ಸಂತೋಷ್‌ ಟ್ರೋಫಿ ಫುಟ್ಬಾಲ್‌: ರಾಜ್ಯದ ಕ್ವಾರ್ಟರ್‌ ಫೈನಲ್‌ ಕನಸು ಭಗ್ನ!

KannadaprabhaNewsNetwork |  
Published : Mar 01, 2024, 02:21 AM IST
ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯ ರೈಲ್ವೇಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಸೋಲುಂಡ ಕರ್ನಾಟಕ ತಂಡ.  | Kannada Prabha

ಸಾರಾಂಶ

ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಕರ್ನಾಟಕ ತಂಡಕ್ಕೆ ಮರೀಚಿಕೆಯಾದ ಜಯ. ರೈಲ್ವೇಸ್‌ ವಿರುದ್ಧ 0-1 ಗೋಲಿನ ಸೋಲು. ಕ್ವಾರ್ಟರ್‌ ಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದ ಹಾಲಿ ಚಾಂಪಿಯನ್‌ ತಂಡ.

ಯೂಪಿಯಾ (ಅರುಣಾಚಲಪ್ರದೇಶ): 77ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಹಾಲಿ ಚಾಂಪಿಯನ್‌ ಕರ್ನಾಟಕದ ಕನಸು ಬಹುತೇಕ ಭಗ್ನಗೊಂಡಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಪರಾಭವಗೊಂಡ ಕರ್ನಾಟಕ ತಂಡ ಭಾರಿ ನಿರಾಸೆ ಅನುಭವಿಸಿದೆ.

ಗುರುವಾರ ರೈಲ್ವೇಸ್‌ ವಿರುದ್ಧದ ಪಂದ್ಯದಲ್ಲಿ ಕರ್ನಾಟಕಕ್ಕೆ 0-1 ಸೋಲು ಎದುರಾಯಿತು. 53ನೇ ನಿಮಿಷದಲ್ಲಿ ಸುಬ್ರತಾ ಮುರ್ಮು ಬಾರಿಸಿದ ಗೋಲು, ರೈಲ್ವೇಸ್‌ ಪಾಲಿಗೆ ಗೆಲುವಿನ ಗೋಲಾಯಿತು.

ರಾಜ್ಯ ತಂಡಕ್ಕೆ ಸತತ 2ನೇ ಸೋಲು ಎದುರಾಗಿದ್ದು, 4 ಪಂದ್ಯಗಳಲ್ಲಿ 2 ಸೋಲು, 2 ಡ್ರಾದೊಂದಿಗೆ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲೇ ಬಾಕಿಯಾಗಿದೆ.

ಫೈನಲ್‌ ಸುತ್ತಿನ ಗುಂಪು ಹಂತದಲ್ಲಿ ರಾಜ್ಯಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಶನಿವಾರ ಮಹಾರಾಷ್ಟ್ರ ಸವಾಲು ಎದುರಾಗಲಿದೆ.

ಕಳೆದ ವರ್ಷ ಚಾಂಪಿಯನ್‌ ಪಟ್ಟಕ್ಕೇರಿದ್ದ ಕರ್ನಾಟಕದಿಂದ ಈ ಬಾರಿ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅಟ್ಯಾಕ್‌ ಹಾಗೂ ಡಿಫೆನ್ಸ್‌ ಎರಡರಲ್ಲೂ ರಾಜ್ಯ ತಂಡದ ಆಟ ಸಪ್ಪೆ ಎನಿಸುತ್ತಿದೆ. ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯೂ ರಾಜ್ಯ ತಂಡವನ್ನು ಬಲವಾಗಿ ಕಾಡುತ್ತಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

103 ಡಿಗ್ರಿ ಜ್ವರದಲ್ಲೂ ಡಬ್ಲ್ಯುಪಿಎಲ್‌ ಫೈನಲ್‌ ಆಡಿದ ಸ್ಮೃತಿ ಮಂಧನಾ!
ಆರ್‌ಸಿಬಿಯ ಮುಕುಟಕ್ಕೆ ಹ್ಯಾಟ್ರಿಕ್‌ ಕಿರೀಟ!