ ಚರ್ಚಿಸಿ ಎಲ್ಲಿ, ಯಾವಾಗ ಮಾಡಬೇಕೆಂದು ನಿರ್ಧರಿಸಬೇಕಾಗುತ್ತದೆ. ದಲಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಸಚಿವರ ಸಭೆ ಕರೆಯಬೇಕೆಂದೇನೂ ಇಲ್ಲ. ಫೋನ್‌ನಲ್ಲಿ, ಊಟ, ವಿಮಾನದಲ್ಲಿ ಪ್ರಯಾಣಿಸುವಾಗ ಸಹ ಚರ್ಚಿಸಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ
‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'